ಬಿಹಾರ: ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದ 3 ಯುವಕರ ಸಾವು

ಈ ಮೂವರು ಯುವಕರು ತಮ್ಮ ಸ್ನೇಹಿತನ ತಂಗಿಯ ವಿವಾಹಕ್ಕಾಗಿ ಧನಬಾದ್ನಿಂದ ದಾನಪುರಕ್ಕೆ ಬಂದಿದ್ದರು ಎನ್ನಲಾಗಿದೆ.  

Last Updated : Apr 23, 2019, 11:10 AM IST
ಬಿಹಾರ: ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದ 3 ಯುವಕರ ಸಾವು title=
Representational Image

ಪಾಟ್ನಾ: ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದ ಮೂವರು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಧಾರುಣ ಘಟನೆ ಬಿಹಾರದ ಪಟ್ನಾ ಜಿಲ್ಲೆಯ ಅಚಿಲ್ಪುರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ.

ಜಾರ್ಖಂಡ್ ನ ಈ ಯುವಕರು ತಮ್ಮ ಸ್ನೇಹಿತನ ತಂಗಿಯ ವಿವಾಹಕ್ಕಾಗಿ ಧನಬಾದ್ನಿಂದ ದಾನಪುರಕ್ಕೆ ಬಂದಿದ್ದರು. ಆ ವೇಳೆ ಮೂವರು ಯುವಕರು ಪಟ್ನಾದ ಗಂಗಾ ನದಿಯ ಪಿಪಪುಲ್ ಘಾಟ್ನಲ್ಲಿ ಸ್ನಾನಕ್ಕೆಂದು ತೆರಳಿದ್ದಾರೆ. ಈ ವೇಳೆ ನೀರಿನಲ್ಲಿ ಓರ್ವ ಯುವಕ ಕೊಚ್ಚಿ ಹೋಗುತ್ತಿದ್ದ, ಆತನನ್ನು ರಕ್ಷಿಸಲು ತೆರಳಿದ ಮತ್ತಿಬ್ಬರು ಯುವಕರೂ ನೀರಿನ ರಬಸಕ್ಕೆ ಸಿಲುಕಿದ್ದಾರೆ. ಈ ಸಂದರ್ಭದಲ್ಲಿ ಮೂವರು ನೀರಿನಲ್ಲಿ ಮುಳುಗಿ ಮೇಲೆ ಬರಲಾರದೆ ಸಾವನ್ನಪ್ಪಿದ್ದಾರೆ ಎಂದು ಅಖಿಲ್ಪುರ್ ಪೊಲೀಸ್ ಠಾಣೆಯ ಅಧಿಕಾರಿ ಅಶ್ರಫ್ ಅಲಮ್ ತಿಳಿಸಿದ್ದಾರೆ.

ಮೃತ ಯುವಕರನ್ನು ಮಾಸೂಮ್ (21), ಸಚಿನ್ (20), ಅಜಯ್ (20) ಎಂದು ಗುರುತಿಸಲಾಗಿದೆ. ಎಲ್ಲರೂ ಧನಬಾದ್ನ ಕತ್ರಜ್ ಮಾಥಾಧ್ ನಿವಾಸಿಗಳು ಎಂದು ಪತ್ತೆ ಹಚ್ಚಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 
 

Trending News