ಲೋಕಸಭೆಯಲ್ಲಿ 2 ಪ್ರಮುಖ ಕೃಷಿ ಬಿಲ್ ಅಂಗೀಕಾರ, ಟ್ವೀಟ್ ಮೂಲಕ ಪ್ರಧಾನಿ ನೀಡಿದ್ರು ಈ ಭರವಸೆ

ಈ ಎರಡು ಮಸೂದೆಗಳು ಬೆಳೆಗಳ ಎಂಎಸ್‌ಪಿಗೆ ಯಾವುದೇ ಪರಿಣಾಮ ಬೀರುವುದಿಲ್ಲ ಮತ್ತು ರೈತರಿಂದ ಎಂಎಸ್‌ಪಿ ಮೇಲೆ ಬೆಳೆಗಳ ಖರೀದಿ ಮುಂದುವರಿಯುತ್ತದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ಸದನಕ್ಕೆ ಭರವಸೆ ನೀಡಿದರು.

Last Updated : Sep 18, 2020, 06:32 AM IST
  • ಲೋಕಸಭೆಯಲ್ಲಿ ಐತಿಹಾಸಿಕ ಕೃಷಿ ಸುಧಾರಣಾ ಮಸೂದೆಗಳನ್ನು ಅಂಗೀಕರಿಸುವುದು ರೈತರಿಗೆ ಮತ್ತು ದೇಶದ ಕೃಷಿ ಕ್ಷೇತ್ರಕ್ಕೆ ಮಹತ್ವದ ಕ್ಷಣ- ಪ್ರಧಾನಿ ಮೋದಿ
  • ಅವ್ಯವಸ್ಥೆಯ ಮಧ್ಯೆ, ಎಂಎಸ್‌ಪಿ (MSP) ಮತ್ತು ಸರ್ಕಾರದ ಖರೀದಿ ವ್ಯವಸ್ಥೆ ಉಳಿಯುತ್ತದೆ ಎಂದು ಪಿಎಂ ನರೇಂದ್ರ ಮೋದಿ ಸ್ಪಷ್ಟಪಡಿಸಿದರು.
  • ಈ ಮಸೂದೆಗಳು ಕೃಷಿ ಕ್ಷೇತ್ರದಲ್ಲಿ ಸಂಪೂರ್ಣ ಬದಲಾವಣೆಯನ್ನು ತರಲಿವೆ. ಇದು ರೈತರ ಜೀವನದಲ್ಲಿ ಕ್ರಾಂತಿಕಾರಿ ಬದಲಾವಣೆ
ಲೋಕಸಭೆಯಲ್ಲಿ 2 ಪ್ರಮುಖ ಕೃಷಿ ಬಿಲ್ ಅಂಗೀಕಾರ, ಟ್ವೀಟ್ ಮೂಲಕ ಪ್ರಧಾನಿ ನೀಡಿದ್ರು ಈ  ಭರವಸೆ title=

ನವದೆಹಲಿ: ದೇಶದಲ್ಲಿ ಕೃಷಿ ಸುಧಾರಣೆಗಾಗಿ ಎರಡು ಪ್ರಮುಖ ಮಸೂದೆಗಳಿಗೆ ಲೋಕಸಭೆ (Lok sabha) ಗುರುವಾರ ಅನುಮೋದನೆ ನೀಡಿದೆ. ವಿರೋಧ ಪಕ್ಷಗಳ ವಿರೋಧದ ಮಧ್ಯೆ ಕೃಷಿ ಉತ್ಪಾದನಾ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ 2020 ಮತ್ತು ಬೆಲೆ ಭರವಸೆ ಮತ್ತು ರೈತ (ದತ್ತಿ ಮತ್ತು ಭದ್ರತೆ) ಒಪ್ಪಂದ ಮತ್ತು ಕೃಷಿ ಸೇವೆಗಳ ಮಸೂದೆ 2020 ಅನ್ನು ಸಂಸತ್ತಿನ ಕೆಳಮನೆಯಲ್ಲಿ ಅಂಗೀಕರಿಸಲಾಗಿದೆ.

