ರಾಕಿಂಗ್ ಸ್ಟಾರ್ ಯಶ್ ಡೈರೆಕ್ಷನ್ ಮಾಡಲ್ವಾ ನರ್ತನ್!

ಮೊದಲ ಚಿತ್ರದಲ್ಲೇ ಯಾರೂ ಊಹಿಸದಂತೆ ಮೇಕಿಂಗ್​ ಮಾಡಿ ಮಲ್ಟಿ ಸ್ಟಾರ್​ಗಳ ಸಿನಿಮಾ ಮಾಡಿ, ಮೋಡಿ ಮಾಡಿದ್ದ ನರ್ತನ್​ ರಾಕಿಂಗ್​ ಸ್ಟಾರ್​ಗಾಗಿ ನಾಲ್ಕು ವರ್ಷ ಮೀಸಲಿಟ್ಟು ಕತೆ ಹೆಣೆದಿದ್ರು.. ಅದ್ರೆ ಅದ್ಯಾಕೋ ಗೊತ್ತಿಲ್ಲ ರಾಕಿಭಾಯ್​ಗೆ ನರ್ತನ್ ಕಥೆ ಒಕೆ ಆಗದೆ ಲಾಸ್ಟ್​ ಮೂಮೆಂಟ್​ನಲ್ಲಿ ಯಶ್​ ಪ್ರಾಜೆಕ್ಟ್​ ನರ್ತನ್​​ ಕೈನಿಂದ ಜಾರಿಹೋಗಿದೆ.

Written by - Yashaswini V | Last Updated : Sep 28, 2022, 12:17 PM IST
  • ಯಶ್​ಗಾಗಿ ಕಂಡಿದ್ದ ಕನಸ್ಸು ಕನಸಾಗೆ ಉಳಿಸಿರುವ ನರ್ತನ್​ ತೆಲುಗು ಸಿನಿಮಾರಂಗದಲ್ಲಿ ಸಿನಿಮಾ ಕೃಷಿ ಮಾಡೋಕೆ ಸಜ್ಜಾಗಿದ್ದಾರೆ.
  • ಹೈಲೆಟ್​ ಅಂದ್ರೆ ನರ್ತನ್​ ಮುಂದಿನ ಚಿತ್ರಕ್ಕೆ ಟಾಲಿವುಡ್​ ಮೆಗಾ ಹೀರೋ ಮಗಧೀರ ರಾಮ್​ ಚರಣ್​ ತೇಜ ಹೀರೋ ಆಗಿ ಕಾಣಿಸಲಿದ್ದಾರೆ.
  • ಕೆವಿಎನ್ ಪ್ರೋಡಕ್ಷನ್​ನಲ್ಲಿ ಈ ಚಿತ್ರ ನಿರ್ಮಾಣ ಆಗಲಿದ್ದು, ಈ ಗಾಗಲೇ ಈ ಪ್ರಾಜೆಕ್ಟ್​ಗೆ ರಾಮ್​ಚರಣ್​ ಗ್ರೀನ್​ ಸಿಗ್ನಲ್​ ಕೊಟ್ಟಿದ್ದಾರಂತೆ..
ರಾಕಿಂಗ್ ಸ್ಟಾರ್ ಯಶ್ ಡೈರೆಕ್ಷನ್ ಮಾಡಲ್ವಾ ನರ್ತನ್! title=
Narthan Next Movie

ಮಫ್ತಿ ಚಿತ್ರದ ಮೂಲಕ ನಿರ್ದೇಶಕ ನರ್ತನ್ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಭರವಸೆ ಮೂಡಿಸಿದ್ದಾರೆ. ಮೊದಲ ಚಿತ್ರದಲ್ಲೇ ಯಾರೂ ಊಹಿಸದಂತೆ ಮೇಕಿಂಗ್​ ಮಾಡಿ ಮಲ್ಟಿ ಸ್ಟಾರ್​ಗಳ ಸಿನಿಮಾ ಮಾಡಿ, ಮೋಡಿ ಮಾಡಿದ್ದ ನರ್ತನ್​ ರಾಕಿಂಗ್​ ಸ್ಟಾರ್​ಗಾಗಿ ನಾಲ್ಕು ವರ್ಷ ಮೀಸಲಿಟ್ಟು ಕತೆ ಹೆಣೆದಿದ್ರು.. ಅದ್ರೆ ಅದ್ಯಾಕೋ ಗೊತ್ತಿಲ್ಲ ರಾಕಿಭಾಯ್​ಗೆ ನರ್ತನ್ ಕಥೆ ಒಕೆ ಆಗದೆ ಲಾಸ್ಟ್​ ಮೂಮೆಂಟ್​ನಲ್ಲಿ ಯಶ್​ ಪ್ರಾಜೆಕ್ಟ್​ ನರ್ತನ್​​ ಕೈನಿಂದ ಜಾರಿಹೋಗಿದೆ.. ಅದ್ರೆ ರಾಕಿ ಸಿನಿಮಾ ಕ್ಯಾನ್ಸಲ್​ ಆಯ್ತಲ್ಲಪ್ಪ ಅಂತ ಬೇಸರದಲ್ಲಿದ್ದ ನರ್ತನ್​ ಬಳಗಕ್ಕೆ ಮತ್ತೊಂದು ಮೆಗಾ ಪ್ರಾಜೆಕ್ಟ್ ಕೈ ಹಿಡಿದಿದೆ ಅನ್ನೋ ಸಮಾಚಾರ ಸದ್ಯ ಗಾಂಧಿನಗರದಲ್ಲಿ ಓಡಾಡ್ತಿದೆ..

