ಸಿಹಿ ಸುದ್ದಿ! ಸರ್ಕಾರಿ ನೌಕರರಿಗೆ ಹೆಚ್ಚಿನ ವೇತನ ಶ್ರೇಣಿ; ಶೇ 15% ವರೆಗೆ ಸಂಬಳ ಹೆಚ್ಚಳ

ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಅವರು ಜನವರಿ 3 ರ ಮೊದಲು ಕೆಲಸ ಮಾಡುವ ಮತ್ತು ಹೆಚ್ಚಿನ ವೇತನ ಶ್ರೇಣಿಯಿಂದ ವಂಚಿತರಾದ ನೌಕರರು ಇತರರಿಗೆ ಸಮಾನವಾಗಿ ಸಂಬಳವನ್ನು ಪಡೆಯುತ್ತಾರೆ ಎಂದು ಘೋಷಿಸಿದ್ದಾರೆ.

Written by - Zee Kannada News Desk | Last Updated : Apr 3, 2022, 09:00 PM IST
  • ಬಹುತೇಕ ಹಿಮಾಚಲದ (Himachal Pradesh) ಸರ್ಕಾರಿ ನೌಕರರಿಗೆ ಪರಿಷ್ಕೃತ ವೇತನ ಶ್ರೇಣಿಯನ್ನು ನೀಡಲಾಗಿದ್ದು,
  • ಸರಾಸರಿಯಾಗಿ ಪ್ರತಿಯೊಬ್ಬ ನೌಕರರು ತಮ್ಮ ವೇತನದಲ್ಲಿ ಶೇ.12 ರಿಂದ 15 ರಷ್ಟು ಹೆಚ್ಚಳದ ಲಾಭವನ್ನು ಪಡೆದಿದ್ದಾರೆ ಎಂದು ಅವರು ಹೇಳಿದ್ದಾರೆ.
 ಸಿಹಿ ಸುದ್ದಿ! ಸರ್ಕಾರಿ ನೌಕರರಿಗೆ ಹೆಚ್ಚಿನ ವೇತನ ಶ್ರೇಣಿ; ಶೇ 15% ವರೆಗೆ ಸಂಬಳ ಹೆಚ್ಚಳ title=

ನವದೆಹಲಿ: ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಅವರು ಜನವರಿ 3 ರ ಮೊದಲು ಕೆಲಸ ಮಾಡುವ ಮತ್ತು ಹೆಚ್ಚಿನ ವೇತನ ಶ್ರೇಣಿಯಿಂದ ವಂಚಿತರಾದ ನೌಕರರು ಇತರರಿಗೆ ಸಮಾನವಾಗಿ ಸಂಬಳವನ್ನು ಪಡೆಯುತ್ತಾರೆ ಎಂದು ಘೋಷಿಸಿದ್ದಾರೆ.

ಅಂತಹ ಉದ್ಯೋಗಿಗಳು ಎರಡು ವರ್ಷಗಳ ನಿಯಮಿತ ಸೇವೆಯನ್ನು ಪೂರ್ಣಗೊಳಿಸಿದ ನಂತರ ಪ್ರಯೋಜನವನ್ನು ಪಡೆಯುತ್ತಾರೆ ಎಂದು ಠಾಕೂರ್ (CM Jairam Thakur) ಭಾನುವಾರ (ಏಪ್ರಿಲ್ 3) ಹೇಳಿದರು. ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ಈ ಕ್ರಮವನ್ನು ಘೋಷಿಸಲಾಗಿದೆ.

ಬಹುತೇಕ  ಹಿಮಾಚಲದ (Himachal Pradesh) ಸರ್ಕಾರಿ ನೌಕರರಿಗೆ ಪರಿಷ್ಕೃತ ವೇತನ ಶ್ರೇಣಿಯನ್ನು ನೀಡಲಾಗಿದ್ದು, ಸರಾಸರಿಯಾಗಿ ಪ್ರತಿಯೊಬ್ಬ ನೌಕರರು ತಮ್ಮ ವೇತನದಲ್ಲಿ ಶೇ.12 ರಿಂದ 15 ರಷ್ಟು ಹೆಚ್ಚಳದ ಲಾಭವನ್ನು ಪಡೆದಿದ್ದಾರೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Petrol-diesel price: ಪೆಟ್ರೋಲ್-ಡೀಸೆಲ್ ದರದಲ್ಲಿ ಮತ್ತೆ ಏರಿಕೆ, 13 ದಿನಗಳಲ್ಲಿ 11 ಬಾರಿ ಏರಿಕೆ

