ಆ್ಯಂಟಿ-ಡೈಬಿಟಿಕ್ ಗುಣಗಳ ಉಗ್ರಾಣ ಈ ಗಿಡದ ಎಲೆಗಳು, ಕೇವಲ ಜಗಿದು ತಿನ್ನಿ ಸಾಕು, ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ!

Taming Diabetes: ಭಾರತದಲ್ಲಿ ಮಧುಮೇಹ ರೋಗಿಗಳ ಸಂಖ್ಯೆ ನಿರಂತರವಾಗಿ ಮತ್ತು ವೇಗವಾಗಿ ಹೆಚ್ಚುತ್ತಿದೆ. ಇದಕ್ಕೆ ಕಾರಣ ಕೆಟ್ಟ ಆಹಾರ ಪದ್ಧತಿ ಹಾಗೂ ಜೀವನಶೈಲಿ ಎಂದರೆ ತಪ್ಪಾಗಲಾರದು. ಅಲ್ಲದೆ ಇದು ಗುಣಪಡಿಸಲಾಗದ ಒಂದು ಕಾಯಿಲೆಯಾಗಿದೆ. ಇದು ಆನುವಂಶಿಕ ರೀತಿಯಲ್ಲಿ ಕುಟುಂಬದಲ್ಲಿಯೂ ಹರಡುತ್ತದೆ.  

Written by - Nitin Tabib | Last Updated : Aug 24, 2023, 05:41 PM IST
  • ಕದಂಬ ಎಲೆಗಳನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿರುತ್ತದೆ.
  • ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಕದಂಬ ಎಲೆಗಳನ್ನು ಜಗಿಯಿರಿ.
  • ಅಧಿಕ ರಕ್ತದ ಸಕ್ಕರೆಯು ಕೆಲವೇ ನಿಮಿಷಗಳಲ್ಲಿ ಕಡಿಮೆಯಾಗುತ್ತದೆ.
ಆ್ಯಂಟಿ-ಡೈಬಿಟಿಕ್ ಗುಣಗಳ ಉಗ್ರಾಣ ಈ ಗಿಡದ ಎಲೆಗಳು, ಕೇವಲ ಜಗಿದು ತಿನ್ನಿ ಸಾಕು, ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ! title=

ಬೆಂಗಳೂರು: ಯಾವುದೇ ಚಿಕಿತ್ಸೆಯೇ ಇಲ್ಲದ ಒಂದು ಕಾಯಿಲೆ ಎಂದರೆ ಅದು ಮಧುಮೇಹ, ಒಂದೊಮ್ಮೆ ಇದು ದೇಹವನ್ನು ಪ್ರವೇಶಿಸಿದರೆ ಸಾಕಷ್ಟು ತೊಂದರೆಗಳನ್ನು ನಿರ್ಮಿಸುತ್ತದೆ. ಪ್ರಸ್ತುತ ಇದನ್ನು ಗುಣಪಡಿಸಲು ಯಾವುದೇ ಔಷಧಿ ಇಲ್ಲ. ಹಿರಿಯರಿಂದ ಹಿಡಿದು ಮಕ್ಕಳೂ ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಪ್ರಪಂಚದ ಎಲ್ಲಾ ದೇಶಗಳಲ್ಲಿ ಭಾರತವು ಅತಿ ಹೆಚ್ಚು ಮಧುಮೇಹ ರೋಗಿಗಳನ್ನು ಹೊಂದಿದೆ. ಅಷ್ಟೇ ಅಲ್ಲ, ಪ್ರತಿನಿತ್ಯ ರೋಗಿಗಳ ಸಂಖ್ಯೆಯೂ ಕೂಡ ನಿರಂತರವಾಗಿ ಹೆಚ್ಚಾಗುತ್ತಿದೆ. ಈ ರೋಗ ಬಂದ ತಕ್ಷಣ ವ್ಯಕ್ತಿಯ ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ಅಸಮತೋಲನಗೊಳ್ಳುತ್ತದೆ. ಇದರಿಂದ ನಮ್ಮ ದಿನನಿತ್ಯದ ಎಲ್ಲಾ ಸಂಗತಿಗಳು ಪ್ರಭಾವಕ್ಕೆ ಒಳಗಾಗುತ್ತವೆ. ರಕ್ತದಲ್ಲಿನ ಸಕ್ಕರೆಯು ಅಧಿಕ ಅಥವಾ ಕಡಿಮೆಯಾದ ತಕ್ಷಣ, ಕುರುಟುತನ ಬರುವ ಅಪಾಯವು ಹಲವಾರು ಪಟ್ಟು ಹೆಚ್ಚಾಗುತ್ತದೆ. ಆದಾಗ್ಯೂ, ಈ ರೋಗದಲ್ಲಿ, ರಕ್ತದಲ್ಲಿನ ಸಕ್ಕರೆಯನ್ನು ನಾವು ನೈಸರ್ಗಿಕವಾಗಿ ನಿಯಂತ್ರಿಸಬಹುದು. ಕದಂಬ ಮರದ ಎಲೆಗಳು ಇದರಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

