ಡಯಾಬಿಟಿಸ್‌ಗೆ ರಾಮಬಾಣ ಈ ಹೂವಿನ ಗಿಡದ ಎಲೆ, ಈ ರೀತಿ ಬಳಸಿ ಮಧುಮೇಹ ಹೊಡೆದೋಡಿಸಿ!

Benefits of Parijat Leaves: ರಾತ್ರಿಯಲ್ಲಿ ಅರಳುವ ಪಾರಿಜಾತ ಹೂವಿನ ಸುಗಂಧ ಎಲ್ಲರಿಗೂ ಇಷ್ಟ. ಸನಾತನ ಸಂಸ್ಕೃತಿಯಲ್ಲಿ ಪಾರಿಜಾತ ಸಸ್ಯವನ್ನು ಅತ್ಯಂತ ಪವಿತ್ರ ಎನ್ನಲಾಗಿದೆ. ಡಯಾಬಿಟಿಸ್‌ಗೆ ಈ ಹೂವಿನ ಗಿಡದ ಎಲೆ ರಾಮಬಾಣದಂತೆ.   

Written by - Chetana Devarmani | Last Updated : Jun 26, 2023, 07:08 AM IST
  • ರಾತ್ರಿಯಲ್ಲಿ ಅರಳುವ ಪಾರಿಜಾತ ಹೂವು
  • ಡಯಾಬಿಟಿಸ್‌ಗೆ ರಾಮಬಾಣ ಈ ಹೂವಿನ ಗಿಡದ ಎಲೆ
  • ಆರೋಗ್ಯಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ
ಡಯಾಬಿಟಿಸ್‌ಗೆ ರಾಮಬಾಣ ಈ ಹೂವಿನ ಗಿಡದ ಎಲೆ, ಈ ರೀತಿ ಬಳಸಿ ಮಧುಮೇಹ ಹೊಡೆದೋಡಿಸಿ!  title=
Parijat Leaves

Benefits of Parijat Leaves: ಸನಾತನ ಸಂಸ್ಕೃತಿಯಲ್ಲಿ ಪಾರಿಜಾತ ಸಸ್ಯವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಅದರ ಹೂವುಗಳು ಮನಸೆಳೆಯುವ ವಾಸನೆಯನ್ನು ಹೊಂದಿರುತ್ತವೆ. ಇದನ್ನು ದೇವರ ಪೂಜೆಗೆ ಬಳಸುತ್ತಾರೆ. ಇದು ಹಗಲಿನ ಬದಲು ರಾತ್ರಿಯಲ್ಲಿ ಅರಳುತ್ತದೆ. ಅದರ ಪರಿಮಳವನ್ನು ಹರಡುತ್ತದೆ. ಅದಕ್ಕಾಗಿಯೇ ಇದನ್ನು 'ರಾತ್ ಕಿ ರಾಣಿ' ಅಥವಾ ರಾತ್ರಿ ಮಲ್ಲಿಗೆ ಎಂದೂ ಕರೆಯುತ್ತಾರೆ. ಈ ಸಸ್ಯದ ಎಲೆಗಳು ನಮ್ಮ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ.

ರೋಗನಿರೋಧಕ ಶಕ್ತಿ ಹೆಚ್ಚುತ್ತದೆ: ಆಗಾಗ್ಗೆ ಹವಾಮಾನ ಬದಲಾವಣೆಯಿಂದಾಗಿ, ವೈರಲ್ ಸೋಂಕಿನ ಅಪಾಯವು ಹೆಚ್ಚಾಗುತ್ತದೆ, ಇದರಿಂದಾಗಿ ಕೆಮ್ಮು ಮತ್ತು ಶೀತವು ಸಾಮಾನ್ಯವಾಗಿದೆ. ಇದನ್ನು ತಪ್ಪಿಸಲು, ಪಾರಿಜಾತದ ಸುಮಾರು 10 ಎಲೆಗಳನ್ನು ತೆಗೆದುಕೊಂಡು ಅದನ್ನು ಒಂದು ಲೋಟ ನೀರಿನಲ್ಲಿ ಹಾಕಿ, ಒಂದು ಗಂಟೆಯವರೆಗೆ ಇರಿಸಿ. ಬಳಿಕ ಕುಡಿಯಿರಿ. 

