ಬಿಸಿ ನೀರಿಗೆ ಈ ಪುಡಿ ಬೆರೆಸಿ ಸೇವಿಸಿದರೆ ಸಾಕು, ಕಿಡ್ನಿ ಬ್ಲಾಕೇಜ್ ಮತ್ತು ಸ್ಟೋನ್ ಸುಲಭವಾಗಿ ತೆರವಾಗುವುದು ! ನೋವು ಕೂಡಾ ತಿಳಿಯುವುದಿಲ್ಲ

ಮೂತ್ರಪಿಂಡದಲ್ಲಿ ಬ್ಲೋಕೆಜ್ ಕಾಣಿಸಿಕೊಂಡಾಗ ಅದರ ಸಾಮಾನ್ಯ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ.ಇದು ಮೂತ್ರಪಿಂಡ ವೈಫಲ್ಯ ಮತ್ತು ಅಧಿಕ ರಕ್ತದೊತ್ತಡದಂತಹ ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು.

Written by - Ranjitha R K | Last Updated : Oct 25, 2024, 01:37 PM IST
  • ಮೂತ್ರಪಿಂಡವು ನಮ್ಮ ದೇಹದ ಪ್ರಮುಖ ಅಂಗವಾಗಿದೆ.
  • ಕಿಡ್ನಿಯಲ್ಲಿ ಬ್ಲೋಕೆಜ್ ಕಾಣಿಸಿಕೊಂಡಾಗ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ
  • ಯೂರಿಯಾ ಮತ್ತು ಇತರ ಕಲ್ಮಶಗಳು ದೇಹದಲ್ಲಿ ಸಂಗ್ರಹವಾಗುತ್ತವೆ
ಬಿಸಿ ನೀರಿಗೆ ಈ ಪುಡಿ ಬೆರೆಸಿ ಸೇವಿಸಿದರೆ ಸಾಕು, ಕಿಡ್ನಿ ಬ್ಲಾಕೇಜ್ ಮತ್ತು ಸ್ಟೋನ್ ಸುಲಭವಾಗಿ ತೆರವಾಗುವುದು ! ನೋವು ಕೂಡಾ ತಿಳಿಯುವುದಿಲ್ಲ  title=

ಬೆಂಗಳೂರು : ಮೂತ್ರಪಿಂಡವು ನಮ್ಮ ದೇಹದ ಪ್ರಮುಖ ಅಂಗವಾಗಿದೆ.ಇದು ರಕ್ತದಿಂದ ವಿಷ ಮತ್ತು ಹೆಚ್ಚುವರಿ ದ್ರವವನ್ನು ತೆಗೆದುಹಾಕುವ ಕೆಲಸ ಮಾಡುತ್ತದೆ.  ಆದರೆ ಮೂತ್ರಪಿಂಡದಲ್ಲಿ ಬ್ಲೋಕೆಜ್ ಕಾಣಿಸಿಕೊಂಡಾಗ ಅದರ ಸಾಮಾನ್ಯ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ಯೂರಿಯಾ ಮತ್ತು ಇತರ ಕಲ್ಮಶಗಳು ದೇಹದಲ್ಲಿ ಸಂಗ್ರಹವಾಗುತ್ತವೆ.

ಇದು ಮೂತ್ರಪಿಂಡ ವೈಫಲ್ಯ ಮತ್ತು ಅಧಿಕ ರಕ್ತದೊತ್ತಡದಂತಹ ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು.ಆದರೆ  ಈ ಬ್ಲೋಕೆಜ್ ಅನ್ನು ತೆರೆಯಲು ಮತ್ತು ಕಿಡ್ನಿ ಸ್ಟೋನ್ ಕರಗಿಸಲು ಸಹಾಯ ಮಾಡುವ ಕೆಲವು ಅಂಶಗಳನ್ನು ಆಯುರ್ವೇದದಲ್ಲಿ ಹೇಳಲಾಗಿದೆ.

ಇದನ್ನೂ ಓದಿ : Papaya Seeds: ಪಪ್ಪಾಯಿ ಬೀಜಗಳಲ್ಲಿದೆ ಈ ಮಾರಕ ಕಾಯಿಲೆ ಗುಣಪಡಿಸುವ ಶಕ್ತಿ! ಹೀಗೆ ತಿಂದರೆ ರಕ್ತನಾಳದಲ್ಲಿ ಜಿಡ್ಡು ಕಟ್ಟಿದ ಕೆಟ್ಟ ಕೊಲೆಸ್ಟ್ರಾಲ್ ಸುಟ್ಟೇ ಹೋಗುತ್ತದೆ.. ಹಾರ್ಟ್‌ ಬ್ಲಾಕೇಜ್ ಸುಲಭವಾಗಿ ತೆರವಾಗುವುದು !