NCBI ವರದಿಯಲ್ಲಿ, ಕದಂಬ ಮರದ ಎಲೆಗಳು ಮತ್ತು ತೊಗಟೆ ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿವೆ ಎನ್ನಲಾಗಿದೆ. ಈ ಎಲೆಗಳನ್ನು ಅಗಿಯುವುದರಿಂದ ಮಧುಮೇಹ ರೋಗಿಗಳು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡುತ್ತದೆ. ಇದೇ ವೇಳೆ, ಈ ರೋಗದಲ್ಲಿ ಅದರ ತೊಗಟೆ ಕೂಡ ಪರಿಣಾಮಕಾರಿಯಾಗಿದೆ. ಕದಂಬ ಎಲೆಗಳು ಮತ್ತು ತೊಗಟೆ ಮಧುಮೇಹ ವಿರೋಧಿ ಗುಣಗಳನ್ನು ಹೊಂದಿದೆ. ಪಾಲಿಫಿನಾಲ್‌ಗಳು ಮತ್ತು ಫ್ಲೇವನಾಯ್ಡ್‌ಗಳಂತಹ ಪ್ರಮುಖ ಪೋಷಕಾಂಶಗಳು ಇದರ ಎಲೆಗಳಲ್ಲಿ ಕಂಡುಬರುತ್ತವೆ. ಈ ಅಂಶಗಳು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವಲ್ಲಿ ಬಹಳ ಪರಿಣಾಮಕಾರಿಯಾಗಿವೆ. ಇವುಗಳ ನಿಯಮಿತ ಸೇವನೆಯು ಅಧಿಕ ರಕ್ತದ ಸಕ್ಕರೆಯಲ್ಲಿ ಸುಲಭವಾಗಿ ಪರಿಹಾರವನ್ನು ನೀಡುತ್ತದೆ.

ಇದನ್ನೂ ಓದಿ-ಪುರುಷರೇ ಬೊಕ್ಕ ತಲೆ ಸಮಸ್ಯೆಯಿಂದ ನೀವೂ ತೊಂದರೆಗೀಡಾಗಿದ್ದೀರಾ? ಚಿಂತೆ ಬಿಟ್ಟು ಈ ಸುದ್ದಿ ಓದಿ!

ಮಧುಮೇಹ ರೋಗಿಗಳಿಗೆ ಕದಂಬ ತೊಗಟೆ
ಮಧುಮೇಹ ರೋಗಿಗಳಿಗೆ ಕದಂಬ ಮರದ ಎಲೆಗಳು ಮಾತ್ರವಲ್ಲ, ತೊಗಟೆಯೂ ಸಹ ಪ್ರಯೋಜನಕಾರಿಯಾಗಿದೆ. ಇದನ್ನು ಪುಡಿ ರೂಪದಲ್ಲಿ ತೆಗೆದುಕೊಳ್ಳಬಹುದು. NCBI ವರದಿಯ ಪ್ರಕಾರ, 100 ಗ್ರಾಂ ಕದಂಬ ತೊಗಟೆಯಲ್ಲಿ 7.83 ಮಿಗ್ರಾಂ ಫ್ಲೇವನಾಯ್ಡ್ ಮತ್ತು 12.26 ಮಿಗ್ರಾಂ ಫಿನಾಲಿಕ್ ಆಮ್ಲವಿದೆ. ಈ ತೊಗಟೆಯನ್ನು ನುಣ್ಣಗೆ ರುಬ್ಬಿ ಪುಡಿಯಾಗಿ ಪರಿವರ್ತಿಸಿ. ಇದರ ನಂತರ, ಅದನ್ನು ನಿಯಮಿತವಾಗಿ ನೀರಿನೊಂದಿಗೆ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡುತ್ತದೆ.

ಇದನ್ನೂ ಓದಿ-ಕೊಲೆಸ್ಟ್ರಾಲ್-ಮಧುಮೇಹ ಸೇರಿದಂತೆ ಹಲವು ಕಾಯಿಲೆಗಳಿಗೆ ವರದಾನಕ್ಕೆ ಸಮಾನ ಈ ತರಕಾರಿ!

ಕದಂಬ ಎಲೆಗಳನ್ನು ಹೇಗೆ ಸೇವಿಸಬೇಕು?
ಕದಂಬ ಎಲೆಗಳನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿರುತ್ತದೆ. ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಕದಂಬ ಎಲೆಗಳನ್ನು ಜಗಿಯಿರಿ. ಅಧಿಕ ರಕ್ತದ ಸಕ್ಕರೆಯು ಕೆಲವೇ ನಿಮಿಷಗಳಲ್ಲಿ ಕಡಿಮೆಯಾಗುತ್ತದೆ. ಇದರೊಂದಿಗೆ ಕದಂಬ ಎಲೆಗಳನ್ನು ಒಣಗಿಸಿದ ನಂತರವೂ ಬಳಸಬಹುದು. ಇದಕ್ಕೆ ಕದಂಬದ ಎಲೆಗಳನ್ನು ಒಣಗಿಸಿ ಪುಡಿ ಮಾಡಿ. ಪ್ರತಿದಿನ ಬೆಳಗ್ಗೆ ಎದ್ದ ನಂತರ ಖಾಲಿ ಹೊಟ್ಟೆಯಲ್ಲಿ ಒಂದರಿಂದ ಎರಡು ಚಮಚ ಪುಡಿಯನ್ನು ನೀರಿನೊಂದಿಗೆ ಸೇವಿಸಿ. ರಕ್ತದಲ್ಲಿನ ಸಕ್ಕರೆಯು ಸ್ವಲ್ಪವೂ ಹೆಚ್ಚಾಗುವುದಿಲ್ಲ.

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News