ದೆಹಲಿಯ ನೂತನ ಮೇಯರ್ ಆಗಿ ಆಯ್ಕೆಯಾದ ಶೆಲ್ಲಿ ಒಬೆರಾಯ್..!

ಹೊಸ ಮೇಯರ್ ಆಗಿ ಆಯ್ಕೆಯಾದ ನಂತರ ಒಬೆರಾಯ್ ಅವರ ಗೆಲುವಿಗೆ ಅಭಿನಂದನೆ ಸಲ್ಲಿಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಅವರ ಉಪ ಮನೀಷ್ ಸಿಸೋಡಿಯಾ, “ಇಂದು ಮುನ್ಸಿಪಲ್ ಕಾರ್ಪೊರೇಶನ್‌ನಲ್ಲಿ ದೆಹಲಿಯ ಜನರು ಗೆದ್ದಿದ್ದಾರೆ ಮತ್ತು ಗೂಂಡಾಗಿರಿಯನ್ನು ಸೋಲಿಸಿದ್ದಾರೆ” ಎಂದು ಹೇಳಿದ್ದಾರೆ.

Written by - Zee Kannada News Desk | Last Updated : Feb 22, 2023, 04:37 PM IST
  • ಬೆಳಗ್ಗೆ 11.30ರ ಸುಮಾರಿಗೆ ಆರಂಭವಾದ ಮತದಾನ ಸುಮಾರು 2 ಗಂಟೆಗೂ ಹೆಚ್ಚು ಕಾಲ ನಡೆಯಿತು
  • ಮೇಯರ್ ಚುನಾವಣೆಯಲ್ಲಿ ಒಟ್ಟು 10 ನಾಮನಿರ್ದೇಶಿತ ಸಂಸದರು, 14 ನಾಮನಿರ್ದೇಶಿತ ಶಾಸಕರು ಮತ್ತು 241 ಚುನಾಯಿತ ಕೌನ್ಸಿಲರ್‌ಗಳು 250 ಮತ ಚಲಾಯಿಸಿದರು
  • ಸಂಸದರು ಮತ್ತು ಶಾಸಕರು ಮತ ಚಲಾಯಿಸುವುದರೊಂದಿಗೆ ಮತದಾನ ಪ್ರಾರಂಭವಾಯಿತು
ದೆಹಲಿಯ ನೂತನ ಮೇಯರ್ ಆಗಿ ಆಯ್ಕೆಯಾದ ಶೆಲ್ಲಿ ಒಬೆರಾಯ್..! title=

ನವದೆಹಲಿ: ದೆಹಲಿಯ ಮಹಾನಗರ ಪಾಲಿಕೆಯ (ಎಂಸಿಡಿ) ಹೊಸ ಮೇಯರ್ ಆಗಿ ಆಮ್ ಆದ್ಮಿ ಪಕ್ಷದ ಶೆಲ್ಲಿ ಒಬೆರಾಯ್ ನೇಮಕವಾದ ನಂತರ ಆಮ್ ಆದ್ಮಿ ಪಕ್ಷವು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ.

ಹೊಸ ಮೇಯರ್ ಆಗಿ ಆಯ್ಕೆಯಾದ ನಂತರ ಒಬೆರಾಯ್ ಅವರ ಗೆಲುವಿಗೆ ಅಭಿನಂದನೆ ಸಲ್ಲಿಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಅವರ ಉಪ ಮನೀಷ್ ಸಿಸೋಡಿಯಾ, “ಇಂದು ಮುನ್ಸಿಪಲ್ ಕಾರ್ಪೊರೇಶನ್‌ನಲ್ಲಿ ದೆಹಲಿಯ ಜನರು ಗೆದ್ದಿದ್ದಾರೆ ಮತ್ತು ಗೂಂಡಾಗಿರಿಯನ್ನು ಸೋಲಿಸಿದ್ದಾರೆ” ಎಂದು ಹೇಳಿದ್ದಾರೆ.

"ಗೂಂಡಾವಾದ ಸೋತಿದೆ, ಸಾರ್ವಜನಿಕರು ಗೆದ್ದಿದ್ದಾರೆ. ಬಿಜೆಪಿ ಮೋಸದಿಂದ ಮೇಯರ್ ಮಾಡಲು ಬಯಸಿತ್ತು. ದೆಹಲಿ ಮೇಯರ್ ಆಗಿ ಆಯ್ಕೆಯಾದ ಶೆಲ್ಲಿ ಒಬೆರಾಯ್ ಅವರನ್ನು ನಾನು ಅಭಿನಂದಿಸುತ್ತೇನೆ. ಮುಂದೆ ಅಲೆ ಇಕ್ಬಾಲ್ ಉಪಮೇಯರ್ ಆಗುತ್ತಾರೆ" ಎಂದು ಆಪ್ ಶಾhttps://zeenews.india.com/kannada/career/new-recruitment-mode-for-jcos/ors-with-online-common-entrance-test-119013ಸಕ ಸೌರಭ್ ಭಾರದ್ವಾಜ್ ಹೇಳಿದ್ದಾರೆ.

