ನಾನು ಹೆಚ್ಚು ಈರುಳ್ಳಿ ತಿನ್ನುವುದಿಲ್ಲ ಎಂದು ವಿತ್ತ ಸಚಿವರು ಹೇಳಿದ್ದೇಕೆ?

ಪಶ್ಚಿಮ ಬಂಗಾಳದ ವಿವಿಧ ಮಾರುಕಟ್ಟೆಗಳಲ್ಲಿ ಈರುಳ್ಳಿ ಬೆಲೆ ಕೆ.ಜಿ.ಗೆ 140 ರೂ.ಗೆ ಏರಿದರೆ, ಹೈದರಾಬಾದ್‌ನಲ್ಲಿ ಪ್ರತಿ ಕೆ.ಜಿ.ಗೆ 150 ರೂ. ತಲುಪಿದೆ. ಇತ್ತೀಚಿನ ದಿನಗಳಲ್ಲಿ ಚಿನ್ನ, ಹಣಕ್ಕಿಂತ ಈರುಳ್ಳಿ ಕಳ್ಳತನದ ಪ್ರಕರಣಗಳು ದೇಶದಲ್ಲಿ ಹೆಚ್ಚಾಗಿವೆ. ಇತ್ತೀಚೆಗಷ್ಟೇ, ಮಧ್ಯಪ್ರದೇಶದ ಮಾಂಡ್‌ಸೌರ್‌ನ ರೈತ 30,000 ರೂ. ಮೌಲ್ಯದ ಈರುಳ್ಳಿ ಬೆಳೆಯನ್ನು ಕಳ್ಳರು ಬೇರುಸಹಿತ ಕಿತ್ತೊಯ್ದಿದ್ದಾರೆ ಎಂದು ಆರೋಪಿಸಿದ್ದಾರೆ.

Last Updated : Dec 5, 2019, 08:48 AM IST
ನಾನು ಹೆಚ್ಚು ಈರುಳ್ಳಿ ತಿನ್ನುವುದಿಲ್ಲ ಎಂದು ವಿತ್ತ ಸಚಿವರು ಹೇಳಿದ್ದೇಕೆ? title=

ನವದೆಹಲಿ: ದೇಶಾದ್ಯಂತ ಈರುಳ್ಳಿ ಬೆಲೆ ಏರಿಕೆಯ ಮಧ್ಯೆ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಬುಧವಾರ ವಿಲಕ್ಷಣ ಹೇಳಿಕೆ ನೀಡಿದ್ದು, ಅವರು ಹೆಚ್ಚಿನ ತರಕಾರಿಗಳನ್ನು ಸೇವಿಸುವುದಿಲ್ಲ ಮತ್ತು ತಾವು ಅಂತಹ  ಕುಟುಂಬದಿಂದ ಬಂದವರು ಎಂದು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman), ದೇಶಾದ್ಯಂತ ತಲೆದೂರಿರುವ ಈರುಳ್ಳಿ ಬಿಕ್ಕಟ್ಟಿನ ಕುರಿತು ಸಂಸತ್ತಿನಲ್ಲಿ ಚರ್ಚಿಸುವ ಸಂದರ್ಭದಲ್ಲಿ ಮಾತನಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, "ನಾನು ಈರುಳ್ಳಿ-ಬೆಳ್ಳುಳ್ಳಿಯನ್ನು ಹೆಚ್ಚು ತಿನ್ನುವುದಿಲ್ಲ. ನಾನು ಈರುಳ್ಳಿಯೊಂದಿಗೆ ಹೆಚ್ಚು ಸಂಬಂಧವಿಲ್ಲದ ಅಂತಹ ಕುಟುಂಬದಿಂದ ಬಂದಿದ್ದೇನೆ" ಎಂದರು. 

