Vijay Devarakonda: ಮೊದಲ ಫಿಲ್ಮ್ ಫೇರ್ ಪ್ರಶಸ್ತಿಯನ್ನು ಹರಾಜು ಹಾಕಿದ ಫ್ಯಾಮಿಲಿ ಸ್ಟಾರ್:‌ ಕಾರಣವೇನು ಗೊತ್ತೇ?

Vijay Devarakonda Auctioned Award: ತೆಲುಗು ಸ್ಟಾರ್‌ ನಟ ವಿಜಯ್‌ ದೇವರಕೊಂಡ ಸಂದರ್ಶನವೊಂದರಲ್ಲಿ ತಮ್ಮ ಮೊದಲ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಹರಾಜು ಹಾಕಿದ್ದರು ಎಂದು ಹೇಳಿದ್ದಾರೆ. ಹಾಗಿದ್ರೆ ಈ ನಟ ಪ್ರಶಸ್ತಿಯನ್ನು ಹರಾಜು ಹಾಕಿದ್ದೇಕೆ? ಇದರ ಕುರಿತು ಮಾಹಿತಿ ಇಲ್ಲಿದೆ.  

Written by - Zee Kannada News Desk | Last Updated : Apr 2, 2024, 09:05 PM IST
  • ನಟ ವಿಜಯ್‌ ದೇವರಕೊಂಡ ತಮ್ಮ ಮೊದಲ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಉದಾತ್ತ ಉದ್ದೇಶಕ್ಕಾಗಿ ಈ ಹರಾಜು ಹಾಕಿದ್ದರು ಎಂದು ಹೇಳಿಕೊಂಡಿದ್ದಾರೆ.
  • ಅರ್ಜುನ್‌ ರೆಡ್ಡಿ ಸಿನಿಮಾದಲ್ಲಿ ನಟಿಸಿದಕ್ಕಾಗಿ ವಿಜಯ್‌ ದೇವರಕೊಂಡಗೆ ಅತ್ಯುತ್ತಮ ನಟ ಕ್ಯಾಟಗರಿಯಲ್ಲಿ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.
  • ಪ್ರಶಸ್ತಿಯನ್ನು ಹರಾಜು ಹಾಕುವುದಕ್ಕೆ ಈ ನಟ ಕಾರ್ಯಕ್ರಮವೊಂದು ಆಯೋಜಿಸಿ ಬಳಿಕ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.
Vijay Devarakonda: ಮೊದಲ ಫಿಲ್ಮ್ ಫೇರ್ ಪ್ರಶಸ್ತಿಯನ್ನು ಹರಾಜು ಹಾಕಿದ ಫ್ಯಾಮಿಲಿ ಸ್ಟಾರ್:‌ ಕಾರಣವೇನು ಗೊತ್ತೇ? title=

Vijay Devarakonda Auctioned First Filmfare Award: ಟಾಲಿವುಡ್‌ ಸ್ಟಾರ್‌ ನಟ ವಿಜಯ್‌ ದೇವರಕೊಂಡ ಫ್ಯಾಮಿಲಿನ ಸ್ಟಾರ್ ಚಿತ್ರದ ಪ್ರಚಾರದಲ್ಲಿ ಭಾಗವಾಗಿ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದರು. ಆ ಸಂದರ್ಭದಲ್ಲಿ ಈ ನಟ ತಮ್ಮ ಮೊದಲ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಉದಾತ್ತ ಉದ್ದೇಶಕ್ಕಾಗಿ ಈ ಹರಾಜು ಹಾಕಿದ್ದರು ಎಂದು ಹೇಳಿಕೊಂಡಿದ್ದಾರೆ. 

ನಟ ವಿಜಯ್‌ ದೇವರಕೊಂಡು 2017 ರಲ್ಲಿ ಸಂದೀಪ್‌ ರೆಡ್ಡಿ ವಂಗಾ ನಿರ್ದೇಶನದ ಅರ್ಜುನ್‌ ರೆಡ್ಡಿ ಸಿನಿಮಾದಲ್ಲಿ ಅಭಿನಯಿಸಿದ್ದರು. ಈ ಚಿತ್ರದಿಂದ ಈ ನಟನ ಜೀವನ ಕೂಡ ಬದಲಾಯಿತು. ಅರ್ಜುನ್‌ ರೆಡ್ಡಿ ಸಿನಿಮಾದಲ್ಲಿ ನಟಿಸಿದಕ್ಕಾಗಿ ವಿಜಯ್‌ ದೇವರಕೊಂಡಗೆ ಅತ್ಯುತ್ತಮ ನಟ ಕ್ಯಾಟಗರಿಯಲ್ಲಿ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಬಳಿಕ ಇದನ್ನು ಹರಾಜು ಹಾಕಿದರು.

ಇದನ್ನೂ ಓದಿ: ಟ್ರೇಲರ್’ನಲ್ಲೇ ಕುತೂಹಲ ಮೂಡಿಸಿದ ‘ಅವತಾರ ಪುರುಷ 2’: ಬಹುನಿರೀಕ್ಷಿತ ಸಿನಿಮಾ ಏ.5ರಂದು ತೆರೆಗೆ

ಸಂದರ್ಶನವೊಂದರಲ್ಲಿ ಪ್ರಶಸ್ತಿ ಹಾರಾಜು ಹಾಕಿದ ಬಗ್ಗೆ ಮಾತನಾಡಿದ ವಿಜಯ್‌ ದೇವರಕೊಂಡ " ನನಗೆ ಪ್ರಶಸ್ತಿಗಳು ಅಂದ್ರೆ ಇಷ್ಟವಿಲ್ಲ. ಹೀಗಾಗಿ ಬಂದ ಪ್ರಶಸ್ತಿಯನ್ನ ಹರಾಜು ಹಾಕಿದ್ದೇನೆ. 2019ರಲ್ಲಿ ಫಿಲ್ಮ್​ ಫೇರ್ ಪ್ರಶಸ್ತಿಗೆ 5 ಲಕ್ಷ ರೂಪಾಯಿ ಸಾಕು ಎಂದು ಆನ್‌ಲೈನ್​ ನಲ್ಲಿ ಹರಾಜು ಹಾಕಿದೆ. ಆದರೆ ಶ್ಯಾಮಲಾದೇವಿ ಅವರು 25 ಲಕ್ಷ ರೂಪಾಯಿ ಕೊಟ್ಟು ಆ ಪ್ರಶಸ್ತಿ ಪಡೆದರು." ಎಂದು ಹೇಳಿದ್ದಾರೆ. 

ವಿಜಯ್‌ ದೇವಕೊಂಡ 2019 ಪ್ರಶಸ್ತಿಯನ್ನು ಹರಾಜು ಹಾಕಿದ ತದನಂತರ ಆ ಹಣವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗಾಗಿ ಹಣವನ್ನು ನೀಡಿದ್ದಾರೆ. ಪ್ರಶಸ್ತಿಯನ್ನು ಹರಾಜು ಹಾಕುವುದಕ್ಕೆ ಈ ನಟ ಕಾರ್ಯಕ್ರಮವೊಂದು ಆಯೋಜಿಸಿ ಬಳಿಕ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ನಂತರ ಮುಖ್ಯಮಂತ್ರಿ ನಿಧಿಗೆ 25 ಲಕ್ಷ ರೂ. ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News