ಹೌದು.. ಯಶ್​ ಸಿನಿಮಾ ಕ್ಯಾನ್ಸಲ್​ ಆದ್ಮೇಲೆ ನರ್ತನ್​ ತೆಲುಗು ಸಿನಿಮಾ ಮಾಡ್ತಾರಂತೆ.. ಟಾಲಿವುಡ್​ ಸ್ಟಾರ್​ನಟ ಹೀರೋ ಆಗಿ ಕಾಣಿಸಿದ್ರೆ ಆ ಚಿತ್ರ ಕೆವಿಎನ್​ ಪ್ರೋಡಕ್ಷನ್​ನಲ್ಲಿ ನಿರ್ಮಾಣವಾಗಲಿದೆ ಎಂಬ ವಿಚಾರ ವೈರಲ್​ ಆಗಿತ್ತು.. ಜೊತೆಗೆ ನರ್ತನ್​ ಶಿವಣ್ಣನಿಗೆ ಮಫ್ತಿ 2 ಅಂದ್ರೆ ಭೈರತಿ ರಣಗಲ್​ ಸಿನಿಮಾ ಮಾಡ್ತಾರೆ ಎಂಬ ಗುಸು ಗುಸು ಕೂಡ ಕೇಳಿ ಬಂದಿತ್ತು.. ಅದ್ರೆ ಈಗ ಫೈನಲಿ  ನರ್ತನ್​ ಟಾಲಿವುಡ್​ಗೆ ಕಾಲಿಡೋದು ಪಕ್ಕಾ ಆಗಿದ್ದು ನರ್ತನ್​ ಚಿತ್ರದಲ್ಲಿ ಟಾಲಿವುಡ್​ನ ನ್ಯಾಷನಲ್​ ಸ್ಟಾರ್​ ನಟಿಸೋದು ಬಹುತೇಕ ಪೈನಲ್​ ಆಗಿದೆ ಎಂಬ ವಿಚಾರ ನರ್ತನ್​ ಆಪ್ತಬಳಗದಿಂದ ತಿಳಿದು ಬಂದಿದೆ.

