Monsoon 2023 Date: ಈ ಬಾರಿಯ ಮಾನ್ಸೂನ್ ಕುರಿತು ಮಹತ್ವದ ಅಪ್ಡೇಟ್ ಪ್ರಕಟಿಸಿದ ಐಎಂಡಿ

Monsoon 2023 Date: ಎಲ್ಲವೂ ಅಂದುಕೊಂಡಂತೆ ಮುಂಗಾರು ಸರಿಯಾಗಿ ಚಲಿಸಿದರೆ, ಜೂನ್ 1 ರ ವೇಳೆಗೆ ಕೇರಳಕ್ಕೆ ಅಪ್ಪಳಿಸಲಿದೆ. ಆದರೆ ಈ ವರ್ಷ ಕೇರಳದ ಮೇಲೆ ನೈರುತ್ಯ ಮುಂಗಾರು ಆರಂಭವಾಗುವುದು ಸ್ವಲ್ಪ ವಿಳಂಬವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.   

Written by - Nitin Tabib | Last Updated : May 16, 2023, 09:19 PM IST
  • ಎಲ್ಲವೂ ಅಂದುಕೊಂಡಂತೆ ಮುಂಗಾರು ಚಳಿಸಿದರೆ, ಜೂನ್ 1ಕ್ಕೆ ಕೇರಳಕ್ಕೆ ಅಪ್ಪಳಿಸಲಿದೆ ಎಂದು ಇಲಾಖೆ ಹೇಳಿದೆ.
  • ಆದರೆ ಈ ವರ್ಷ ಕೇರಳದ ಮೇಲೆ ನೈರುತ್ಯ ಮುಂಗಾರು ಆರಂಭವಾಗುವುದು ಸ್ವಲ್ಪ ವಿಳಂಬವಾಗುವ ಸಾಧ್ಯತೆ ಇದೆ.
  • ಕೆಲವು ದಿನಗಳ ವಿಳಂಬದೊಂದಿಗೆ ಜೂನ್ 4 ರಂದು ಕೇರಳದಲ್ಲಿ ಮಾನ್ಸೂನ್ ಪ್ರಾರಂಭವಾಗಬಹುದು ಎಂದು ಇಲಾಖೆ ಅಂದಾಜು ವ್ಯಕ್ತಪಡಿಸಿದೆ.
Monsoon 2023 Date: ಈ ಬಾರಿಯ ಮಾನ್ಸೂನ್ ಕುರಿತು ಮಹತ್ವದ ಅಪ್ಡೇಟ್ ಪ್ರಕಟಿಸಿದ ಐಎಂಡಿ title=
ಮುಂಗಾರು ಆಗಮನದ ಅಪ್ಡೇಟ್

Monsoon 2023 Date: ಈ ಬಾರಿ ದೇಶಾದ್ಯಂತ ಬಿಸಿಲಿನ ಬೇಗೆ ಸಾಕಷ್ಟಿದ್ದು, ಇಡೀ ದೇಶವೇ ಮುಂಗಾರು ಮಳೆಗಾಗಿ ಕಾಯುತ್ತಿದೆ. ಏತನ್ಮಧ್ಯೆ ಈ ಬಾರಿ ಮುಂಗಾರು ತಡವಾಗಿ ಬರಬಹುದು ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಂಗಳವಾರ ತಿಳಿಸಿದೆ. ಆದರೆ ಈ ವಿಳಂಬ ಹೆಚ್ಚು ಕಾಲ ಇರುವುದಿಲ್ಲ. IMD ಪ್ರಕಾರ, ಜೂನ್ 4 ರ ಸುಮಾರಿಗೆ ಕೇರಳದ ಮೇಲೆ ನೈಋತ್ಯ ಮಾನ್ಸೂನ್ ಪ್ರಾರಂಭವಾಗುವ ಸಾಧ್ಯತೆಯಿದೆ.

ಎಲ್ಲವೂ ಅಂದುಕೊಂಡಂತೆ ಮುಂಗಾರು ಚಳಿಸಿದರೆ, ಜೂನ್ 1ಕ್ಕೆ ಕೇರಳಕ್ಕೆ ಅಪ್ಪಳಿಸಲಿದೆ ಎಂದು ಇಲಾಖೆ ಹೇಳಿದೆ. ಆದರೆ ಈ ವರ್ಷ ಕೇರಳದ ಮೇಲೆ ನೈರುತ್ಯ ಮುಂಗಾರು ಆರಂಭವಾಗುವುದು ಸ್ವಲ್ಪ ವಿಳಂಬವಾಗುವ ಸಾಧ್ಯತೆ ಇದೆ. ಕೆಲವು ದಿನಗಳ ವಿಳಂಬದೊಂದಿಗೆ ಜೂನ್ 4 ರಂದು ಕೇರಳದಲ್ಲಿ ಮಾನ್ಸೂನ್ ಪ್ರಾರಂಭವಾಗಬಹುದು ಎಂದು ಇಲಾಖೆ ಅಂದಾಜು ವ್ಯಕ್ತಪಡಿಸಿದೆ.