ವಾಸ್ತವವಾಗಿ ಬುಧವಾರ ಲೋಕಸಭೆಯಲ್ಲಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಸಂಸದರಾದ ಸುಪ್ರಿಯಾ ಸೂಲೆ ಅವರು ಎನ್‌ಪಿಎ ಮತ್ತು ಈರುಳ್ಳಿ ರೈತರ ವಿಷಯವನ್ನು ಪ್ರಸ್ತಾಪಿಸಿದರು. "ಈರುಳ್ಳಿ(Onion) ಉತ್ಪಾದನೆಯು ಏಕೆ ಕಡಿಮೆಯಾಗಿದೆ? ನಾವು ಅಕ್ಕಿ ಮತ್ತು ಹಾಲು ಮತ್ತು ಇತರ ಅನೇಕ ಉತ್ಪನ್ನಗಳನ್ನು ರಫ್ತು ಮಾಡುತ್ತೇವೆ. ಈರುಳ್ಳಿ ಬೆಳೆಗಾರ ಸಣ್ಣ ರೈತ ಮತ್ತು ಅವನನ್ನು ನಿಜವಾಗಿಯೂ ರಕ್ಷಿಸಬೇಕಾಗಿದೆ" ಎಂದು ಸೂಲೆ ಹೇಳಿದ್ದಾರೆ.

ಪಶ್ಚಿಮ ಬಂಗಾಳದ ವಿವಿಧ ಮಾರುಕಟ್ಟೆಗಳಲ್ಲಿ ಈರುಳ್ಳಿ ಬೆಲೆ ಕೆ.ಜಿ.ಗೆ 140 ರೂ.ಗೆ ಏರಿದರೆ, ಹೈದರಾಬಾದ್‌ನಲ್ಲಿ ಪ್ರತಿ ಕೆ.ಜಿ.ಗೆ 150 ರೂ. ತಲುಪಿದೆ. ಇತ್ತೀಚಿನ ದಿನಗಳಲ್ಲಿ ಚಿನ್ನ, ಹಣಕ್ಕಿಂತ ಈರುಳ್ಳಿ ಕಳ್ಳತನದ ಪ್ರಕರಣಗಳು ದೇಶದಲ್ಲಿ ಹೆಚ್ಚಾಗಿವೆ. ಇತ್ತೀಚೆಗಷ್ಟೇ, ಮಧ್ಯಪ್ರದೇಶದ ಮಾಂಡ್‌ಸೌರ್‌ನ ರೈತ 30,000 ರೂ. ಮೌಲ್ಯದ ಈರುಳ್ಳಿ ಬೆಳೆಯನ್ನು ಕಳ್ಳರು ಬೇರುಸಹಿತ ಕಿತ್ತೊಯ್ದಿದ್ದಾರೆ ಎಂದು ಆರೋಪಿಸಿದ್ದಾರೆ. ಭಾರತದ ಹೆಚ್ಚಿನ ನಗರಗಳಲ್ಲಿ ಈರುಳ್ಳಿಯನ್ನು ಪ್ರತಿ ಕೆಜಿಗೆ 100 ರೂ. ಆಗಿದೆ ಎಂದರು. 

ಇದಕ್ಕೆ ಪ್ರತಿಕ್ರಿಯಿಸಿದ ಹಣಕಾಸು ಸಚಿವರು, ಕೇಂದ್ರ ಸರ್ಕಾರವು ಹಲವಾರು ಕ್ರಮಗಳನ್ನು ಜಾರಿಗೆ ತರುವ ಮೂಲಕ ಈರುಳ್ಳಿ ಬಿಕ್ಕಟ್ಟನ್ನು ಕೊನೆಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಲೋಕಸಭೆಗೆ ತಿಳಿಸಿದರು. ಏರುತ್ತಿರುವ ಈರುಳ್ಳಿಯ ಬೆಲೆಯನ್ನು ತಗ್ಗಿಸಲು ಕೇಂದ್ರ ಸರ್ಕಾರ ಆಮದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿದೆ ಮತ್ತು ಅವುಗಳ ಶೇಖರಣೆಗೆ ಸಂಬಂಧಿಸಿದ ಹಲವಾರು ರಚನಾತ್ಮಕ ಸಮಸ್ಯೆಗಳಿವೆ, ಅದನ್ನು ಸರ್ಕಾರವು ಪರಿಹರಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಮಾಹಿತಿ ನೀಡಿದರು.