ತ್ರಿಫಲ ಪುಡಿ:
ತ್ರಿಫಲ ಪುಡಿಯನ್ನು ಆಯುರ್ವೇದದಲ್ಲಿ ಅತ್ಯುತ್ತಮ ಔಷಧವೆಂದು ಪರಿಗಣಿಸಲಾಗಿದೆ. ಇದು ದೇಹವನ್ನು ನಿರ್ವಿಷಗೊಳಿಸಲು ಮತ್ತು ಮೂತ್ರಪಿಂಡದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಮೂತ್ರಪಿಂಡದ ಬ್ಲೋಕೆಜ್ ತೆಗೆದುಹಾಕಲು ಮತ್ತು ಮೂತ್ರಪಿಂಡದ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ರಾತ್ರಿ ವೇಳೆ ಉಗುರುಬೆಚ್ಚನೆಯ ನೀರಿನಲ್ಲಿ ತ್ರಿಫಲ ಚೂರ್ಣವನ್ನು ಕರಗಿಸಿ ನಿಯಮಿತವಾಗಿ ಸೇವಿಸುವುದರಿಂದ ಯೂರಿಯಾ ಮಟ್ಟವು ನಿಯಂತ್ರಣದಲ್ಲಿರುತ್ತದೆ ಮತ್ತು ಮೂತ್ರಪಿಂಡಗಳ ಫಿಲ್ಟರ್ ಸಾಮರ್ಥ್ಯವು ಹೆಚ್ಚಾಗುತ್ತದೆ.

 ಗೋಕ್ಷುರ  (Gokhru):  
ಗೋಕ್ಷುರವನ್ನು ಆಯುರ್ವೇದದಲ್ಲಿ ಕಿಡ್ನಿ ಸಂಬಂಧಿತ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಶತಮಾನಗಳಿಂದಲೂ ಬಳಸಲಾಗುತ್ತಿದೆ. ಇದು ನೈಸರ್ಗಿಕ ಮೂತ್ರವರ್ಧಕವಾಗಿದೆ. ಇದು ಮೂತ್ರದ ಮೂಲಕ ತ್ಯಾಜ್ಯವನ್ನು ಹೊರಹಾಕಲು ಸಹಾಯ ಮಾಡುತ್ತದೆ ಮತ್ತು ಮೂತ್ರಪಿಂಡದ ಬ್ಲೋಕೆಜ್ ಅನ್ನು ಕ್ರಮೇಣ ತೆಗೆದುಹಾಕುತ್ತದೆ. ಗೋಕ್ಷುರ ಪುಡಿಯನ್ನು ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ಕಿಡ್ನಿ ಬ್ಲಾಕ್ ಆಗುವುದರ ಜೊತೆಗೆ ಯೂರಿಯಾ ಮತ್ತು ಕ್ರಿಯೇಟಿನೈನ್ ಮಟ್ಟವನ್ನು ಕೂಡಾ ನಿಯಂತ್ರಿಸಬಹುದು.

ಇದನ್ನೂ ಓದಿ : ಪ್ರತಿದಿನ ಹಾಲಿನಲ್ಲಿ ಈ ಪದಾರ್ಥ ಬೆರೆಸಿ ಕುಡಿದರೆ.. ಒಂದೇ ವಾರದಲ್ಲಿ ಹೊಟ್ಟೆಯ ಬೊಜ್ಜು ಕರಗಿ ನೀರಾಗುತ್ತೆ..!

ಮಧುನಾಶಿನಿ : 
ಮಧುನಾಶಿನಿ ಮತ್ತೊಂದು ಆಯುರ್ವೇದ ಔಷಧವಾಗಿದೆ. ಇದು ಮೂತ್ರಪಿಂಡದ ಬ್ಲೋಕೆಜ್ ತೆಗೆದುಹಾಕಲು ಸಹಾಯ ಮಾಡುತ್ತದೆ. ದೇಹದಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸುವ ಮೂಲಕ ಕಿಡ್ನಿಯಲ್ಲಿನ  ಬ್ಲೋಕೆಜ್ ನಿವಾರಿಸಲು ಇದು ಸಹಾಯ ಮಾಡುತ್ತದೆ. ಇದರ ನಿಯಮಿತ ಸೇವನೆಯು ಮೂತ್ರಪಿಂಡದ ಕಾರ್ಯವನ್ನು ಹೆಚ್ಚಿಸುತ್ತದೆ. ಮಧುನಾಶಿನಿ ಎಲೆಗಳ ರಸ ಅಥವಾ ಪುಡಿಯನ್ನು ನಿಯಮಿತವಾಗಿ ಸೇವಿಸುವುದು ಕಿಡ್ನಿ ಆರೋಗ್ಯಕ್ಕೆ ಪ್ರಯೋಜನಕಾರಿ.

ಮುನ್ನೆಚ್ಚರಿಕೆಗಳು:
ನೀವು ಈಗಾಗಲೇ ಯಾವುದೇ ಗಂಭೀರ ಮೂತ್ರಪಿಂಡದ ಸಮಸ್ಯೆಯನ್ನು ಹೊಂದಿದ್ದರೆ, ಆಯುರ್ವೇದ ಪರಿಹಾರವನ್ನು ಪ್ರಾರಂಭಿಸುವ ಮೊದಲು, ತಜ್ಞರನ್ನು ಸಂಪರ್ಕಿಸಿ. ಇದರ ಜೊತೆಗೆ ಆರೋಗ್ಯಕರ ಆಹಾರ ಮತ್ತು ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಮುಖ್ಯವಾಗಿದೆ. ಇದರಿಂದ ಮೂತ್ರಪಿಂಡದ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದು.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News