Coronavirus Return : ಒಂದೇ ದಿನಕ್ಕೆ 1.15 ಲಕ್ಷ ಹೊಸ ಪ್ರಕರಣಗಳು ವರದಿ, ಕರ್ನಾಟಕವೂ ಸೇರಿ ಕೆಲ ರಾಜ್ಯಗಳಲ್ಲಿ ಹೆಚ್ಚು ಕೇಸ್

ಲಭ್ಯ ಮಾಹಿತಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ 1,15,239 ಹೊಸ ಕರೋನಾ ಪ್ರಕರಣಗಳು ವರದಿಯಾಗಿವೆ. ಕರೋನಾ ಸಾಂಕ್ರಾಮಿಕ ಪ್ರಾರಂಭವಾದಾಗಿನಿಂದ, ಇಷ್ಟು ಪ್ರಮಾಣದಲ್ಲಿ ಹೊಸ ಕೇಸ್ ಗಳು ವರದಿಯಾಗಿರುವುದು  ಇದೇ ಮೊದಲು ಎನ್ನಲಾಗಿದೆ. 

Written by - Ranjitha R K | Last Updated : Apr 7, 2021, 09:04 AM IST
  • ಆತಂಕ ಸೃಷ್ಟಿಸಿದೆ ಕರೋನಾ ವೈರಸ್ ಎರಡನೇ ಅಲೆ
  • ಕಳೆದ 24 ಗಂಟೆಗಳಲ್ಲಿ ಅತಿ ಹೆಚ್ಚು ಕೊವಿಡ್ ಪ್ರಕರಣಗಳು ವರದಿ
  • ಕರ್ನಾಟಕವು ಸೇರಿದಂತೆ ಈ ರಾಜ್ಯಗಳಲ್ಲಿ ಹೆಚ್ಚು ಕೇಸ್
Coronavirus Return : ಒಂದೇ ದಿನಕ್ಕೆ 1.15 ಲಕ್ಷ ಹೊಸ ಪ್ರಕರಣಗಳು ವರದಿ, ಕರ್ನಾಟಕವೂ ಸೇರಿ ಕೆಲ ರಾಜ್ಯಗಳಲ್ಲಿ ಹೆಚ್ಚು ಕೇಸ್   title=
ಆತಂಕ ಸೃಷ್ಟಿಸಿದೆ ಕರೋನಾ ವೈರಸ್ ಎರಡನೇ ಅಲೆ (file photo)

ನವದೆಹಲಿ : Coronavirus Return : ಕರೋನಾ ವೈರಸ್ ಎರಡನೇ ಅಲೆ ಇದೀಗ ದೇಶದಲ್ಲಿ ಆತಂಕ ಸೃಷ್ಟಿ ಮಾಡಿದೆ. ದಿನದಿಂದ ದಿನಕ್ಕೆ   ಹೊಸ ಪ್ರಕರಣಗಳ (New cases) ಸಂಖ್ಯೆಯಲ್ಲಿ ಹೆಚ್ಚಳ ಕಂಡುಬರುತ್ತಲೇ ಇದೆ.  ಕಳೆದ 24 ಗಂಟೆಗಳಲ್ಲಿ ಇಲ್ಲಿವರೆಗೆ ಅತಿ  ಹೆಚ್ಚು ಪ್ರಕರಣಗಳು ವರದಿಯಾಗಿದೆ. ಒಂದರ್ಥದಲ್ಲಿ ಹಳೆಯ ಎಲ್ಲಾ ದಾಖಲೆಗಳನ್ನು ಮುರಿದಿದೆ ಎನ್ನಲಾಗಿದೆ. 

