ಪೋಲಿಸ್ ಠಾಣೆ ಬಾಗಿಲಿನ ಬೆಲ್ ಒತ್ತಿ ಮೃತಪಟ್ಟ ಪೇದೆ ಮಗ..!

ಉತ್ತರ ಪ್ರದೇಶದ ಬರೇಲಿಪೊಲೀಸ್ ಹೊರ ಠಾಣೆ ಬಾಗಿಲಿನ ಬೆಲ್ ನ್ನು ಒತ್ತಿದ ಪರಿಣಾಮವಾಗಿ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸ್ ಪೇದೆ ಪುತ್ರನಿಗೆ ವಿದ್ಯುತ್ ತಗುಲಿ ಸಾವನ್ನಪ್ಪಿದ್ದಾನೆ.

Last Updated : Sep 22, 2019, 05:41 PM IST
ಪೋಲಿಸ್ ಠಾಣೆ ಬಾಗಿಲಿನ ಬೆಲ್ ಒತ್ತಿ ಮೃತಪಟ್ಟ ಪೇದೆ ಮಗ..!  title=
ಸಾಂದರ್ಭಿಕ ಚಿತ್ರ

ಬರೇಲಿ: ಉತ್ತರ ಪ್ರದೇಶದ ಬರೇಲಿಪೊಲೀಸ್ ಹೊರ ಠಾಣೆ ಬಾಗಿಲಿನ ಬೆಲ್ ನ್ನು ಒತ್ತಿದ ಪರಿಣಾಮವಾಗಿ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸ್ ಪೇದೆ ಪುತ್ರನಿಗೆ ವಿದ್ಯುತ್ ತಗುಲಿ ಸಾವನ್ನಪ್ಪಿದ್ದಾನೆ.

ಈ ಘಟನೆ ನಗರದ ಬಿಹಾರಿಪುರ ಹೊರ ಪೊಲೀಸ್ ಠಾಣೆಯಲ್ಲಿ ಎಂದು ಪೊಲೀಸ್ ವರಿಷ್ಠಾಧಿಕಾರಿ (ನಗರ) ಅಭಿನಂದನ್ ಸಿಂಗ್ ತಿಳಿಸಿದ್ದಾರೆ. ಹೊರ ಪೋಲಿಸ್ ಠಾಣೆ ಉಸ್ತುವಾರಿ ದೇವೇಂದ್ರ ಸಿಂಗ್ ಅವರ ಪುತ್ರ ಸೌರಭ್ (20) ಬಾಗಿಲಿನ ಬೆಲ್ ನ್ನು ಒತ್ತಿದಾಗ ಮಳೆ ಬರುತ್ತಿತ್ತು. ಆಗ ಅವರಿಗೆ ವಿದ್ಯುತ್ ತಗುಲಿ ಸಾವನ್ನಪ್ಪಿದರು ಎಂದು ಸಿಂಗ್ ಹೇಳಿದ್ದಾರೆ.

ಘಟನೆ ನಡೆದಿದ ಸಮಯದಲ್ಲಿ ನಗರದ ಹೊರ ಪೋಲಿಸ್ ಠಾಣೆಯಲ್ಲಿ ನೀರು ತುಂಬಿತ್ತು ಎನ್ನಲಾಗಿದೆ. ಅಲ್ಲಿ ಸಂಗ್ರಹವಾಗಿದ್ದ ನೀರನ್ನು ಹೊರಹಾಕಲು ಅಗ್ನಿಶಾಮಕ ದಳವನ್ನು ಕರೆಯಲಾಯಿತು ಈ ಘಟನೆಯ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.

Trending News