ಈ ಸಂದರ್ಭದಲ್ಲಿ ಕೇಂದ್ರ ಕೃಷಿ (Agriculture) ಮತ್ತು ರೈತ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ಮಾತನಾಡಿ ಈ ಎರಡು ಮಸೂದೆಗಳು ಬೆಳೆಗಳ ಎಂಎಸ್‌ಪಿ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಮತ್ತು ರೈತರಿಂದ ಎಂಎಸ್‌ಪಿ ಮೇಲೆ ಬೆಳೆಗಳ ಖರೀದಿ ಮುಂದುವರಿಯುತ್ತದೆ ಎಂದು ಸದನಕ್ಕೆ ಭರವಸೆ ನೀಡಿದರು.

ರೈತರು (Farmers) ತಮ್ಮ ಸ್ವಂತ ಇಚ್ಛೆಯಂತೆ ಈ ಮಸೂದೆಗಳ ಮೂಲಕ ಬೆಳೆಗಳನ್ನು ಮಾರಾಟ ಮಾಡುವ ಸ್ವಾತಂತ್ರ್ಯವನ್ನು ಪಡೆಯುತ್ತಾರೆ. ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯನ್ನು ಉಳಿಸಿಕೊಳ್ಳಲಾಗುವುದು ಮತ್ತು ರಾಜ್ಯಗಳ ಕಾಯ್ದೆಯಡಿ ಕಾರ್ಯನಿರ್ವಹಿಸುತ್ತಿರುವ ಮಂಡಿಗಳು ಸಹ ರಾಜ್ಯ ಸರ್ಕಾರಗಳ ಪ್ರಕಾರ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತವೆ ಎಂದು ತೋಮರ್ ಸ್ಪಷ್ಟಪಡಿಸಿದರು.

ಮೋದಿ ಸರ್ಕಾರ ರೈತರಿಗಾಗಿ 3 ಮಸೂದೆ ತಂದಿದ್ದು ಅದನ್ನು ಕಾಂಗ್ರೆಸ್ ವಿರೋಧಿಸುತ್ತಿದೆ: ಜೆ.ಪಿ.ನಡ್ಡಾ

ಈ ಮಸೂದೆಗಳು ಕೃಷಿ ಕ್ಷೇತ್ರದಲ್ಲಿ ಸಂಪೂರ್ಣ ಬದಲಾವಣೆಯನ್ನು ತರಲಿವೆ. ಇದು ರೈತರ ಜೀವನದಲ್ಲಿ ಕ್ರಾಂತಿಕಾರಿ ಬದಲಾವಣೆಯಾಗಿದೆ ಎಂದು ಅವರು ಹೇಳಿದರು. ಕೃಷಿಯಲ್ಲಿ ಖಾಸಗಿ ಹೂಡಿಕೆಯಿಂದಾಗಿ ಶೀಘ್ರ ಬೆಳವಣಿಗೆ ಕಂಡುಬರುತ್ತದೆ ಮತ್ತು ಉದ್ಯೋಗಾವಕಾಶಗಳು ಹೆಚ್ಚಾಗುತ್ತವೆ. ಬಲವಾದ ಕೃಷಿ ಕ್ಷೇತ್ರದ ಆರ್ಥಿಕತೆಯಿಂದಾಗಿ ದೇಶದ ಆರ್ಥಿಕ ಸ್ಥಿತಿ ಮತ್ತಷ್ಟು ಸುಧಾರಿಸುತ್ತದೆ ಎಂದು ತೋಮರ್ ವಿವರಿಸಿದರು.

