ಬೆಂಕಿ ಪಟ್ಟಣ ಕಾರಣದಿಂದ ಎನ್‌ಡಿಎಗೆ ಆಯ್ಕೆಯಾಗಿದ್ದ ಬಿಪಿನ್ ರಾವತ್! ಏನಿದು ಇಂಟೆರೆಸ್ಟಿಂಗ್ ಕಥೆ 

ಬಿಪಿನ್ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ರಾವತ್ ಅವರ ಪಾರ್ಥಿವ ಶರೀರವನ್ನು ಇಂದು (ಡಿಸೆಂಬರ್ 9) ಸೇನಾ ವಿಮಾನದ ಮೂಲಕ ದೆಹಲಿಗೆ ತರಲಾಗುವುದು ಮತ್ತು ನಾಳೆ ದೆಹಲಿಯಲ್ಲಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಗುವುದು.

Written by - Channabasava A Kashinakunti | Last Updated : Dec 9, 2021, 01:47 PM IST
  • ಬಾಲ್ಯದಲ್ಲೆ ಸೇನೆಗೆ ಸೇರುವ ಕನಸು ಕಂಡಿದ್ದ ರಾವತ್
  • ಬೆಂಕಿ ಪಟ್ಟಣದಿಂದ ಎನ್‌ಡಿಎಗೆ ಪ್ರವೇಶ
  • ಬಿಪಿನ್ ರಾವತ್ ಅವರ ರೋಚಕ ಕಥೆ
ಬೆಂಕಿ ಪಟ್ಟಣ ಕಾರಣದಿಂದ ಎನ್‌ಡಿಎಗೆ ಆಯ್ಕೆಯಾಗಿದ್ದ ಬಿಪಿನ್ ರಾವತ್! ಏನಿದು ಇಂಟೆರೆಸ್ಟಿಂಗ್ ಕಥೆ  title=

ನವದೆಹಲಿ: ಭಾರತೀಯ ವಾಯುಪಡೆಯ ಎಂಐ-17 ಹೆಲಿಕಾಪ್ಟರ್‌ನಲ್ಲಿ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ರಾವತ್ ಬುಧವಾರ (ಡಿಸೆಂಬರ್ 8) ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂನೂರ್ ಪ್ರದೇಶದಲ್ಲಿ ಪತನಗೊಂಡಿದ್ದು, 13 ಜನರು ಸಾವನ್ನಪ್ಪಿದ್ದಾರೆ. ರಾವತ್. ಬಿಪಿನ್ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ರಾವತ್ ಅವರ ಪಾರ್ಥಿವ ಶರೀರವನ್ನು ಇಂದು (ಡಿಸೆಂಬರ್ 9) ಸೇನಾ ವಿಮಾನದ ಮೂಲಕ ದೆಹಲಿಗೆ ತರಲಾಗುವುದು ಮತ್ತು ನಾಳೆ ದೆಹಲಿಯಲ್ಲಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಗುವುದು.

ಬಾಲ್ಯದಲ್ಲಿ ಸೇನೆಗೆ ಸೇರುವ ಕನಸು ಕಂಡಿದ್ದ ರಾವತ್

ಮೂಲತಃ ಉತ್ತರಾಖಂಡದ ಪೌರಿ ಗರ್ವಾಲ್‌ನವರಾದ ಬಿಪಿನ್ ರಾವತ್(CDS Bipin Rawat) ತಮ್ಮ ಬಾಲ್ಯದಲ್ಲಿ ಭಾರತೀಯ ಸೇನೆಗೆ ಸೇರುವ ಕನಸು ಕಂಡಿದ್ದರು. ಬಿಪಿನ್ ರಾವತ್‌ಗೆ ಸಂಬಂಧಿಸಿದ ಅನೇಕ ಕಥೆಗಳಿವೆ, ಅಂತಹ ಒಂದು ಸ್ಟೋರಿಯನ್ನ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ (NDA) ಆಯ್ಕೆಯ ಬಗ್ಗೆ, ಅವರೇ ಸಂದರ್ಶನ ಒಂದರಲ್ಲಿ ಹೇಳಿದ್ದಾರೆ.

