ಸೋನಿಪತ್: ಪತ್ನಿಯೊಂದಿಗೆ ಅಕ್ರಮ ಸಂಬಂಧದ ಶಂಕೆ, ವ್ಯಕ್ತಿ ಕೊಲೆ

ಮೃತ ಬಿಜೇಂದರ್ ಅವರ ಮೊಬೈಲ್ ಫೋನ್‌ನಿಂದ ಕರೆ ವಿವರ ಪಡೆದ ಪೊಲೀಸರಿಗೆ ಹಲವು ಪ್ರಮುಖ ಸುಳಿವುಗಳು ದೊರೆತಿವೆ.

Last Updated : Nov 6, 2019, 01:51 PM IST
ಸೋನಿಪತ್: ಪತ್ನಿಯೊಂದಿಗೆ ಅಕ್ರಮ ಸಂಬಂಧದ ಶಂಕೆ, ವ್ಯಕ್ತಿ ಕೊಲೆ title=

ಸೋನಿಪತ್: ಹರಿಯಾಣದ (Haryana) ಸೋನಿಪತ್‌ನಲ್ಲಿ (Sonipat) ಒಣ ಹುಲ್ಲನ್ನು ಸುಡುವ ನೆಪದಲ್ಲಿ ಯುವಕನನ್ನು ಸುಟ್ಟುಹಾಕಿದ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿನ ಬುಸಾನಾ ಗ್ರಾಮದಲ್ಲಿ ಖುಷಿರಾಮ್ ಎಂಬಾತನ ಪತ್ನಿಯೊಂದಿಗೆ ಬಿಜೇಂದರ್ ಎಂಬಾತ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಶಂಕೆಯ ಮೇರೆಗೆ ಆತನನ್ನು ಕೊಲೆ ಮಾಡಲಾಗಿದೆ. ನಂತರ, ಆತನ ಮೃತ ದೇಹವನ್ನು ಒಣಹುಲ್ಲಿನಿಂದ ಸುಡಲು ಯತ್ನಿಸುತ್ತಿರುವ ಇಬ್ಬರು ಆರೋಪಿಗಳನ್ನು ಪೊಲೀಸರು ಹಿಡಿದಿದ್ದಾರೆ.

ವಾಸ್ತವವಾಗಿ, ಸೋನಿಪತ್‌ನ ಗೋಹಾನ ಗ್ರಾಮದ ಪಾರಾಲಿಯಲ್ಲಿ ಅಮಾನುಷವಾಗಿ ಹತ್ಯೆಗೀಡಾದ ವ್ಯಕ್ತಿಯ ಹತ್ಯೆಯನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ. ಅಕ್ರಮ ಸಂಬಂಧದ ಶಂಕೆಯಿಂದಾಗಿ ಈ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಇಬ್ಬರು ಸಹೋದರರನ್ನು ಪೊಲೀಸರು ಬಂಧಿಸಿದ್ದಾರೆ.

ಬಿಜೇಂದರ್‌ನನ್ನು ಖುಷಿರಾಮ್ ಮತ್ತು ಪ್ರತಾಪ್ ಎಂಬ ಸಹೋದರರಿಬ್ಬರು ಹತ್ಯೆಗೈದಿದ್ದಾರೆ. ಬಿಜೇಂದರ್ ಬುಸಾನಾ ಗ್ರಾಮದಲ್ಲಿ ಅಡುಗೆ ಕೆಲಸ ಮಾಡುತ್ತಿದ್ದನು. ಆತ ಖುಷಿರಾಮ್ ಎಂಬಾತನ ಹೆಂಡತಿಯೊಂದಿಗೆ ಅಕ್ರಮ ಸಂಬಂಧವನ್ನು ಹೊಂದಿದ್ದನು ಎಂದು ಆರೋಪಿಸಲಾಗಿದೆ. ಮೃತ ಬಿಜೇಂದರ್ ಅವರ ಮೊಬೈಲ್ ಫೋನ್‌ನಿಂದ ಕರೆ ವಿವರ ಪಡೆದ ಪೊಲೀಸರಿಗೆ ಹಲವು ಪ್ರಮುಖ ಸುಳಿವುಗಳು ದೊರೆತಿವೆ ಎಂದು ಮಾಹಿತಿ ನೀಡಿದ ಪೊಲೀಸರು, ಬಳಿಕ ನಮ್ಮ ತಂದ ಖುಷಿರಾಮ್ ಮನೆಗೆ ತೆರಳಿತು. ಅಷ್ಟರಲ್ಲಿ ಮನೆಯಲ್ಲಿದ್ದ ಎಲ್ಲರೂ ಪರಾರಿಯಾಗಿದ್ದರು. ಆ ಸಂದರ್ಭದಲ್ಲಿ ಅಲ್ಲಿದ್ದ ಮಹಿಳೆಯೊಬ್ಬರು ಅದೇ ಕುಟುಂಬದಿಂದ ಬಿಜೇಂದರ್‌ನನ್ನು ಕೊಲೆ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು ಎಂದು ತಿಳಿಸಿದರು.

ಪತ್ನಿ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ ಶಂಕೆಯಿಂದಾಗಿ ಬಿಜೆಂದರ್‌ನನ್ನು ತನ್ನ ಮನೆಗೆ ಕರೆಸಿದ ಆರೋಪಿ ಖುಷಿರಾಮ್ ಆತನನ್ನು ಕೋಲಿನಿಂದ ಹಲ್ಲೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ಆತ ಸಾವನ್ನಪ್ಪಿದ್ದಾನೆ. ಘಟನೆ ನಡೆದಾಗ ಆರೋಪಿ ಖುಷಿರಾಮ್ ಪತ್ನಿ ಕೂಡ ಹಾಜರಿದ್ದರು ಎನ್ನಲಾಗಿದೆ.

ಸಾಕ್ಷ್ಯವನ್ನು ಅಳಿಸಲು ಆರೋಪಿಗಳು ಒಣ ಹುಲ್ಲನ್ನು ಸುಡುವ ನೆಪದಲ್ಲಿ ಮೃತ ದೇಹವನ್ನು ಸುಡಲು ಮುಂದಾಗಿದ್ದರು. ಪ್ರಕರಣದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಆರೋಪಿಗಳನ್ನು ಬೆನ್ನಟ್ಟಿದ ಪೊಲೀಸರು ಇಬ್ಬರನ್ನೂ ಬಂಧಿಸಿದ್ದು, ಸದ್ಯ ಪರಾರಿಯಾಗಿರುವ ಖುಷಿರಾಮ್ ಪತ್ನಿ ಊರ್ಮಿಳಾರನ್ನು ಹುಡುಕುತ್ತಿದ್ದಾರೆ. 

Trending News