ಆಸ್ಪತ್ರೆ ಆವರಣದಲ್ಲಿಯೇ ವೈದ್ಯೆ ಆತ್ಮಹತ್ಯೆ, ತನಿಖೆಗೆ ಆದೇಶ

ಜೈಪುರದ ಸಂಗನೇರಿ ಗೇಟ್‌ನಲ್ಲಿರುವ  ಅಸುಬಾಹಾ ಆಸ್ಪತ್ರೆ ಆವರಣದಲ್ಲಿರುವ ಹಾಸ್ಟೆಲ್ ನಲ್ಲಿ ಈ ಘಟನೆ ನಡೆದಿದೆ.

Last Updated : Jul 17, 2019, 04:11 PM IST
ಆಸ್ಪತ್ರೆ ಆವರಣದಲ್ಲಿಯೇ ವೈದ್ಯೆ ಆತ್ಮಹತ್ಯೆ, ತನಿಖೆಗೆ ಆದೇಶ title=

ಜೈಪುರ: ರಾಜಧಾನಿ ಜೈಪುರದಲ್ಲಿ ಮಹಿಳಾ ವೈದ್ಯರೊಬ್ಬರು ಆಸ್ಪತ್ರೆಯ ಆವರಣದಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ನಡೆದಿದೆ.

ಜೈಪುರದ ಸಂಗನೇರಿ ಗೇಟ್‌ನಲ್ಲಿರುವ  ಅಸುಬಾಹಾ ಆಸ್ಪತ್ರೆ ಆವರಣದಲ್ಲಿರುವ ಹಾಸ್ಟೆಲ್ ನಲ್ಲಿ ಈ ಘಟನೆ ನಡೆದಿದ್ದು, ನೇಣುಬಿಗಿದ ಸ್ಥಿತಿಯಲ್ಲಿದ್ದ ವೈದ್ಯೆ ಸಾಕ್ಷಿ ಗುಪ್ತಾ ಅವರ ಮೃತದೇಹವನ್ನು ಕಂಡ ಸಿಬ್ಬಂದಿ, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಸ್ಥಳಕ್ಕಾಗಮಿಸಿದ ಲಲ್ಕೋಟಿ ಠಾಣೆ ಪೊಲೀಸರು ಶವವನ್ನು ಇಳಿಸಿ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. 

ಮೃತ ವೈದ್ಯೆ ಸಾಕ್ಷಿ ಗುಪ್ತಾ ದೆಹಲಿ ನಿವಾಸಿಯಾಗಿದ್ದು, ಸ್ನಾತಕೋತ್ತರ ಪದವಿಯ ಮೊದಲನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದರು ಎನ್ನಲಾಗಿದೆ. ಸದ್ಯ ಪೊಲೀಸರು ಮೃತರ ಸಂಬಂಧಿಕರಿಗೆ ಮಾಹಿತಿ ರವಾನಿಸಿದ್ದು, ಆತ್ಮಹತ್ಯೆಗೆ ಕಾರಣವೇನು ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
 

Trending News