ಇದನ್ನೂ ಓದಿ: ಈ ಸಮಸ್ಯೆಯಿದ್ದರೆ ಮೊಸರನ್ನು ತಪ್ಪಿಯೂ ತಿನ್ನಬೇಡಿ, ಆರೋಗ್ಯ ಹಾಳಾಗೋದು ಪಕ್ಕಾ!

ಸಂಧಿವಾತ: ವಯಸ್ಸು ಹೆಚ್ಚಾದಂತೆ ಸಂಧಿವಾತ ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಯುವಜನರು ಕೂಡ ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ, ಪಾರಿಜಾತ ಎಲೆಗಳಿಂದ ಸಾರಭೂತ ತೈಲವನ್ನು ಹೊರತೆಗೆಯಿರಿ, ಅದಕ್ಕೆ ಕೆಲವು ಹನಿ ತೆಂಗಿನ ಎಣ್ಣೆಯನ್ನು ಸೇರಿಸಿ. ಈ ಎಣ್ಣೆಯನ್ನು ನೋವಿರುವ ಜಾಗದಲ್ಲಿ ಹಚ್ಚಿಕೊಳ್ಳಿ. 

ಮಧುಮೇಹ: ಮಧುಮೇಹ ರೋಗಿಗಳು ಪ್ರತಿ ಕ್ಷಣವೂ ತಮ್ಮ ಆರೋಗ್ಯದ ಬಗ್ಗೆ ಚಿಂತಿತರಾಗುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ನೀವು ಪಾರಿಜಾತ ಎಲೆಗಳ ಸಹಾಯವನ್ನು ತೆಗೆದುಕೊಳ್ಳಬಹುದು. ಪಾರಿಜಾತ ಎಲೆಗಳು ಮಧುಮೇಹ ವಿರೋಧಿ ಗುಣಗಳನ್ನು ಹೊಂದಿದ್ದು, ಅದು ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದನ್ನು ವೈದ್ಯರ ಸಲಹೆಯ ಮೇರೆಗೆ ಮಾತ್ರ ಮಾಡಬೇಕೆಂದು ನೆನಪಿನಲ್ಲಿಡಿ.

ಇದನ್ನೂ ಓದಿ: ಈ 4 ಪದಾರ್ಥಗಳ ಸೇವನೆ ನಿಲ್ಲಿಸಿ, ಒಂದೇ ತಿಂಗಳಲ್ಲಿ ಕೊಲೆಸ್ಟ್ರಾಲ್ ಕಡಿಮೆಯಾಗುತ್ತೆ!

ಕೂದಲಿನ ಆರೋಗ್ಯ: ಪ್ರಸ್ತುತ ಯುಗದಲ್ಲಿ, ಅನಾರೋಗ್ಯಕರ ಆಹಾರ, ಮಾಲಿನ್ಯ ಮತ್ತು ರಾಸಾಯನಿಕ ಆಧಾರಿತ ಉತ್ಪನ್ನಗಳ ಬಳಕೆಯಿಂದಾಗಿ ಹೆಚ್ಚಿನ ಜನರು ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದರಲ್ಲಿ ದುರ್ಬಲ ಕೂದಲು, ಬಿಳಿ ಕೂದಲು ಮತ್ತು ಕೂದಲು ಉದುರುವಿಕೆ ಮುಂತಾದ ಸಮಸ್ಯೆಗಳಿವೆ. ಪಾರಿಜಾತದ ಎಲೆಯಿಂದ ಮಾಡಿದ ಕಷಾಯವನ್ನು ಕುಡಿದರೆ ಕೂದಲು ಕಪ್ಪಾಗಿ, ದಟ್ಟವಾಗಿ, ಹೊಳೆಯುತ್ತದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಲೇಬೇಕು. ZEE KANNADA NEWS ಈ ಮಾಹಿತಿಯನ್ನು ದೃಢೀಕರಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News