ಇದನ್ನೂ ಓದಿ: ರಾಜಧಾನಿಯಲ್ಲಿ10 ಲಕ್ಷಕ್ಕೂ ಅಧಿಕ ಡಿಜಿಟಲ್‌ ಮೀಟರ್‌ ಅಳವಡಿಕೆ : ಗ್ರಾಹಕರಿಗೆ ತಪ್ಪದ ಹೆಚ್ವಿನ ಹೊರೆ

ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಶೆಲ್ಲಿ ಒಬೆರಾಯ್ ಅವರು 150 ಮತಗಳನ್ನು ಪಡೆದು ದೆಹಲಿಯ ನೂತನ ಮೇಯರ್ ಆಗಿ ಈ ಹಿಂದೆ ಆಯ್ಕೆಯಾಗಿದ್ದರು. “ನಾನು ಈ ಸದನವನ್ನು ಸಾಂವಿಧಾನಿಕ ರೀತಿಯಲ್ಲಿ ನಡೆಸುತ್ತೇನೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ನೀವೆಲ್ಲರೂ ಸದನದ ಘನತೆಯನ್ನು ಕಾಪಾಡುತ್ತೀರಿ ಮತ್ತು ಅದರ ಸುಗಮ ಕಾರ್ಯನಿರ್ವಹಣೆಗೆ ಸಹಕರಿಸುತ್ತೀರಿ ಎಂದು ನಾನು ನಿರೀಕ್ಷಿಸುತ್ತೇನೆ" ಎಂದು ದೆಹಲಿ ಮೇಯರ್ ಶೆಲ್ಲಿ ಒಬೆರಾಯ್ ಅವರು ಮೇಯರ್ ಆಗಿ ಆಯ್ಕೆಯಾದ ತಕ್ಷಣ ಹೇಳಿದರು.

ಮುನ್ಸಿಪಲ್ ಕಾರ್ಪೋರೇಶನ್ ಆಫ್ ದೆಹಲಿ (MCD) ಚುನಾವಣೆಯಲ್ಲಿ ಬಿಜೆಪಿಯು 116 ಮತಗಳನ್ನು ಪಡೆದು ದೆಹಲಿಯ ಮೇಯರ್ ಅನ್ನು ಆಯ್ಕೆ ಮಾಡಲು ಹಿಂದಿನ ಮೂರು ಪ್ರಯತ್ನಗಳು ಮಾಡಿ ಯಶಸ್ವಿಯಾಗವಲ್ಲಿ ವಿಫಲವಾಗಿತ್ತು

ಬೆಳಗ್ಗೆ 11.30ರ ಸುಮಾರಿಗೆ ಆರಂಭವಾದ ಮತದಾನ ಸುಮಾರು 2 ಗಂಟೆಗೂ ಹೆಚ್ಚು ಕಾಲ ನಡೆಯಿತು. ಮೇಯರ್ ಚುನಾವಣೆಯಲ್ಲಿ ಒಟ್ಟು 10 ನಾಮನಿರ್ದೇಶಿತ ಸಂಸದರು, 14 ನಾಮನಿರ್ದೇಶಿತ ಶಾಸಕರು ಮತ್ತು 241 ಚುನಾಯಿತ ಕೌನ್ಸಿಲರ್‌ಗಳು 250 ಮತ ಚಲಾಯಿಸಿದರು. ಸಂಸದರು ಮತ್ತು ಶಾಸಕರು ಮತ ಚಲಾಯಿಸುವುದರೊಂದಿಗೆ ಮತದಾನ ಪ್ರಾರಂಭವಾಯಿತು, ನಂತರ ಚುನಾಯಿತ ಕೌನ್ಸಿಲರ್‌ಗಳು ಮತ ಚಲಾಯಿಸಿದರು. ಎರಡೂ ಪಕ್ಷಗಳ ನಾಮನಿರ್ದೇಶಿತ ಶಾಸಕರು ಸಹ ಮತ ಚಲಾಯಿಸಿದ್ದು, ಅವರಲ್ಲಿ 13 ಎಎಪಿ ಮತ್ತು 1 ಬಿಜೆಪಿಯವರಾಗಿದ್ದಾರೆ.

ಇದನ್ನೂ ಓದಿ:ಪರಿಸರ ಸ್ನೇಹಿ ವೇದಿಕೆ ಪರಿಕಲ್ಪನೆ; ವಿಲೇವಾರಿ ಮಾಡಬಹುದಾದ ರೂ.14 ಲಕ್ಷ ಮೊತ್ತದ ಪ್ಲಾಸ್ಟಿಕ್ ವಸ್ತುಗಳ ಬಳಕೆ

ಎಎಪಿ ಶಾಸಕ ಅಖಿಲೇಶ್ ಪತಿ ತ್ರಿಪಾಠಿ ಕೂಡ ಮತದಾನ ಮಾಡಿದರು. ಕಳೆದ ಚುನಾವಣೆಯಲ್ಲಿ ಅಖಿಲೇಶ್ ಪತಿ ತ್ರಿಪಾಠಿ ಮತ್ತು ಸಂಜೀವ್ ಝಾ ಅವರಿಬ್ಬರೂ ಭ್ರಷ್ಟಾಚಾರದ ಆರೋಪ ಹೊತ್ತಿರುವ ಹಿನ್ನೆಲೆಯಲ್ಲಿ ಸಭಾಧ್ಯಕ್ಷರು ಮತದಾನ ಮಾಡದಂತೆ ನಿರ್ಬಂಧಿಸಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News