Rajasthan: ಜೈಪುರ್ ನಲ್ಲಿ ಕಾಣಿಸಿಕೊಂಡ ಹಿಂದೂಗಳ ಪಲಾಯನದ ಪೋಸ್ಟರ್ ಗಳು, ಕೆಂಡಾಮಂಡಲವಾದ ಬಿಜೆಪಿ

Kishanpole Hindu Exodus: ಹಿಂದೂಗಳು ವಲಸೆ ಹೋಗಬೇಕು ಎಂಬ ಪೋಸ್ಟರ್ ಗಳು ಕಿಷನ್ ಪೋಲ್ ನಲ್ಲಿರುವ ಮನೆಗಳ ಹೊರಗೆ ತೂಗುಹಾಕಲಾಗಿದೆ. ಕಾಂಗ್ರೆಸ್ ಕೌನ್ಸಿಲರ್ ಫರೇಡ್ ಖುರೇಷಿ ಇದಕ್ಕೆ ಕಾರಣ ಎಂದು ಸ್ಥಳೀಯರು ಹೇಳುತ್ತಿದ್ದಾರೆ.   

Written by - Nitin Tabib | Last Updated : May 21, 2023, 10:28 AM IST
  • ರಾಜಧಾನಿಯ ಕಿಶನ್‌ಪೋಲ್‌ನಲ್ಲಿ ವಿವಾದಾತ್ಮಕ ಪೋಸ್ಟರ್‌ಗಳು ಪತ್ತೆಯಾಗಿವೆ.
  • ಪೋಸ್ಟರ್‌ನಲ್ಲಿ ಸ್ಥಳೀಯ ನಿವಾಸಿಗಳು ಪಲಾಯನಗೈಯ್ಯುವಂತೆ ಒತ್ತಾಯಿಸಲಾಗಿದೆ.
  • ಈ ಪೋಸ್ಟರ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿವೆ ಮತ್ತು ಬಳಕೆದಾರರು ಅಶೋಕ್ ಗೆಹ್ಲೋಟ್ ಸರ್ಕಾರದ ವರ್ತನೆಯ ಬಗ್ಗೆ ಪ್ರಶ್ನೆ ಎತ್ತುತ್ತಿದ್ದಾರೆ.
Rajasthan: ಜೈಪುರ್ ನಲ್ಲಿ ಕಾಣಿಸಿಕೊಂಡ ಹಿಂದೂಗಳ ಪಲಾಯನದ ಪೋಸ್ಟರ್ ಗಳು, ಕೆಂಡಾಮಂಡಲವಾದ ಬಿಜೆಪಿ title=

Hindu Exodus From Jaipur: ರಾಜಸ್ಥಾನದ ರಾಜಧಾನಿ ಜೈಪುರದ ಕಿಶನ್‌ಪೋಲ್‌ನಲ್ಲಿ ವಿವಾದಾತ್ಮಕ ಪೋಸ್ಟರ್‌ಗಳನ್ನು ಮನೆಗಳ ಹೊರಗೆ ತೂಗುಹಾಕಲಾಗಿದೆ. ಕಿಶನ್‌ಪೋಲ್‌ನಿಂದ ಹಿಂದೂಗಳು ಪಲಾಯನಗೈಯ್ಯುತ್ತಿದ್ದಾರೆ ಎಂದು ಪೋಸ್ಟರ್‌ನಲ್ಲಿ ಬರೆಯಲಾಗಿದೆ. ಈ ಪೋಸ್ಟರ್ ನಲ್ಲಿ ಕಾಂಗ್ರೆಸ್ ಕೌನ್ಸಿಲರ್ ಫರೀದ್ ಖುರೇಷಿ ಹೆಸರನ್ನೂ ಸಹ ಬರೆಯಲಾಗಿದೆ. ಪೋಸ್ಟರ್‌ನಲ್ಲಿ, ಹಿಂದೂಗಳ ವಲಸೆಗೆ ಫರೀದ್ ಖುರೇಷಿ ಕಾರಣ ಎಂದು ಹೇಳಲಾಗುತ್ತಿದ್ದು, ಇದೀಗ ಈ ವಿಷಯ ಪೊಲೀಸ ಠಾಣೆ ಮತ್ತು ಆಡಳಿತದ ಮೆಟ್ಟಿಲೇರಿದೆ. ತನಿಖೆ ನಡೆಯುತ್ತಿದೆ. ಜೈಪುರದಿಂದ ಒಂದು ಸಮುದಾಯದ ವಲಸೆಯ ಸುದ್ದಿ ಇದೆ. ರಾಜಧಾನಿಯ ಕಿಶನ್‌ಪೋಲ್‌ನಲ್ಲಿ ವಿವಾದಾತ್ಮಕ ಪೋಸ್ಟರ್‌ಗಳು ಪತ್ತೆಯಾಗಿವೆ. ಪೋಸ್ಟರ್‌ನಲ್ಲಿ ಸ್ಥಳೀಯ ನಿವಾಸಿಗಳು ಪಲಾಯನಗೈಯ್ಯುವಂತೆ ಒತ್ತಾಯಿಸಲಾಗಿದೆ. ಈ ಪೋಸ್ಟರ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿವೆ ಮತ್ತು ಬಳಕೆದಾರರು ಅಶೋಕ್ ಗೆಹ್ಲೋಟ್ ಸರ್ಕಾರದ ವರ್ತನೆಯ ಬಗ್ಗೆ ಪ್ರಶ್ನೆ ಎತ್ತುತ್ತಿದ್ದಾರೆ. 