ಇದನ್ನೂ ಓದಿ : ಹೆಲಿಕ್ಯಾಪ್ಟರ್ ದುರಂತದಲ್ಲಿ ಬದುಕುಳಿದ ಏಕೈಕ ಜೀವ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್

ರಾವತ್ ಎನ್‌ಡಿಎಗೆ ಆಯ್ಕೆದ ಇಂಟೆರೆಸ್ಟಿಂಗ್ ಕಥೆ

ಯುಪಿಎಸ್‌ಸಿ ನಡೆಸಿದ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (NDA) ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ಅವರನ್ನು ಸಂದರ್ಶನಕ್ಕೆ ಕರೆಯಲಾಗಿತ್ತು ಎಂದು ಬಿಪಿನ್ ರಾವತ್ ಹೇಳಿದ್ದರು. ಈ ಆಯ್ಕೆಗಾಗಿ, ನಾನು ಅಲಹಾಬಾದ್‌ಗೆ ಹೋಗಿದ್ದೆ, ಅಲ್ಲಿ 4 ರಿಂದ 5 ದಿನಗಳ ಕಠಿಣ ತರಬೇತಿ ಮತ್ತು ಪರೀಕ್ಷೆಯ ನಂತರ ಅಂತಿಮ ಸಂದರ್ಶನ ನಡೆಯಿತು. ಎಲ್ಲಾ ಅಭ್ಯರ್ಥಿಗಳು ಸಂದರ್ಶನಕ್ಕಾಗಿ ಕೋಣೆಯ ಹೊರಗೆ ಸಾಲಿನಲ್ಲಿ ನಿಂತಿದ್ದರು ಮತ್ತು ಈ ಸಮಯದಲ್ಲಿ ಬಿಪಿನ್ ರಾವತ್ ಸ್ವಲ್ಪ ಉದ್ವೇಗಗೊಂಡರು, ಏಕೆಂದರೆ ಇದು ಎನ್‌ಡಿಎಗೆ ಪ್ರವೇಶ ಪಡೆಯುವ ಅಥವಾ ಹೊರಗಿಡಬಹುದಾದ ಅವಕಾಶವಾಗಿತ್ತು.

ಬೆಂಕಿ ಪಟ್ಟಣದಿಂದ ಎನ್‌ಡಿಎಗೆ ಪ್ರವೇಶ

ಬಿಪಿನ್ ರಾವತ್, 'ಸಂದರ್ಶನ ಸಭಾಂಗಣದಲ್ಲಿ ಬ್ರಿಗೇಡಿಯರ್ ಶ್ರೇಣಿಯ ಅಧಿಕಾರಿಗಳು ಹಾಜರಿದ್ದರು. ಅವರು ನನ್ನ ಹವ್ಯಾಸವನ್ನು ಕೇಳಿದರು. ನನಗೆ ಟ್ರೆಕ್ಕಿಂಗ್ ಎಂದರೆ ತುಂಬಾ ಇಷ್ಟ ಎಂದು ಅವರಿಗೆ ಹೇಳಿದೆ. ನೀವು ಟ್ರೆಕ್ಕಿಂಗ್‌ಗೆ ಹೋಗಲು ಬಯಸಿದರೆ ಮತ್ತು ಟ್ರೆಕ್ಕಿಂಗ್ 4-5 ದಿನಗಳವರೆಗೆ ಇದ್ದರೆ, ನಿಮ್ಮೊಂದಿಗೆ ಇರಿಸಿಕೊಳ್ಳಲು ಬಯಸುವ ಪ್ರಮುಖ ವಸ್ತುವನ್ನು ಹೆಸರಿಸಿ ಎಂದು ಅವರು ಕೇಳಿದರು. ಈ ಸಂದರ್ಭದಲ್ಲಿ ನಾನು ಅಂತಹ ಪರಿಸ್ಥಿತಿಯಲ್ಲಿ ನನ್ನೊಂದಿಗೆ ಬೆಂಕಿ ಪಟ್ಟಣ(Matchbox)ವನ್ನು ಇಟ್ಟುಕೊಳ್ಳುತ್ತೇನೆ ಎಂದು ಹೇಳಿದ್ದೆ.

