ಖ್ಯಾತ ಜ್ಯೋತಿಷಿ ಬೇಜಾನ್ ದಾರುವಾಲಾ ನಿಧನ, ಶೋಕ ವ್ಯಕ್ತಪಡಿಸಿದ ಸಿಎಂ ವಿಜಯ್ ರೂಪಾಣಿ

ಉಸಿರಾಟದ ತೊಂದರೆಯ ಕಾರಣ ಅವರನ್ನು ಅಹ್ಮದಾಬಾದ್ ನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು.

Last Updated : May 29, 2020, 07:56 PM IST
ಖ್ಯಾತ ಜ್ಯೋತಿಷಿ  ಬೇಜಾನ್ ದಾರುವಾಲಾ ನಿಧನ, ಶೋಕ ವ್ಯಕ್ತಪಡಿಸಿದ ಸಿಎಂ ವಿಜಯ್ ರೂಪಾಣಿ title=

ನವದೆಹಲಿ: ವಿಶ್ವ ಪ್ರಸಿದ್ಧ ಜ್ಯೋತಿಷಿ ಬೇಜಾನ್ ದರುವಾಲಾ ನಿಧನರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. ಉಸಿರಾಟದ ತೊಂದರೆಯ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಹ್ಮದಾಬಾದ್ ನ ಅಪೋಲೋ ಆಸ್ಪತ್ರೆಯಲ್ಲಿ ಅವರ ಮೇಲೆ ಚಿಕಿತ್ಸೆ ನಡೆಯುತ್ತಿತ್ತು. ಕಳೆದ ಒಂದು ವಾರದಿಂದ ಅವರು ವೆಂಟಿಲೇಟರ್ ನಲ್ಲಿದ್ದರು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಅವರ ನಿಧನದ ಕುರಿತು ಟ್ವೀಟ್ ಮಾಡಿರುವ ಗುಜರಾತ್ ಸಿಎಂ ವಿಜಯ್ ರೂಪಾಣಿ ಶೋಕ ವ್ಯಕ್ತಪಡಿಸಿದ್ದಾರೆ. ಈ ಕುರಿತು ತಮ್ಮ ಟ್ವೀಟ್ ನಲ್ಲಿ ಬರೆದುಕೊಂಡಿರುವ ರೋಪಾಣಿ "ಖ್ಯಾತ ಜ್ಯೋತಿಷಿ ಶ್ರೀ ಬೇಜಾನ್ ದಾರುವಾಲಾ ಅವರ ನಿಧನದ ಸುದ್ದಿ ಅಪಾರ ನೋವು ತಂದಿದೆ. ಅಗಲಿದ ಅವರ ಆತ್ಮಕ್ಕಾಗಿ ನಾನು ಪ್ರಾರ್ಥಿಸುತ್ತೇನೆ ಹಾಗೂ ಸಾಂತ್ವನ ಹೇಳುತ್ತೇನೆ" ಎಂದಿದ್ದಾರೆ.

25 ಏಪ್ರಿಲ್ 2003ರಲ್ಲಿ ಮುಂಬೈನ ತಾಜ್ ಹೋಟೆಲ್ ನಲ್ಲಿ ಬೇಜಾನ್ ದಾರುವಾಲಾ ಅವರು ತಮ್ಮ ವೆಬ್ ಸೈಟ್ ನ ಶುಭಾರಂಭ ಮಾಡಿದ್ದರು. ಸಂಜಯ್ ಗಾಂಧಿ ಅವರ ಸಾವು ಹಾಗೂ 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಭವಿಷ್ಯವಾಣಿ ನುಡಿದಿದ್ದರು.

Trending News