ಅವ್ಯವಸ್ಥೆಯ ಮಧ್ಯೆ, ಎಂಎಸ್‌ಪಿ (MSP) ಮತ್ತು ಸರ್ಕಾರದ ಖರೀದಿ ವ್ಯವಸ್ಥೆ ಉಳಿಯುತ್ತದೆ ಎಂದು ಪಿಎಂ ನರೇಂದ್ರ ಮೋದಿ (Narendra Modi) ಸ್ಪಷ್ಟಪಡಿಸಿದರು. ರೈತರಿಗೆ ಬಿಲ್‌ಗಳ ಲಾಭವಾಗಲಿದೆ. ಮಸೂದೆಗಳನ್ನು ವಿರೋಧಿಸಿ  ರೈತರನ್ನು ಗೊಂದಲಗೊಳಿಸುವಲ್ಲಿ ಸಾಕಷ್ಟು ಅಧಿಕಾರಗಳು ತೊಡಗಿಕೊಂಡಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಅಕಾಲಿ ದಳದ ಕೋಟಾದ ನಾಯಕ ಹರ್ಸಿಮ್ರತ್ ಕೌರ್ ಅವರು ಮಸೂದೆಗಳನ್ನು ವಿರೋಧಿಸಿ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಮಯದಲ್ಲಿ ಪ್ರಧಾನಿಯವರ ಈ ಹೇಳಿಕೆ ಬಂದಿದೆ.

ದಕ್ಷಿಣ ಭಾರತದ ಮೊದಲ ಕಿಸಾನ್ ರೈಲು, ಆಂಧ್ರ ಪ್ರದೇಶದಿಂದ ನೇರವಾಗಿ ದೆಹಲಿ ತಲುಪಲಿರುವ ಹಣ್ಣು-ತರಕಾರಿಗಳು

ಗುರುವಾರ ಪ್ರಧಾನಿ ಮೋದಿ ಅವರು ಲೋಕಸಭೆಯಲ್ಲಿ ಐತಿಹಾಸಿಕ ಕೃಷಿ ಸುಧಾರಣಾ ಮಸೂದೆಗಳನ್ನು ಅಂಗೀಕರಿಸುವುದು ರೈತರಿಗೆ ಮತ್ತು ದೇಶದ ಕೃಷಿ ಕ್ಷೇತ್ರಕ್ಕೆ ಮಹತ್ವದ ಕ್ಷಣವಾಗಿದೆ. ಈ ಮಸೂದೆ ರೈತರನ್ನು ಮಧ್ಯವರ್ತಿಗಳಿಂದ ಮತ್ತು ಎಲ್ಲಾ ಅಡೆತಡೆಗಳಿಂದ ನಿಜವಾಗಿಯೂ ಮುಕ್ತಗೊಳಿಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

ಈ ಕೃಷಿ ಸುಧಾರಣೆಯೊಂದಿಗೆ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಹೊಸ ಅವಕಾಶಗಳನ್ನು ಪಡೆಯುತ್ತಾರೆ, ಅದು ಅವರ ಲಾಭವನ್ನು ಹೆಚ್ಚಿಸುತ್ತದೆ. ಇದರೊಂದಿಗೆ ನಮ್ಮ ಕೃಷಿ ಕ್ಷೇತ್ರಕ್ಕೆ ಆಧುನಿಕ ತಂತ್ರಜ್ಞಾನದ ಲಾಭ ದೊರಕಲಿದ್ದು ರೈತರಿಗೆ ಅಧಿಕಾರ ಸಿಗಲಿದೆ ಎಂದವರು ಇನ್ನೊಂದು ಟ್ವೀಟ್ ಮಾಡಿದ್ದಾರೆ.

ಅನೇಕ ಅಧಿಕಾರಗಳು ರೈತರನ್ನು ಗೊಂದಲಕ್ಕೀಡುಮಾಡುತ್ತಿವೆ. ಎಂಎಸ್‌ಪಿ ಮತ್ತು ಸರ್ಕಾರದ ಖರೀದಿ ವ್ಯವಸ್ಥೆ ಉಳಿಯುತ್ತದೆ ಎಂದು ನನ್ನ ರೈತ ಸಹೋದರ ಸಹೋದರಿಯರಿಗೆ ಭರವಸೆ ನೀಡುತ್ತೇನೆ. ಈ ಮಸೂದೆಗಳು ನಿಜವಾಗಿಯೂ ರೈತರಿಗೆ ಇನ್ನೂ ಹೆಚ್ಚಿನ ಆಯ್ಕೆಗಳನ್ನು ನೀಡುವ ಮೂಲಕ ಅವರನ್ನು ಸಬಲೀಕರಣಗೊಳಿಸಲಿವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತೊಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.

Trending News