ಜಮ್ಮು ಕಾಶ್ಮೀರದ ಕುಲಗಾಮ್ ನಲ್ಲಿ ಭಯೋತ್ಪಾದಕ ದಾಳಿ ; ಬಿಜೆಪಿ ನಾಯಕ ಜಾವೇದ್ ಅಹಮ್ಮದ್ ದಾರ್ ಹತ್ಯೆ

ಜಾವೇದ್ ಅಹ್ಮದ್ ಬಿಜೆಪಿಯ ಕುಲ್ಗಾಮ್ ಘಟಕದ ಸದಸ್ಯರಾಗಿದ್ದರು.  ಮತ್ತು ಹೊಮ್ಶಾಲಿಬಾಗ್ ಕ್ಷೇತ್ರದ ಉಸ್ತುವಾರಿಯೂ ಆಗಿದ್ದರು.

Written by - Ranjitha R K | Last Updated : Aug 17, 2021, 06:48 PM IST
  • ಕುಲ್ಗಾಂನಲ್ಲಿ ಭಯೋತ್ಪಾದಕ ದಾಳಿ
  • ಬಿಜೆಪಿ ನಾಯಕ ಜಾವೇದ್ ಅಹ್ಮದ್ ಹತ್ಯೆ
  • ಬಿಜೆಪಿ ನಾಯಕರನ್ನು ಗುರಿಯಾಗಿಸುತ್ತಿರುವ ಭಯೋತ್ಪಾದಕರು
ಜಮ್ಮು ಕಾಶ್ಮೀರದ ಕುಲಗಾಮ್ ನಲ್ಲಿ ಭಯೋತ್ಪಾದಕ ದಾಳಿ ; ಬಿಜೆಪಿ ನಾಯಕ ಜಾವೇದ್ ಅಹಮ್ಮದ್ ದಾರ್ ಹತ್ಯೆ  title=
ಬಿಜೆಪಿ ನಾಯಕ ಜಾವೇದ್ ಅಹ್ಮದ್ ಹತ್ಯೆ  (file photo)

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu Kashmir) ಕುಲ್ಗಾಂನಲ್ಲಿ ಭಯೋತ್ಪಾದಕರ ದಾಳಿ ನಡೆದಿದೆ. ಈ ದಾಳಿಯಲ್ಲಿ ಬಿಜೆಪಿ ನಾಯಕ ಜಾವೇದ್ ಅಹ್ಮದ್ ದಾರ್ ಹತ್ಯೆಯಾಗಿದ್ದಾರೆ. ಮಾಹಿತಿಯ ಪ್ರಕಾರ, ಭಯೋತ್ಪಾದಕರು (Terrorist Attack) ಜಾವೇದ್ ಅಹ್ಮದ್  ದಾರ್ (Javed Ahmad Dar) ಅವರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಿದ್ದರು ಎನ್ನಲಾಗಿದೆ. ದಾಳಿ ನಡೆದ ತಕ್ಷಣ ಭದ್ರತಾ ಪಡೆಗಳು ಇಡೀ ಪ್ರದೇಶವನ್ನು ಸುತ್ತುವರಿದಿದ್ದು, ಶೋಧ ಕಾರ್ಯಾಚರಣೆ ನಡೆಯುತ್ತಿದೆ.

ಗುಂಡು ತಗುಲಿ ಬಿಜೆಪಿ ನಾಯಕ ಸಾವು : 
ಜಾವೇದ್ ಅಹ್ಮದ್ (Javed Ahmad Dar) ಬಿಜೆಪಿಯ ಕುಲ್ಗಾಮ್ ಘಟಕದ ಸದಸ್ಯರಾಗಿದ್ದರು.  ಮತ್ತು ಹೊಮ್ಶಾಲಿಬಾಗ್ ಕ್ಷೇತ್ರದ ಉಸ್ತುವಾರಿಯೂ ಆಗಿದ್ದರು. ಬಿಜೆಪಿಯ (BJP) ಕಾಶ್ಮೀರ ಮೀಡಿಯಾ ಸೆಲ್  ಮುಖ್ಯಸ್ಥ ಮಂಜೂರ್ ಅಹ್ಮದ್ ಈ ಭಯೋತ್ಪಾದಕ ದಾಳಿಯನ್ನು ಖಂಡಿಸಿದ್ದಾರೆ. ಮಾಹಿತಿಯ ಪ್ರಕಾರ, ಭಯೋತ್ಪಾದಕರ ಗುಂಡಿನ  (Terror attack) ದಾಳಿಯಿಂದ ಜಾವೇದ್ ಗಂಭೀರವಾಗಿ ಗಾಯಗೊಂಡಿದ್ದರು.  ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೂ ಆಸ್ಪತ್ರೆಯಲ್ಲಿ ಜಾವೇದ್ ಅಹ್ಮದ್  ದಾರ್ ಕೊನೆಯುಸಿರೆಳೆದಿದ್ದಾರೆ. 

ಇದನ್ನೂ ಓದಿ: ಈ ಬ್ಯಾಂಕ್ ಗ್ರಾಹಕರಿಗೆ ನೀಡುತ್ತಿದೆ 2 ಲಕ್ಷ ರೂ. ಗಳ ಲಾಭ, ಬಳಸಿಕೊಳ್ಳುವುದು ಹೇಗೆ ತಿಳಿಯಿರಿ

ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ (Omar Abdullah) ಕೂಡ ಈ ದಾಳಿಯನ್ನು ಖಂಡಿಸಿದ್ದಾರೆ.  ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಅಹ್ಮದ್ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. 

ಹೆಚ್ಚುತ್ತಿದೆ ಬಿಜೆಪಿ ನಾಯಕರ ಮೇಲಿನ ದಾಳಿ : 
ಭಯೋತ್ಪಾದಕರು (Terrorist) ನಿರಂತರವಾಗಿ ಬಿಜೆಪಿ ನಾಯಕರನ್ನು ಗುರಿಯಾಗಿಸಿಕೊಂಡಿದ್ದಾರೆ. ಕಳೆದ ವಾರ, ಅನಂತನಾಗ್‌ನಲ್ಲಿ ಭಯೋತ್ಪಾದಕರು ಇದೇ ರೀತಿಯ ದಾಳಿ ನಡೆಸಿದ್ದರು. ನಗರದ ಲಾಲ್ ಚೌಕ್ ನಲ್ಲಿ ಬಿಜೆಪಿ ಮುಖಂಡ ಗುಲಾಂ ರಸೂಲ್ ದಾರ್ (Ghulam Rasool Dar) ಮತ್ತು ಅವರ ಪತ್ನಿ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದರು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರೂ ನಂತರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. 

ಇದನ್ನೂ ಓದಿ: ಆಧಾರ್ ಗೆ ಸಂಬಂಧಿಸಿದ ಈ ಕೆಲಸವನ್ನು ತಕ್ಷಣ ಮಾಡಿ ಮುಗಿಸಿ, ಇಲ್ಲವಾದರೆ ತೆರಬೇಕಾದೀತು ದಂಡ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News