ಕೇಜ್ರಿವಾಲ್‌ಗೆ ಕಪಾಳಮೋಕ್ಷ ಯಾಕೆ ಮಾಡಿದೆ ಅಂತ ನನಗೇ ಗೊತ್ತಿಲ್ಲ: ಆರೋಪಿ ಸುರೇಶ್

ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ ಎಂದು ಆರೋಪಿ ಸುರೇಶ್ ಹೇಳಿದ್ದಾನೆ.

Last Updated : May 10, 2019, 06:58 PM IST
ಕೇಜ್ರಿವಾಲ್‌ಗೆ ಕಪಾಳಮೋಕ್ಷ ಯಾಕೆ ಮಾಡಿದೆ ಅಂತ ನನಗೇ ಗೊತ್ತಿಲ್ಲ: ಆರೋಪಿ ಸುರೇಶ್ title=

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಯಾಕೆ ಕಪಾಳಮೋಕ್ಷ ಮಾಡಿದೆ ಎಂದು ನನಗೇ ಗೊತ್ತಿಲ್ಲ. ಆದರೆ ಪಶ್ಚಾತ್ತಾಪವಾಗಿದೆ ಎಂದು ಆರೋಪಿ ಸುರೇಶ್ ಹೇಳಿದ್ದಾನೆ. 

ಈ ಬಗ್ಗೆ ಎಎನ್ಐ ಸುದ್ದಿ ಸಂಸ್ಥೆ ಜೊತೆ ಮಾತನಾಡಿರುವ ಸುರೇಶ್(33), "ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ. ನನಗೆ ಯಾರೂ ಸಹ ಹೀಗೆ ಮಾಡು ಎಂದು ಹೇಳಿಕೊಟ್ಟಿಲ್ಲ. ಪೊಲೀಸರೂ ಸಹ ಕೆಟ್ಟ ರೀತಿಯಲ್ಲಿ ವರ್ತಿಸಿಲ್ಲ. ಹೀಗಿದ್ದರೂ ನಾನು ಯಾಕೆ ಕೇಜ್ರಿವಾಲ್ ಅವರ ಮೇಲೆ ಕೈ ಮಾಡಿದೆ ಎಂಬುದು ಗೊತ್ತಿಲ್ಲ ಎಂದು ಹೇಳಿದ್ದಾನೆ. 

ಮೇ 4ರಂದು ಮೋತಿ ನಗರದಲ್ಲಿ ರೋಡ್ ಶೋ ನಡೆಸುತ್ತಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಕಪಾಳಮೋಕ್ಷ ಮಾಡಿದ್ದ ಆರೋಪಿ ಸುರೇಶನನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಮೊದಲಿಗೆ ಆತ ಆಮ್ ಆದ್ಮಿ ಪಕ್ಷಕ್ಕೆ ಸೇರಿದವನೆಂದು ಹೇಳಲಾಗಿತ್ತು. ಆದರೀಗ ಆತ ತಾನು ಯಾವ ಪಕ್ಷಕ್ಕೂ ಸೇರಿದವನಲ್ಲ ಎಂದು ಸ್ಪಷ್ಟಪಡಿಸಿದ್ದಾನೆ.

Trending News