ಈ ಬಗ್ಗೆ ಅಧಿಕಾರಿಯೊಬ್ಬರು ಏಕೆ ಬೆಂಕಿ ಪಟ್ಟಣ ಎಂದರು? ಹಾಗಾಗಿ ಬೆಂಕಿ ಪಟ್ಟಣದಿಂದ ನಾನು ಅನೇಕ ಕೆಲಸಗಳನ್ನು ಮಾಡಬಲ್ಲೆ ಎಂದೆ. ಬಿಪಿನ್ ರಾವತ್ ಅವರಿಗೆ, 'ಪ್ರಾಚೀನ ಕಾಲದಲ್ಲಿ ಮನುಷ್ಯನು ಕಾಡಿನಲ್ಲಿ ವಾಸಿಸುತ್ತಿದ್ದಾಗ, ಬೆಂಕಿಯನ್ನು ಮೊದಲು ಕಂಡುಹಿಡಿದನು, ಆದ್ದರಿಂದ ನನ್ನ ದೃಷ್ಟಿಯಲ್ಲಿ ಬೆಂಕಿ ಪಟ್ಟಣ ನನಗೆ ಅತ್ಯಂತ ಮುಖ್ಯವಾದ ವಸ್ತುವಾಗಿದೆ' ಎಂದು ಹೇಳಿದ್ದರು.

ಇದನ್ನೂ ಓದಿ : CDS General Bipin Rawat: ಸಿಡಿಎಸ್ ಬಿಪಿನ್ ರಾವತ್ ಅವರ ಹೆಲಿಕಾಪ್ಟರ್ ಅಪಘಾತ: ಕೊನೆಯ ಕ್ಷಣದಲ್ಲಿ ಏನಾಯ್ತುಇಲ್ಲಿದೆ ವಿಡಿಯೋ

2015ರಲ್ಲಿಯೂ ಜನರಲ್ ರಾವತ್ ಅಪಘಾತಕ್ಕೆ ಒಳಗಾಗಿದ್ದರು

2015 ರಲ್ಲಿಯೂ ಸಹ ಜನರಲ್ ಬಿಪಿನ್ ರಾವತ್(CDS General Bipin Rawat) ಅವರು ಇದೇ ರೀತಿಯ ಅಪಘಾತಕ್ಕೆ ಒಳಗಾಗಿದ್ದರು ಎಂಬುದು ಕೆಲವೇ ಜನರಿಗೆ ಗೊತ್ತಿದೆ. ಆ ಸಮಯದಲ್ಲಿ ಅವರನ್ನು ನಾಗಾಲ್ಯಾಂಡ್‌ನಲ್ಲಿ ನಿಯೋಜಿಸಲಾಗಿತ್ತು ಮತ್ತು ಕಾರ್ಯಾಚರಣೆಯ ಸಮಯದಲ್ಲಿ ಅವರ ಹೆಲಿಕಾಪ್ಟರ್ ಅಪಘಾತಕ್ಕೀಡಾಯಿತು. ಈ ಹೆಲಿಕಾಪ್ಟರ್‌ನ ಹೆಸರು ಚೀತಾ ಮತ್ತು ಇದನ್ನು ಸಾಕಷ್ಟು ಆಧುನಿಕವೆಂದು ಪರಿಗಣಿಸಲಾಗಿತ್ತು. ಈ ಅಪಘಾತದ ನಂತರ, ಜನರಲ್ ರಾವತ್ ಅವರು ಸುರಕ್ಷಿತವಾಗಿಲ್ಲ ಎಂದು ಹಲವರು ಭಾವಿಸಿದ್ದರು, ಆದರೆ ರಕ್ಷಣಾ ಕಾರ್ಯಾಚರಣೆಯ ನಂತರ, ಅವರು ಈ ಅಪಘಾತದಲ್ಲಿ ಬದುಕುಳಿದರು ಎಂದು ವರದಿಯಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News