ಗುಡುಗು ಸಹಿತ ಮಳೆಗೆ ಹಾನಿಗೊಳಗಾದ ತಾಜ್ ಮಹಲ್ ಸಂಕೀರ್ಣದ ಭಾಗಗಳು

 ಗುಡುಗು ಸಹಿತ ಮಳೆಯಿಂದಾಗಿ ತಾಜ್ ಮಹಲ್ ಸಂಕೀರ್ಣದ ಮುಖ್ಯ ಭಾಗ ಮತ್ತು ಅದರ ಐದು ಎತ್ತರದ ಗುಮ್ಮಟಗಳ ಕೆಳಗಿರುವ ಕೆಲವು ಭಾಗಗಳನ್ನು ಹಾನಿಗೊಳಗಾಗಿವೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

Last Updated : May 31, 2020, 04:21 PM IST
ಗುಡುಗು ಸಹಿತ ಮಳೆಗೆ ಹಾನಿಗೊಳಗಾದ ತಾಜ್ ಮಹಲ್ ಸಂಕೀರ್ಣದ ಭಾಗಗಳು title=

ನವದೆಹಲಿ:  ಗುಡುಗು ಸಹಿತ ಮಳೆಯಿಂದಾಗಿ ತಾಜ್ ಮಹಲ್ ಸಂಕೀರ್ಣದ ಮುಖ್ಯ ಭಾಗ ಮತ್ತು ಅದರ ಐದು ಎತ್ತರದ ಗುಮ್ಮಟಗಳ ಕೆಳಗಿರುವ ಕೆಲವು ಭಾಗಗಳನ್ನು ಹಾನಿಗೊಳಗಾಗಿವೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಕರೋನವೈರಸ್ ಲಾ ಡೌನ್ ಹಿನ್ನಲೆಯಲ್ಲಿ ವಿಶ್ವದ ಹೊಸ ಏಳು ಅದ್ಭುತಗಳಲ್ಲಿ ಒಂದಾದ ದೇಶದ ಉನ್ನತ ಪ್ರವಾಸಿ ಆಕರ್ಷಣೆ ತಾಜ್ ಮಹಲ್ ನ್ನು ಮಾರ್ಚ್ ತಿಂಗಳಿಂದ ಮುಚ್ಚಲಾಗಿದೆ."ಮೂಲ ರಚನೆಯ ಭಾಗವಾಗಿದ್ದ ಒಂದು ಮರಳುಗಲ್ಲಿನ ರೇಲಿಂಗ್ ಹಾನಿಯಾಗಿದೆ" ಎಂದು ಭಾರತದ ಪುರಾತತ್ವ ಸಮೀಕ್ಷೆಯ ಅಧೀಕ್ಷಕ ಪುರಾತತ್ವಶಾಸ್ತ್ರಜ್ಞ ವಸಂತ್ ಕುಮಾರ್ ಸ್ವರ್ಣಕರ್ ಎಎಫ್‌ಪಿಗೆ ತಿಳಿಸಿದ್ದಾರೆ.

1631 ರಲ್ಲಿ ಜನ್ಮ ನೀಡಿದ ಮರಣಹೊಂದಿದ ತನ್ನ ಪ್ರೀತಿಯ ಹೆಂಡತಿ ಮುಮ್ತಾಜ್ ಮಹಲ್ ಅವರ ಸಮಾಧಿಯಾಗಿ ಮೊಘಲ್ ಚಕ್ರವರ್ತಿ ಷಹಜಹಾನ್ ನಿರ್ಮಿಸಿದ ಪ್ರೀತಿಯ ಸ್ಮಾರಕದ ಮುಖ್ಯ ರಚನೆಗೆ ಯಾವುದೇ ಹಾನಿ ಇಲ್ಲ ಎಂದು ಅವರು ಹೇಳಿದರು.ಸ್ಥಳೀಯ ಮಾಧ್ಯಮ ವರದಿಗಳು ಶುಕ್ರವಾರ ಗುಡುಗು ಮತ್ತು ಮಿಂಚಿನ ಮಳೆಯಿಂದಾಗಿ  ಉತ್ತರ ಪ್ರದೇಶದ ಎರಡು ಜಿಲ್ಲೆಗಳಲ್ಲಿ ಕನಿಷ್ಠ 13 ಜನರು ಸಾವನ್ನಪ್ಪಿದ್ದಾರೆ.

ಮಾರಣಾಂತಿಕ ಮಿಂಚಿನ ಹೊಡೆತಗಳು ಜೂನ್-ಅಕ್ಟೋಬರ್ ಮಾನ್ಸೂನ್ ಋತುವಿನಲ್ಲಿ ಸಾಮಾನ್ಯವಾಗಿದೆ.ಕಳೆದ ವರ್ಷ ಮಧ್ಯಪ್ರದೇಶದಲ್ಲಿ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಕನಿಷ್ಠ 150 ಜನರು ಮಿಂಚಿನಿಂದ ಸಾವನ್ನಪ್ಪಿದ್ದರು.

Trending News