ನವದೆಹಲಿ: ಮಹಾರಾಷ್ಟ್ರದಲ್ಲಿ ಬಿಜೆಪಿಯೇತರ ಸರ್ಕಾರ ರಚನೆಗೆ ಶಿವಸೇನಾ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಪ್ರಯತ್ನಿಸುತ್ತಿರುವ ಬೆನ್ನಲ್ಲೇ ವಿಳಂಬ ನೀತಿ ಅನುಸರಿಸುತ್ತಿರುವ ಕಾಂಗ್ರೆಸ್ ಪಕ್ಷದ ವಿರುದ್ಧ ಶರದ್ ಪವಾರ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಇಂದು ಬೆಳಿಗ್ಗೆ ಮುಂಬೈಗೆ ತನ್ನ ನಾಯಕರನ್ನು ಕಳುಹಿಸುವುದನ್ನು ಕಾಂಗ್ರೆಸ್ ತಡೆಹಿಡಿದಿದೆ, ಶರದ್ ಪವಾರ್ ಅವರನ್ನು ದೆಹಲಿಗೆ ಬಂದು ಮುಖ್ಯಸ್ಥೆ ಸೋನಿಯಾ ಗಾಂಧಿ ಅವರೊಂದಿಗೆ ಮಾತನಾಡಬೇಕೆಂದು ಕೇಳಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಎನ್ಸಿಪಿ ಮುಖ್ಯಸ್ಥರು ತಮ್ಮ ಪಕ್ಷದ ಶಾಸಕರೊಂದಿಗಿನ ಸಭೆಯನ್ನು ಉಲ್ಲೇಖಿಸಿ ನಿರಾಕರಿಸಿದರು, ಮತ್ತು ನಂತರ ಇಬ್ಬರು ಫೋನ್ನಲ್ಲಿ ಮಾತನಾಡಿದರು ಎನ್ನಲಾಗಿದೆ.
ಈ ಹಿಂದೆ ಕಾಂಗ್ರೆಸ್ ಪಕ್ಷದ ನಾಯಕ ಅಹ್ಮದ್ ಪಟೇಲ್ ಅವರು ಪವಾರ್ ಅವರೊಂದಿಗೆ ಸರ್ಕಾರ ರಚನೆಯ ಸಾಧ್ಯತೆಗಳ ಬಗ್ಗೆ ಚರ್ಚಿಸಲು ಮಾತನಾಡಿದ್ದಾರೆಂದು ವರದಿಯಾಗಿದೆ. ನಿನ್ನೆ ಸಂಜೆ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ಅವರೊಂದಿಗಿನ ಸಭೆಯ ಮುಂದೆ, ಶಿವಸೇನೆಗೆ ಕಾಂಗ್ರೆಸ್ ಬೆಂಬಲ ಪತ್ರಗಳು ಇರಲಿಲ್ಲ. ಶಿವಸೇನೆಯನ್ನು ಬೆಂಬಲಿಸಲು ಒಪ್ಪಿದ್ದ ಎನ್ಸಿಪಿ ತನ್ನ ಬೆಂಬಲ ಪತ್ರವನ್ನು ಹಿಡಿದಿಟ್ಟುಕೊಂಡಿತ್ತು. 'ನಾವು ನಿನ್ನೆ ಕಾಂಗ್ರೆಸ್ ಪತ್ರಕ್ಕಾಗಿ ಕಾಯುತ್ತಿದ್ದೆವು. ಆದರೆ ನಾವು ಸಂಜೆ ವೇಳೆಗೆ ಪತ್ರ ಬರಲಿಲ್ಲ. ಆದ್ದರಿಂದ ನಮಗೆ ಪತ್ರ ನೀಡುವುದು ಸರಿ ಅನಿಸಲಿಲ್ಲ. ನಿರ್ಧಾರ ಏನೇ ಇರಲಿ, ಸ್ಥಿರತೆ ಇರಬೇಕು' ಎಂದು ಅಜಿತ್ ಪವಾರ್ ಹೇಳಿದರು.
'ಬೆಳಿಗ್ಗೆ 10 ರಿಂದ ಸೋಮವಾರ ಸಂಜೆ 7:30 ರವರೆಗೆ, ಶರದ್ ಪವಾರ್, ಪ್ರಫುಲ್ ಪಟೇಲ್ ಸೇರಿದಂತೆ ನಮ್ಮ ನಾಯಕರು ತಮ್ಮ ಪತ್ರಕ್ಕಾಗಿ ಕಾಯುತ್ತಿದ್ದರು.ಶಿವಸೇನೆ ಸಂಜೆ 7: 30 ರವರೆಗೆ ಪತ್ರವನ್ನು ಸಲ್ಲಿಸಬೇಕಾಗಿತ್ತು. ಕಾಂಗ್ರೆಸ್ ತನ್ನ ಪತ್ರವನ್ನು ಕಳುಹಿಸದಿದ್ದರೆ ನಾವು ಬೆಂಬಲ ನೀಡುವುದಾದರು ಹೇಗೆ ? ಎಂದು 'ಅಜಿತ್ ಪವಾರ್ ಹೇಳಿದರು.