ಇದನ್ನೂ ಓದಿ- BBK 9 Day 2 : ಸಂಬರಗಿ ಸವಾಲ್‌ಗೆ ಹೆಣ್ಮಕ್ಳು ಕೊಟ್ರು ಜವಾಬ್‌

ಯೆಸ್​.. ಯಶ್​ಗಾಗಿ ಕಂಡಿದ್ದ ಕನಸ್ಸು ಕನಸಾಗೆ ಉಳಿಸಿರುವ ನರ್ತನ್​ ತೆಲುಗು ಸಿನಿಮಾರಂಗದಲ್ಲಿ ಸಿನಿಮಾ ಕೃಷಿ ಮಾಡೋಕೆ ಸಜ್ಜಾಗಿದ್ದಾರೆ. ಹೈಲೆಟ್​ ಅಂದ್ರೆ ನರ್ತನ್​ ಮುಂದಿನ ಚಿತ್ರಕ್ಕೆ ಟಾಲಿವುಡ್​ ಮೆಗಾ ಹೀರೋ ಮಗಧೀರ  ರಾಮ್​ ಚರಣ್​ ತೇಜ ಹೀರೋ ಆಗಿ ಕಾಣಿಸಲಿದ್ದಾರೆ. ಕೆವಿಎನ್ ಪ್ರೋಡಕ್ಷನ್​ನಲ್ಲಿ ಈ ಚಿತ್ರ ನಿರ್ಮಾಣ ಆಗಲಿದ್ದು, ಈ ಗಾಗಲೇ ಈ ಪ್ರಾಜೆಕ್ಟ್​ಗೆ ರಾಮ್​ಚರಣ್​ ಗ್ರೀನ್​ ಸಿಗ್ನಲ್​ ಕೊಟ್ಟಿದ್ದಾರಂತೆ.. ಸದ್ಯ ಈ ಚಿತ್ರದ ಪ್ರೀ ಪ್ರೋಡಕ್ಷನ್​ ವರ್ಕ್​ನಲ್ಲಿ ನರ್ತನ್​ ಅಂಡ್​ ಟೀಮ್​ ಬ್ಯುಸಿಯಾಗಿದ್ದು ದಸರಾ ವೇಳೆಗೆ ಈ ಸಿನಿಮಾವನ್ನು ಅಧಿಕೃತವಾಗಿ ಅನೌನ್ಸ್ ಮಾಡೋ ಸಾಧ್ಯತೆ ಇದೆ ಎನ್ನಲಾಗುತ್ತಿದೆ. 

ಕೆವಿಎನ್ ಮಾಲೀಕ ವೆಂಕಟ್​ ಕೋನಂಕಿ RRR ಚಿತ್ರವನ್ನು ಕರ್ನಾಟದಲ್ಲಿ ರಿಲೀಸ್​ ಮಾಡಿದ್ದು, ರಾಮ್​ಚರಣ್​ ಜೊತೆ ಉತ್ತಮ ಒಡನಾಟ ಹೊಂದಿದ್ದಾರೆ. ಯಶ್​ ಪ್ರಾಜೆಕ್ಟ್ ಮುಂದೆ ಹೋದ ಕಾರಣ ರಾಮ್​ ಚರಣ್​ ಜೊತೆ ಸಿನಿಮಾ ಮಾಡಲು ಮುಂದಾಗಿರೋ ವೆಂಕಟ್​ ಕೋನಂಕಿ ರಾಮ್​ಚರಣ್​-ನರ್ತನ್​ ಕಾಂಬೋದಲ್ಲಿ ಮತ್ತೊಂದು ಪ್ಯಾನ್​ ಇಂಡಿಯಾ ಸಿನಿಮಾ ಮಾಡಲು ಸಕಲ ಸಿದ್ದತೆ  ಮಾಡಿಕೊಳ್ತಿದ್ದಾರೆ ಅನ್ನೊ ಸಮಾಚಾರ ಕೆವಿಎನ್ ಅಂಗಳದಿಂದ ಲೀಕ್​ ಆಗಿದೆ.

ಇದನ್ನೂ ಓದಿ- Asha Parekh: ಹಿಂದಿ ಚಿತ್ರರಂಗದ ದಿಗ್ಗಜ ನಟಿ ಆಶಾ ಪಾರೇಖ್ ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ

ಅದೇನೆ ಇರಲಿ ಯಶ್​ ಸಿನಿಮಾ ಮಾಡಲು ಹೊರಟ್ಟಿದ್ದ ನರ್ತನ್​ ಮತ್ತು ವೆಂಕಟ್​ ಕೋನಂಕಿ, ಆ ಸಿನಿಮಾ ನಿಂತರೂ ನಾವು ನಿಲ್ಲೋದು ಬೆಡ ಅಂತ ನಿರ್ಧಾರ ಮಾಡಿ. ಸಖತ್​ ಜೋಶ್​ನಲ್ಲೇ ಮಗಧೀರನ ಜೊತೆ ಮೆಗಾ ಪ್ರಾಜೆಕ್ಟ್​ಗೆ ಕೈ ಹಾಕಿದ್ದು, ಶೀಘ್ರದಲ್ಲೇ ಆ ಸಿನಿಮಾವನ್ನು ಆಫಿಶಿಯಲ್​ ಆಗಿ ಅನೌನ್ಸ್ ಮಾಡಲಿದ್ದಾರೆ. ಸದ್ಯ ರಾಮ್​ ಚರಣ್​ ಶಂಕರ್​ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಈ ಸಿನಿಮಾ ಕಂಪ್ಲಿಟ್​ ಆದ್ಮೇಲೆ  ನರ್ತನ್​ ಜೊತೆಗಿನ ಸಿನಿಮಾ ಶುರುವಾಗೋ ಸಾಧ್ಯತೆ ಇದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News