2023 ನೈಋತ್ಯ ಮಾನ್ಸೂನ್ ಋತುವಿಗಾಗಿ ಟರ್ಕ್ಲಿ ಸಂಭವನೀಯತೆ ಮಳೆಯ ಮುನ್ಸೂಚನೆ
(ಭಾರತೀಯ ಹವಾಮಾನ ಇಲಾಖೆ)

ಕಳೆದ ಕೆಲ ವರ್ಷಗಳ ಬಗ್ಗೆ ಹೇಳುವುದಾದರೆ, 2022 ರಲ್ಲಿ ಮುಂಗಾರು ಕೇರಳವನ್ನು ಮೇ 29, 2021 ರಲ್ಲಿ ಜೂನ್ 3 ರಂದು ಮತ್ತು 2020 ರಲ್ಲಿ ಜೂನ್ 1 ರಂದು ಅಪ್ಪಳಿಸಿತ್ತು. ಎಲ್ ನಿನೋ ಪರಿಸ್ಥಿತಿಗಳ ಹೊರತಾಗಿಯೂ ನೈಋತ್ಯ ಮಾನ್ಸೂನ್ ಅವಧಿಯಲ್ಲಿ ಭಾರತವು ಸಾಮಾನ್ಯ ಮಳೆಯನ್ನು ಪಡೆಯುವ ನಿರೀಕ್ಷೆಯಿದೆ ಎಂದು IMD ಕಳೆದ ತಿಂಗಳು ಹೇಳಿತ್ತು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ 2015 ಹೊರತುಪಡಿಸಿ, ಕಳೆದ 18 ವರ್ಷಗಳಲ್ಲಿ ಮಾನ್ಸೂನ್ ಬಗ್ಗೆ IMD ಯ ಮುನ್ಸೂಚನೆ ಅಂದಾಜು ಅತ್ಯಂತ ನಿಖರ ಸಾಬೀತಾಗಿದೆ.

ಇದನ್ನೂ ಓದಿ-Amarnath Yatra: ಇನ್ಮುಂದೆ ಈ ಜನರು ಅಮರನಾಥ ಯಾತ್ರೆ ನಡೆಸುವ ಹಾಗಿಲ್ಲ, ಇಲ್ಲಿದೆ ಲೇಟೆಸ್ಟ್ ಅಪ್ಡೇಟ್!

ಮಳೆಯಾಶ್ರಿತ ಕೃಷಿಯು ಭಾರತದ ಕೃಷಿ ಭೂದೃಶ್ಯದ ಪ್ರಮುಖ ಅಂಶವಾಗಿದೆ, ನಿವ್ವಳ ಕೃಷಿ ಪ್ರದೇಶದ ಶೇ. 52 ರಷ್ಟು ಈ ವಿಧಾನವನ್ನು ಅವಲಂಬಿಸಿದೆ. ಇದು ದೇಶದ ಒಟ್ಟು ಆಹಾರ ಉತ್ಪಾದನೆಯ ಸುಮಾರು ಶೇ. 40 ರಷ್ಟು ಹೊಂದಿದೆ, ಇದು ಭಾರತದ ಆಹಾರ ಭದ್ರತೆ ಮತ್ತು ಆರ್ಥಿಕ ಸ್ಥಿರತೆಗೆ ಗಮನಾರ್ಹ ಕೊಡುಗೆ ನೀಡುತ್ತದೆ.

ಇದನ್ನೂ ಓದಿ-PM Modi ಗೂ ಮುನ್ನ ಅಮೆರಿಕಾಗೆ ತೆರಳಲಿದ್ದಾರೆ ರಾಹುಲ್ ಗಾಂಧಿ, 10 ದಿನಗಳ ಕಾಲ ಏನ್ ಮಾಡಲಿದ್ದಾರೆ?

ಮಾನ್ಸೂನ್ ಗೆ ಸಂಬಂಧಿಸಿದ ಪ್ರಮುಖ ವಿಷಯಗಳು..
ಮಾನ್ಸೂನ್ ಮತ್ತು ಈ ಋತುವಿನಲ್ಲಿ ದೇಶದ ಒಟ್ಟು ಮಳೆಯ ನಡುವೆ ಯಾವುದೇ ನೇರ ಸಂಬಂಧವಿಲ್ಲ.
ಕೇರಳದಲ್ಲಿ ಮಾನ್ಸೂನ್ ಬೇಗನೆ ಅಥವಾ ತಡವಾಗಿ ಆಗಮನವಾಗುವುದರಿಂದ ದೇಶದ ಇತರ ಭಾಗಗಳಲ್ಲಿ ಮುಂಚಿತವಾಗಿ ಮಳೆಯಾಗುವುದಿಲ್ಲ ಎಂದು ಅರ್ಥವಲ್ಲ.
ಮಾನ್ಸೂನ್ ವಿಳಂಬಕ್ಕೆ ಮೋಖಾ ಚಂಡಮಾರುತವೇ ಕಾರಣ ಎಂದು ನಂಬಲಾಗಿದೆ.
ಭಾರತೀಯ ಉಪಖಂಡದಲ್ಲಿ ಸಾಕಷ್ಟು ಶಾಖದ ಕಾರಣದಿಂದಾಗಿ ಇದು ಸಂಭವಿಸಬಹುದು ಮತ್ತು ಮಾನ್ಸೂನ್‌ನ ಪ್ರಗತಿಯು ವಿವಿಧ ಅಂಶಗಳ ಮೇಲೆ ಅವಲಂಬಿತವಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News