ಬರ್ಬರವಾಗಿ ಹೆತ್ತ ತಾಯಿಯನ್ನು ಕೊಂದು “Miss You Amma” ಅಂತ ಫೊಟೋ ಸ್ಟೇಟಸ್‌ ಹಾಕಿದ ಮಗ..!

Son kills mother : ಮಗನೇ ತಾಯಿಯನ್ನು ಕೊಲೆ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋವನ್ನು ಹರಿಬಿಟ್ಟಿರುವ ಘಟನೆ ಭಾರೀ ಆಘಾತವನ್ನುಂಟು ಮಾಡಿದೆ. ಮಾನಸಿಕ ಅಸ್ವಸ್ಥ ತಾಯಿಯೊಂದಿಗೆ ಜಗಳವಾಡಿ ಆಕ್ರೋಶಗೊಂಡ ಪಾಪಿ ಪುತ್ರ ತಾಯಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ಇಲ್ಲಿದೆ..

Written by - Krishna N K | Last Updated : Sep 1, 2024, 06:36 PM IST
    • ನೀಲೇಶ್ ಗೋಸಾಯಿ ತಾಯಿ ಜ್ಯೋತಿಪೆನ್ ಒಂಟಿಯಾಗಿ ಜೀವನ ನಡೆಸುತ್ತಿದ್ದ
    • ಜ್ಯೋತಿಯವರು ಮಾನಸಿಕ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದರು
    • ತಾಯಿಯನ್ನು ಕೊಲೆ ಮಾಡಿ Miss you amma ಅಂತ ಸ್ಟೇಟಸ್‌ ಹಾಕಿದ ಮಗ
ಬರ್ಬರವಾಗಿ ಹೆತ್ತ ತಾಯಿಯನ್ನು ಕೊಂದು “Miss You Amma” ಅಂತ ಫೊಟೋ ಸ್ಟೇಟಸ್‌ ಹಾಕಿದ ಮಗ..! title=

Crime news : ಗುಜರಾತ್‌ನ ರಾಜ್ ಕೋಟ್‌ನ ಭಗತ್ ಸಿಂಗ್ ಜಿ ಎಸ್ಟೇಟ್ ನ ನೀಲೇಶ್ ಗೋಸಾಯಿ (21) ಹೆತ್ತ ತಾಯಿಯನ್ನು ಹತ್ಯೆಗೈದ ಆರೋಪಿ. ಜ್ಯೋತಿ ಬೆನ್ ಖೋಜೈ ಮೃತ ತಾಯಿ. ಜ್ಯೋತಿ ಹಲವು ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ಈಕೆಯ ಮಾನಸಿಕ ಅಸ್ವಸ್ಥೆಯಿಂದಾಗಿ ಕಳೆದ ಒಂದು ವರ್ಷದಿಂದ ಪತಿ ಹಾಗೂ ಇತರೆ ಮಕ್ಕಳು ಆಕೆಯಿಂದ ದೂರವಾಗಿದ್ದರು.

ಇದರಿಂದಾಗಿ ನೀಲೇಶ್ ಗೋಸಾಯಿ ಮತ್ತು ಅವರ ತಾಯಿ ಜ್ಯೋತಿಪೆನ್ ಒಂಟಿಯಾಗಿ ಜೀವನ ನಡೆಸುತ್ತಿದ್ದರು. ಜ್ಯೋತಿಯವರು ಮಾನಸಿಕ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಘಟನೆ ನಡೆಯುವ ಒಂದು ತಿಂಗಳ ಮೊದಲು ಔಷಧಿ ತೆಗೆದುಕೊಳ್ಳುವುದನ್ನು ನಿಲ್ಲಿಸಿದ್ದರು ಎನ್ನಲಾಗಿದೆ. ಇದು ಅವರ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿತು. ಇದರಿಂದ ಜ್ಯೋತಿ ಬೆನ್ ಮಾನಸಿಕ ಅಸ್ವಸ್ಥರಾಗಿ ನೀಲೇಶ್ ಹಾಗೂ ಜ್ಯೋತಿ ಬೆನ್ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಕೆಲವೊಮ್ಮೆ ವಾದವು ಕೈ-ಕೈ ಮಿಲಾಯಿಸುವ ಹಂತಕ್ಕೆ ಹೋಗುತ್ತಿತ್ತು. 

ಇದನ್ನೂ ಓದಿ:ʼಅಭಿಷೇಕ್‌ ಮತ್ತು ನನ್ನ ಮಧ್ಯೆ ಪ್ರತಿನಿತ್ಯ ಜಗಳʼ.. ಡಿವೋರ್ಸ್‌ ವದಂತಿ ಮಧ್ಯೆ ದಾಂಪತ್ಯದ ಶಾಕಿಂಗ್‌ ಸತ್ಯ ಬಿಚ್ಚಿಟ್ಟ ಐಶ್ವರ್ಯ ರೈ!!

ಹೀಗೆ ಇತ್ತೀಚಿಗೆ ರಾತ್ರಿ ಇಬ್ಬರ ನಡುವೆ ವಾಗ್ವಾದ ನಡೆದಿದೆ. ವಾಗ್ವಾದ ಅತೀರೇಕಕ್ಕೆ ಹೋಗಿ ನೀಲೇಶ್ ಸಿಟ್ಟಿಗೆದ್ದು, ತಾಯಿಗೆ ಚಾಕುವಿನಿಂದ ಇರಿಯಲು ಪ್ರಯತ್ನಿಸಿದ್ದಾನೆ. ಆದರೆ ಜ್ಯೋತಿ ಬೆನ್ ಅವನನ್ನು ತಡೆಯುತ್ತಾಳೆ. ಇದರಿಂದ ಕುಪಿತಗೊಂಡ ಮಗ ಕಂಬಳಿಯಿಂದ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. 

ತಾಯಿಯನ್ನು ಕೊಂದು ನೀಲೇಶ್ ಶವದ ಮುಂದೆ ಸಮಯ ಕಳೆದಿದ್ದಾನೆ.. ಬಳಿಕ ತನ್ನ ತಾಯಿಯನ್ನು ಕೊಲೆ ಮಾಡಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ. ಮೃತ ದೇಹದೊಂದಿಗೆ ಫೋಟೋ ತೆಗೆದು ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್‌ನಲ್ಲಿ ಸ್ಟೇಟಸ್ ಹಾಕಿದ್ದಾರೆ. ಪೋಸ್ಟ್‌ನಲ್ಲಿ, “ಅಮ್ಮಾ ನಾನು ನಿನ್ನನ್ನು ಕೊಂದಿದ್ದೇನೆ. ನನ್ನನ್ನು ಕ್ಷಮಿಸು, ನಿನ್ನನ್ನು ಮಿಸ್ ಮಾಡಿಕೊಳ್ಳುತ್ತೇನೆ.. ಅಮ್ಮ. "ಓಂ ಶಾಂತಿ" ಎಂದು ಬರೆದುಕೊಂಡಿದ್ದಾನೆ.

ಇದನ್ನೂ ಓದಿ:Daily GK Quiz: ಪ್ರಸಿದ್ಧ ವಿಕ್ಟೋರಿಯಾ ಸ್ಮಾರಕವು ಭಾರತದ ಯಾವ ನಗರದಲ್ಲಿದೆ?

ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ನೀಲೇಶ್ ಜ್ಯೋತಿ ಬೆನ್ ಮೃತದೇಹದೊಂದಿಗೆ ಇರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಆತನನ್ನು ಬಂಧಿಸಿದ ಪೊಲೀಸರು, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಬಂಧಿತ ನಿಲೇಶ್‌ನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News