ನವದೆಹಲಿ: ಭಾರತದಿಂದ ಕರ್ತಾರ್ಪುರ ಕಾರಿಡಾರ್ಗೆ(Kartarpur Corridor) ಹೋಗುವ ಭಕ್ತರ ಬಗ್ಗೆ ಅಗತ್ಯ ನಿರ್ಧಾರಗಳನ್ನು ಪಾಕಿಸ್ತಾನದ ಫೆಡರಲ್ ಕ್ಯಾಬಿನೆಟ್ ಸಭೆಯಲ್ಲಿ ತೆಗೆದುಕೊಂಡಿದ್ದು, ಭಕ್ತರಿಗೆ ಉಡುಗೊರೆಯೊಂದನ್ನು ನೀಡಿದೆ.
ಈಗ ಕರ್ತಾರ್ಪುರ ಕಾರಿಡಾರ್ಗೆ ಭೇಟಿ ನೀಡುವ ಭಾರತೀಯರಿಗೆ ಪಾಸ್ಪೋರ್ಟ್ ಅಗತ್ಯವಿರುವುದಿಲ್ಲ, ಆದರೆ ಮಾನ್ಯ ಗುರುತಿನ ಚೀಟಿ ಅತ್ಯಗತ್ಯ. ಸಿಖ್ ಭಕ್ತರಿಗೆ ಮಾತ್ರ ಪಾಸ್ಪೋರ್ಟ್ ವಿನಾಯಿತಿ ನೀಡಲಾಗಿದ್ದು, ಅವರು 10 ದಿನಗಳ ಮುಂಚಿತವಾಗಿ ನೋಂದಾಯಿಸಬೇಕಾಗಿಲ್ಲ.
ಕರ್ತಾರ್ಪುರ ಕಾರಿಡಾರ್ಗೆ ಹೋಗುವ ಯಾತ್ರಾರ್ಥಿಗಳಿಂದ ಇಪ್ಪತ್ತು ಡಾಲರ್ ಸೇವಾ ಶುಲ್ಕ ವಿಧಿಸಲು ಪಾಕಿಸ್ತಾನ ಆಡಳಿತ ನಿರ್ಧರಿಸಿದೆ. ಕರ್ತಾರ್ಪುರ ಪ್ರಯಾಣಿಕರಿಂದ ವಾರ್ಷಿಕವಾಗಿ 65 3.65 ಮಿಲಿಯನ್ ಗಳಿಸಲಿದೆ ಎಂದು ಪಾಕಿಸ್ತಾನ ಅಂದಾಜಿಸಿದೆ. ಆದರೆ ಉದ್ಘಾಟನಾ ಸಮಾರಂಭ ಮತ್ತು ಗುರುನಾನಕ್ ದೇವ್ ಜಿ(ಸಿಖ್ ಧರ್ಮದ ಸಂಸ್ಥಾಪಕ ಗುರುನಾನಕ್ ದೇವ್ ಜಿ) ಅವರ 550 ನೇ ಜನ್ಮ ದಿನಾಚರಣೆಯಂದು ಕರ್ತಾರ್ಪುರಕ್ಕೆ ಬರುವ ಯಾತ್ರಾರ್ಥಿಗಳಿಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಪಾಕಿಸ್ತಾನ ತಿಳಿಸಿದೆ..
ಸಮಾರಂಭದಲ್ಲಿ ಭಾರತದಿಂದ ಸುಮಾರು 2 ಸಾವಿರ ಭಾರತೀಯ ಯಾತ್ರಿಕರು ಪಾಕಿಸ್ತಾನಕ್ಕೆ ಆಗಮಿಸಲಿದ್ದಾರೆ. ಆದರೆ, ಕಾರಿಡಾರ್ ಉದ್ಘಾಟನೆಯ ನಂತರ ಭಾರತದಿಂದ ಪ್ರತಿದಿನ 5,000 ಮಂದಿ ಭಕ್ತರಿಗೆ ಮಾತ್ರ ಇಲ್ಲಿಗೆ ಭೇಟಿ ನೀಡಲು ಸಾಧ್ಯವಾಗುತ್ತದೆ.
ನವೆಂಬರ್ 12 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕರ್ತಾರ್ಪುರ್ ಕಾರಿಡಾರ್ ಅನ್ನು ಉದ್ಘಾಟಿಸಲಿದ್ದು, ನವೆಂಬರ್ 12 ರಂದು ಗುರು ದೇವ್ ಅವರ 550 ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಕರ್ತಾರ್ಪುರ್ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡುವ ಸಿಖ್ ಯಾತ್ರಿಕರ ಮೊದಲ ಬ್ಯಾಚ್ ಅನ್ನು ಕಳುಹಿಸಲಿದ್ದಾರೆ.
ಇದು ಸಿಖ್ ಸಮುದಾಯದ ಪವಿತ್ರ ದೇವಾಲಯಗಳಲ್ಲಿ ಒಂದಾಗಿದೆ. ಅಲ್ಲಿ ಮೊದಲ ಸಿಖ್ ಗುರುವಿನ 550 ನೇ ಜನ್ಮದಿನಾಚರಣೆಯನ್ನು ಆಚರಿಸಲು ಭಕ್ತರು ಬರುತ್ತಿದ್ದಾರೆ. ಗುರುದ್ವಾರ ದರ್ಬಾರ್ ಸಾಹಿಬ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಕರ್ತಾರ್ಪುರ್ ಸಾಹಿಬ್ ಗುರುದ್ವಾರವು ಸಿಖ್ ಧರ್ಮದಲ್ಲಿ ವಿಶೇಷ ಮನ್ನಣೆಯನ್ನು ಹೊಂದಿದೆ. ಅಲ್ಲಿ ಗುರುನಾನಕ್ ದೇವ್ ಜಿ 18 ವರ್ಷಗಳನ್ನು ಕಳೆದರು ಎಂಬುದು ಎಲ್ಲರ ನಂಬಿಕೆ.
ಭಾರತದ ಗಡಿಯಿಂದ ಸುಮಾರು 4 ಕಿಲೋಮೀಟರ್ ದೂರದಲ್ಲಿರುವ ಕರ್ತಾರ್ಪುರ ಗುರುದ್ವಾರವನ್ನು 16 ನೇ ಶತಮಾನದಲ್ಲಿ ಗುರುನಾನಕ್ ಅವರ ನಿರ್ವಾಣದ ಸ್ಥಳದಲ್ಲಿ ನಿರ್ಮಿಸಲಾಗಿದೆ ಎಂದು ನಂಬಲಾಗಿದೆ. ಇದು 4.2 ಕಿ.ಮೀ ಉದ್ದದ ಕರ್ತಾರ್ಪುರ್ ಸಾಹಿಬ್ ಕಾರಿಡಾರ್ನೊಂದಿಗೆ ಸಂಪರ್ಕಗೊಳ್ಳಲಿದೆ.