ಪೋಸ್ಟರ್‌ನಲ್ಲಿ ಏನು ಬರೆಯಲಾಗಿದೆ?
ಪೋಸ್ಟರ್‌ನಲ್ಲಿ, 'ಸ್ಥಳೀಯ ನಿವಾಸಿಗಳು - ಪಲಾಯನಗೈಯ್ಯುವಂತೆ ಒತ್ತಾಯಿಸಲಾಗುತ್ತದೆ. ಕಿಶನ್ಪೋಲ್ ಪ್ರದೇಶದಿಂದ ಹಿಂದೂಗಳ ವಲಸೆ. ಜವಾಬ್ದಾರಿ: ಕಾಂಗ್ರೆಸ್ ಕೌನ್ಸಿಲರ್. ಫರೀದ್ ಖುರೇಷಿ, ವಾರ್ಡ್ ನಂ. 69' ಎಂದು ಬರೆಯಲಾಗಿದೆ. 

ಹಿಂದೂಗಳ ಬಲವಂತದ ಪಲಾಯನ ಪೋಸ್ಟರ್ ಗಳು
ಕಿಶನ್‌ಪೋಲ್ ಪ್ರದೇಶದಲ್ಲಿ ಹಿಂದೂಗಳ ವಲಸೆಯ ಪೋಸ್ಟರ್‌ಗಳನ್ನು ಮನೆಗಳ ಹೊರಗೆ ಅಂತಿಸಲಾಗುತ್ತಿದೆ. ಇದೀಗ ಕಿಶನ್‌ಪೋಲ್‌ನಲ್ಲಿ ಹಾಕಿರುವ ಈ ಪೋಸ್ಟರ್‌ಗಳ ವಿಷಯದಲ್ಲಿ ರಾಜಕೀಯ ಶುರುವಾಗಿದೆ. ಗೆಹ್ಲೋಟ್ ಸರ್ಕಾರ ತುಷ್ಟೀಕರಣದ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸಿದ್ದು, ಕಾಂಗ್ರೆಸ್ ಕೌನ್ಸಿಲರ್ ಫರೀದ್ ಖುರೇಷಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.

ಇದನ್ನೂ ಓದಿ-MIG 21 Fighter Jet: ಇನ್ಮುಂದೆ ಯುದ್ಧ ಮೈದಾನಕ್ಕೆ ಇಳಿಯಲ್ಲ ಮಿಗ್ 21 ಫೈಟರ್ ಜೆಟ್ ಗಳು, ಕಾರಣ ಇಲ್ಲಿದೆ

ಕಾಂಗ್ರೆಸ್ ಅನ್ನು ಗುರಿಯಾಗಿಸಿದ ಬಿಜೆಪಿ
ಜೈಪುರದ ಕಿಶನ್‌ಪೋಲ್ ಕ್ಷೇತ್ರದಲ್ಲಿ ಹಿಂದೂಗಳ ವಲಸೆ ಬಗ್ಗೆ ಬಿಜೆಪಿ ರಾಜ್ಯ ಮುಖ್ಯ ವಕ್ತಾರ ರಾಮಲಾಲ್ ಶರ್ಮಾ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಜಸ್ಥಾನ ಸರ್ಕಾರ ತುಷ್ಟೀಕರಣ ರಾಜಕಾರಣವನ್ನು ನಿಲ್ಲಿಸಬೇಕು ಎಂದು ಅವರು ಹೇಳಿದ್ದಾರೆ. ಈ ಸಂಬಂಧ ಸ್ಥಳೀಯ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ. ಕಾಂಗ್ರೆಸ್ ಕೌನ್ಸಿಲರ್ ಫರೀದ್ ಖುರೇಷಿ ಕಿರುಕುಳ ನೀಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಇದನ್ನೂ ಓದಿ-SC-ST ಕಾಯಿದೆಯ ಕುರಿತು ಸುಪ್ರೀಂ ಮಹತ್ವದ ಟಿಪ್ಪಣಿ, ಹೇಳಿದ್ದೇನು?

ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಜನರು ರಾಜಸ್ಥಾನದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬರೆಯುತ್ತಿದ್ದಾರೆ ಮತ್ತು ಆರೋಪಿ ಕೌನ್ಸಿಲರ್ ಫರೀದ್ ಖುರೇಷಿ ವಿರುದ್ಧ ಕ್ರಮಕ್ಕೆ ಒತ್ತಾಯಿಸುತ್ತಿದ್ದಾರೆ. ಕೆಲವು ಬಳಕೆದಾರರು ಹಿಂದೂಗಳು ಪಲಾಯನಗೈಯ್ಯುತ್ತಿರುವುದಕ್ಕೆ ಫರೀದ್ ಖುರೇಷಿ ಅಂಥದ್ದೇನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸುತ್ತಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News