ಇದೇ ವೇಳೆ ರಾಜ್ಯ ಸರ್ಕಾರವು ರಾಜ್ಯದ ಸುಮಾರು 1.50 ಲಕ್ಷ ಪಿಂಚಣಿದಾರರ ಪಿಂಚಣಿಯನ್ನೂ ಹೆಚ್ಚಿಸಿದೆ. ರಾಜ್ಯ ಸರ್ಕಾರವು 2018 ಮತ್ತು 2022 ರ ನಡುವಿನ ವರ್ಷಗಳಲ್ಲಿ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ 7,801 ಕೋಟಿ ಮೌಲ್ಯದ ಪ್ರಯೋಜನಗಳನ್ನು ಒದಗಿಸಿದೆ.

2016 ರ ಮೊದಲು ನಿವೃತ್ತರಾದ ಹಿಮಾಚಲ ಪ್ರದೇಶ ರಾಜ್ಯ ನೌಕರರು ಈಗ ಪಿಂಚಣಿಯಲ್ಲಿ 15 ರಿಂದ 20% ಹೆಚ್ಚಳದ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಮತ್ತೊಂದೆಡೆ, 2016 ರ ನಂತರ ನಿವೃತ್ತರಾದ ಸುಮಾರು 40,000 ಉದ್ಯೋಗಿಗಳಿಗೆ ಶೀಘ್ರದಲ್ಲೇ ಪ್ರಯೋಜನವಾಗಲಿದೆ.ನೌಕರರು ಮತ್ತು ಪಿಂಚಣಿದಾರರಿಗೆ ನೀಡಲಾದ ಒಟ್ಟು ಮಧ್ಯಂತರ ಪರಿಹಾರ ಮೊತ್ತದ 6,500 ಕೋಟಿ ರೂ.ಗಳಲ್ಲಿ 3,500 ಕೋಟಿ ರೂ.ಗಳನ್ನು ತಮ್ಮ ಸರ್ಕಾರದ ಅವಧಿಯಲ್ಲಿ ಪಾವತಿಸಲಾಗಿದೆ ಎಂದು ಠಾಕೂರ್ ಹೇಳಿದರು.

ಇದನ್ನೂ ಓದಿ: Nepal PM India Visit: ನೇಪಾಳದಲ್ಲಿ RuPay ಬಿಡುಗಡೆ ಮಾಡಿದ PM Modi, ಉಭಯ ದೇಶಗಳ ನಡುವೆ ಮಹತ್ವ ಒಪ್ಪಂದಗಳ ಮೇಲೆ ಹಸ್ತಾಕ್ಷರ

ಇದಲ್ಲದೆ, ಠಾಕೂರ್ ಅವರು ಜೂನಿಯರ್ ಆಫೀಸ್ ಅಸಿಸ್ಟೆಂಟ್‌ಗಳಿಗೆ (ಮಾಹಿತಿ ತಂತ್ರಜ್ಞಾನ) ಹೆಚ್ಚಿನ ವೇತನ ಶ್ರೇಣಿಯನ್ನು ಘೋಷಿಸಿದ್ದಾರೆ.ಈ ಉದ್ಯೋಗಿಗಳು ಎರಡು ವರ್ಷಗಳ ನಿಯಮಿತ ಸೇವೆಯನ್ನು ಪೂರ್ಣಗೊಳಿಸಿದ ನಂತರ ಹೆಚ್ಚಿನ ಸಂಬಳವನ್ನು ಪಡೆಯುತ್ತಾರೆ.

ರಾಜ್ಯ ಸರ್ಕಾರವು ತನ್ನ ನೌಕರರ ಕಲ್ಯಾಣಕ್ಕೆ ಯಾವಾಗಲೂ ಆದ್ಯತೆ ನೀಡುತ್ತಿದೆ ಮತ್ತು ಅವರೊಂದಿಗೆ ಸೌಹಾರ್ದಯುತ ಸಂಬಂಧವನ್ನು ಹೊಂದಿದೆ ಎಂದು ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News