West Bengal assembly election 2021: ಪ.ಬಂಗಾಳದ ನಂದಿಗ್ರಾಮದಲ್ಲಿ ಮೊಳಗಲಿದೆ ರೈತರ ಕಹಳೆ

ಕಳೆದ ವಾರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗಾಯಗೊಂಡಿರುವ ಬಗ್ಗೆ ತೃಣಮೂಲ ವಿರುದ್ಧ ಬಿಜೆಪಿ ತೀವ್ರ ಹೋರಾಟದ ಮಧ್ಯೆ, ರೈತ ಮುಖಂಡ ರಾಕೇಶ್ ಟಿಕಾಯತ್ ಅವರು ಇಂದು ಪಶ್ಚಿಮ ಬಂಗಾಳದ ನಂದಿಗ್ರಾಮ್‌ಗೆ ಭೇಟಿ ನೀಡುತ್ತಿದ್ದು, ಅಲ್ಲಿ ಅವರು ಮಹಾಪಂಚಾಯತ್ ಸಭೆ ನಡೆಸಲಿದ್ದಾರೆ.

Last Updated : Mar 13, 2021, 09:38 PM IST
West Bengal assembly election 2021: ಪ.ಬಂಗಾಳದ ನಂದಿಗ್ರಾಮದಲ್ಲಿ ಮೊಳಗಲಿದೆ ರೈತರ ಕಹಳೆ  title=

ನವದೆಹಲಿ: ಕಳೆದ ವಾರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗಾಯಗೊಂಡಿರುವ ಬಗ್ಗೆ ತೃಣಮೂಲ ವಿರುದ್ಧ ಬಿಜೆಪಿ ತೀವ್ರ ಹೋರಾಟದ ಮಧ್ಯೆ, ರೈತ ಮುಖಂಡ ರಾಕೇಶ್ ಟಿಕಾಯತ್ ಅವರು ಇಂದು ಪಶ್ಚಿಮ ಬಂಗಾಳದ ನಂದಿಗ್ರಾಮ್‌ಗೆ ಭೇಟಿ ನೀಡುತ್ತಿದ್ದು, ಅಲ್ಲಿ ಅವರು ಮಹಾಪಂಚಾಯತ್ ಸಭೆ ನಡೆಸಲಿದ್ದಾರೆ.

ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ಆಂದೋಲನ್-ಜೀವಿ ಹೇಳಿಕೆಗೆ ರಾಕೇಶ್ ಟಿಕಾಯಿತ್ ಆಕ್ರೋಶ

ದೆಹಲಿ-ಯುಪಿ ಗಡಿಯಲ್ಲಿ ಮೂರು ಕೇಂದ್ರ ಕೃಷಿ ಕಾನೂನುಗಳ ವಿರುದ್ಧ ಬೃಹತ್ ರೈತರ ಪ್ರತಿಭಟನೆಗೆ ಮುಂದಾಗಿರುವ ಟಿಕಾಯತ್ ಅವರನ್ನು ಕೋಲ್ಕತ್ತಾದಲ್ಲಿ ತೃಣಮೂಲ ಸಂಸದ ಡೋಲಾ ಸೇನ್ ಸ್ವಾಗತಿಸಿದರು.ನಂದಿಗ್ರಾಮ್‌ಗೆ ತೆರಳುವ ಮೊದಲು, ಕೃಷಿ ವಿಷಯಗಳ ಬಗ್ಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕಟು ಟೀಕಾಕಾರರಲ್ಲಿ ಒಬ್ಬರಾದ ಟಿಕಾಯತ್ ಅವರು ಕೋಲ್ಕತ್ತಾದ ಮಾಯೊ ರಸ್ತೆಯಲ್ಲಿ ಪಕ್ಷದ ಮುಖಂಡರನ್ನು ಭೇಟಿಯಾದರು.

ಇದನ್ನೂ ಓದಿ: Tractor Rally: 'ರೈತರ 40 ಲಕ್ಷ ಟ್ರಾಕ್ಟರ್‌ನಿಂದ ಸಂಸತ್‌ ಮುತ್ತಿಗೆ, ಇಂಡಿಯಾ ಗೇಟ್‌ ಬಳಿ ಉಳುಮೆ

ಇದೇ ವೇಳೆ ಮಮತಾ ಬ್ಯಾನರ್ಜಿ ಮೇಲಿನ ಹಲ್ಲೆಯನ್ನು ದುರದೃಷ್ಟಕರ ಎಂದು ಕರೆದ ಟಿಕಾಯತ್ (Rakesh Tikait) ಅವರು, ಅಗತ್ಯವಿದ್ದರೆ ಬಿಜೆಪಿ ವಿರುದ್ಧ ಪ್ರಚಾರ ಮಾಡಲು ಬಂಗಾಳದಾದ್ಯಂತ ಪ್ರಯಾಣಿಸುವುದಾಗಿ ಹೇಳಿದರು.ಇದೇ ವೇಳೆ ಅವರಿಗೆ ರಾಜ್ಯದ ಜನರು ಯಾವ ಸಂದೇಶವನ್ನು ನೀಡುತ್ತಾರೆ ಎಂದು ಕೇಳಿದಾಗ,'ಬಿಜೆಪಿಗೆ ಮತ ಚಲಾಯಿಸದಂತೆ ನಾನು ಜನರಿಗೆ ಮನವಿ ಮಾಡುತ್ತೇನೆ. ಈ ಪಕ್ಷವು ರಾಷ್ಟ್ರವನ್ನು ಲೂಟಿ ಮಾಡಿದೆ.ಇದು ಉದ್ಯಮಿಗಳ ಪಕ್ಷವಾಗಿದೆ" ಎಂದು ಹೇಳಿದರು.

ಮಮತಾ ಬ್ಯಾನರ್ಜಿ ಅವರು ತಮ್ಮ ಮತದಾನದ ನಾಮಪತ್ರವನ್ನು ವಿಧಾನಸಭಾ ಸ್ಥಾನದಿಂದ ಸಲ್ಲಿಸಿದ್ದಾರೆ ಮತ್ತು ಬಿಜೆಪಿಯ ಸುವೆಂಡು ಅಧಿಕಾರಿಯನ್ನು ಎದುರಿಸಲಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News