 2019-20ನೇ ಸಾಲಿನ ಅನುದಾನದ ಪೂರಕ ಬೇಡಿಕೆಗಳ ಚರ್ಚೆಗೆ ಉತ್ತರಿಸಿದ ಅವರು, ಈರುಳ್ಳಿ ರಫ್ತು ನಿಷೇಧಿಸಲಾಗಿದೆ ಮತ್ತು ಅದರ ಆಮದುಗಾಗಿ ಟೆಂಡರ್ ಮಾಡಲಾಗಿದೆ. "ಸಂಗ್ರಹಣೆ ಹೊರತುಪಡಿಸಿ ಬೇರೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ" ಎಂದು ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ತಿಳಿಸಿದರು.

"2014 ರಿಂದ, ನಾನು ಈರುಳ್ಳಿ ಮಾರುಕಟ್ಟೆಯಲ್ಲಿನ ಏರಿಳಿತದ ಮೇಲೆ ನಿಗಾ ವಹಿಸುವ ಸಚಿವರ ಗುಂಪಿನ ಭಾಗವಾಗಿದ್ದೇನೆ ಎಂದು ತಿಳಿಸಿದ ನಿರ್ಮಲಾ ಸೀತಾರಾಮನ್, ಕೆಲವೊಮ್ಮೆ ಬೆಳೆ ಹೆಚ್ಚುವರಿ ಇದ್ದಾಗ, ಆಮದು ಮಾಡಲು ಬಯಸುವ ಜನರಿಗೆ ಬೆಂಬಲ ನೀಡುವ ಮೂಲಕ ನಾವು ಅದನ್ನೂ ಸಹ ಸುಗಮಗೊಳಿಸಿದ್ದೇವೆ. ರಫ್ತು ಮಾಡಲು ಶೇಕಡಾ 5 ರಿಂದ 7 ರಷ್ಟು ಸಹಾಯಕ್ಕಾಗಿ ರಾತ್ರಿಯಿಡೀ ಆದೇಶಗಳನ್ನು ಜಾರಿಗೊಳಿಸಲಾಗಿದೆ" ಎಂದು ಅವರು ಹೇಳಿದರು.

ಈರುಳ್ಳಿಯ ಬೆಲೆ ಏರಿಕೆಯಿಂದ ಕಳವಳಗೊಂಡಿರುವ ಕೇಂದ್ರವು ಸೋಮವಾರ ವ್ಯಾಪಾರಿಗಳ ಮೇಲೆ ಸ್ಟಾಕ್ ಮಿತಿಗಳನ್ನು ಹೇರಲು ಮತ್ತು ಹೋರ್ಡಿಂಗ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯಗಳಿಗೆ ಸೂಚಿಸಿದೆ. ಈರುಳ್ಳಿ ಬೆಲೆಗಳ ಕುರಿತು ಕಾರ್ಯದರ್ಶಿಗಳ ಸಮಿತಿಯೊಂದಿಗಿನ ಪರಿಶೀಲನಾ ಸಭೆಯಲ್ಲಿ, ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ್ ಗೌಬಾ ಅವರು ರಾಜ್ಯಗಳಿಗೆ ಸಾಕಷ್ಟು ಬಫರ್ ಸ್ಟಾಕ್‌ಗಳನ್ನು ಕಾಯ್ದುಕೊಳ್ಳಲು, ವ್ಯಾಪಾರಿಗಳ ಮೇಲೆ ಸ್ಟಾಕ್ ಮಿತಿಗಳನ್ನು ಹೇರಲು ಮತ್ತು ಹೋರ್ಡಿಂಗ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ.

Trending News