ಸೀರೆಯುಟ್ಟು ಮಂಗಳಮುಖಿಯರ ಬೆಂಬಲಕ್ಕೆ ನಿಂತ ಗೌತಮ್ ಗಂಭೀರ್!

ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಏಳನೇ ಆವೃತ್ತಿಯ ಹಿಜಿರಾ ಹಬ್ಬದಲ್ಲಿ ಭಾಗವಹಿಸಿದ್ದ ಗಂಭೀರ್​ ಮಂಗಳ ಮುಖಿಯರನ್ನು ಬೆಂಬಲಿಸುವ ಸಲುವಾಗಿ ಸೀರೆ ಧರಿಸಿದ್ದರು.

Last Updated : Sep 13, 2018, 07:05 PM IST
ಸೀರೆಯುಟ್ಟು ಮಂಗಳಮುಖಿಯರ ಬೆಂಬಲಕ್ಕೆ ನಿಂತ ಗೌತಮ್ ಗಂಭೀರ್! title=

ನವದೆಹಲಿ: ಸದಾ ತಮ್ಮ ನೇರ ಹೇಳಿಕೆಗಳಿಗೆ ಹಾಗೂ ಜನಪರ ಕಾರ್ಯಗಳಿಗೆ ಹೆಸರಾಗಿರುವ ಕ್ರಿಕೆಟರ್ ಗೌತಮ್ ಗಂಭೀರ್ ಇದೀಗ ನಾರಿಯಂತೆ ಸೀರೆಯುಟ್ಟು, ಬಿಂದಿ ಇಟ್ಟುಕೊಂಡು ಮತ್ತೊಮ್ಮೆ ಸುದ್ದಿಯಾಗಿದ್ದಾರೆ. 

ಅಷ್ಟಕ್ಕೂ ಗಂಭೀರ್ ಸೀರೆ ಉಟ್ಟಿದ್ಯಾಕೆ ಎಂದು ಆಲೋಚಿಸುತ್ತಿದ್ದೀರಾ? ಅದಕ್ಕೂ ಒಂದು ಕಾರಣವಿದೆ. ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಏಳನೇ ಆವೃತ್ತಿಯ ಹಿಜಿರಾ ಹಬ್ಬದಲ್ಲಿ ಭಾಗವಹಿಸಿದ್ದ ಗಂಭೀರ್​ ಮಂಗಳ ಮುಖಿಯರನ್ನು ಬೆಂಬಲಿಸುವ ಸಲುವಾಗಿ ಸೀರೆ ಧರಿಸಿದ್ದರು. ಇದೀಗ ಈ ಫೋಟೋ ಸಖತ್ ವೈರಲ್ ಆಗಿದೆ. 

ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್ ಸೆಕ್ಷನ್ 377ರ ಪರವಾಗಿ ತೀರ್ಪು ನೀಡಿ ಸಲಿಂಗ ಕಾಮ ಅಪರಾಧವಲ್ಲ ಎಂದು ಹೇಳಿತ್ತು. ಇದರ ಬೆನ್ನಲ್ಲೇ ಕ್ರಿಕೆಟರ್ ಗೌತಮ್ ಗಂಭೀರ್ ಕೂಡ ಸಮಾಜದಲ್ಲಿ ಮಂಗಳಮುಖಿಯರಿಗೆ ಸ್ಥಾನಮಾನ ಒದಗಿಸಿಕೊಡುವ ನಿಟ್ಟಿನಲ್ಲಿ ಬೆಂಬಲಕ್ಕೆ ನಿಲ್ಲುವುದಾಗಿ ಹೇಳಿದ್ದಾರೆ.
 

Trending News