ಲಭ್ಯ ಮಾಹಿತಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ 1,15,239 ಹೊಸ ಕರೋನಾ (Coronavirus) ಪ್ರಕರಣಗಳು ವರದಿಯಾಗಿವೆ. ಕರೋನಾ ಸಾಂಕ್ರಾಮಿಕ  ಪ್ರಾರಂಭವಾದಾಗಿನಿಂದ, ಇಷ್ಟು ಪ್ರಮಾಣದಲ್ಲಿ ಹೊಸ ಕೇಸ್ ಗಳು ವರದಿಯಾಗಿರುವುದು  ಇದೇ ಮೊದಲು ಎನ್ನಲಾಗಿದೆ. ಒಂದೇ ದಿನದಲ್ಲಿ ಒಂದು ಲಕ್ಷ ಹೊಸ ಕರೋನ (COVID-19) ಪ್ರಕರಣಗಳು ವರದಿಯಾಗಿರುವುದನ್ನು ಕೇಂದ್ರ ಸರ್ಕಾರ ಕೂಡಾ ಗಂಭೀರವಾಗಿ ಪರಿಗಣಿಸಿದೆ. 

ಇದನ್ನೂ ಓದಿ :  Corona Vaccination: ಬೇಗ ಲಸಿಕೆ ಹಾಕಿಸಿಕೊಂಡು ಚಿನ್ನ ನಿಮ್ಮದಾಗಿಸಿ!

ಇದಕ್ಕೂ ಮುನ್ನ, ಭಾನುವಾರ, 1,03,764 ಹೊಸ ಪ್ರಕರಣಗಳು ವರದಿಯಾಗಿತ್ತು. ಡಿಸೆಂಬರ್ ತಿಂಗಳಲ್ಲಿ 97,894 ಹೊಸ ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿ ಇದುವರೆಗೆ ಕರೋನಾ ಸಾಂಕ್ರಾಮಿಕ ರೋಗದಿಂದ 1,66,207 ಜನರು ಮೃತಪಟ್ಟಿದ್ದಾರೆ. ಇನ್ನು ಸೋಂಕಿತರ ಸಂಖ್ಯೆ 8,38,650 ಅನ್ನು  ತಲುಪಿದೆ. 

ಕೆಲವೊಂದು ರಾಜ್ಯಗಳಲ್ಲಿ ಮಾತ್ರ ಅತಿ ಹೆಚ್ಚು ಕರೋನಾ ಪ್ರಕರಣಗಳು ವರದಿಯಾಗುತ್ತಿವೆ. ಈ ರಾಜ್ಯಗಳ ಪೈಕಿ ಕರ್ನಾಟಕವು (Karnataka) ಇದೆ ಎನ್ನುವುದು ಗಮನಾರ್ಹ. ಇನ್ನುಳಿದಂತೆ  ಮಹಾರಾಷ್ಟ್ರ, ಪಂಜಾಬ್, ಛತ್ತೀಸ್ ಘಢ, ದೆಹಲಿಯಲ್ಲಿಯೂ  (Delhi) ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದೆ. ಈ ಕಾರಣದಿಂದಾಗಿ ರಾಷ್ಟ್ರ ರಾಜಧಾನಿಯಲ್ಲಿ ರಾತ್ರಿ ಕರ್ಫ್ಯೂ (Night Curfew) ಹೇರಲಾಗಿದೆ. ಸೆಪ್ಟೆಂಬರ್ 30 ರವರೆಗೆ ರಾತ್ರಿ ಕರ್ಫ್ಯೂವನ್ನು ಜಾರಿಗೊಳಿಸಲಾಗಿದೆ.   ರಾತ್ರಿ  10 ರಿಂದ ಬೆಳಿಗ್ಗೆ 5 ಗಂಟೆವರೆಗೆ  ನಿರ್ಬಂಧ ಹೇರಲಾಗಿದೆ. 

ಇದನ್ನೂ ಓದಿ :  ಕೊರೊನಾ ಮಾರ್ಗಸೂಚಿ ಬಗ್ಗೆ ಜಾಗೃತಿ ಮೂಡಿಸಲು ಟಿವಿ ಚಾನೆಲ್ ಗಳಿಗೆ ಸರ್ಕಾರ ಮನವಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News