ತತ್ವ ಬೋಧಕ, ಸಾಮಾಜಿಕ ಪರಿವರ್ತಕ ಬಸವಣ್ಣನವರ ಜೀವನ ಮತ್ತು ಹಿರಿಮೆ

Basava Jayanti 2023: ಬಸವೇಶ್ವರ ಅಥವಾ ಬಸವಣ್ಣನವರು 12ನೇ ಶತಮಾನದಲ್ಲಿ ಕರ್ನಾಟಕದಲ್ಲಿದ್ದ ತತ್ವಶಾಸ್ತ್ರಜ್ಞ, ಸಾಮಾಜಿಕ ಪರಿವರ್ತಕರು. ಅವರನ್ನು ಲಿಂಗಾಯತ ಮತದ ಇತಿಹಾಸದಲ್ಲಿ ಅತ್ಯಂತ ಪ್ರಮುಖ ವ್ಯಕ್ತಿ ಎಂದೇ ಪರಿಗಣಿಸಲಾಗಿದೆ. ಇಂದಿಗೂ ಲಿಂಗಾಯತ ಪರಂಪರೆಯನ್ನು ಕರ್ನಾಟಕದಲ್ಲಿ ಮತ್ತು ಭಾರತದ ಇತರ ಭಾಗಗಳಲ್ಲಿ ಸಾಕಷ್ಟು ಜನರು ಅನುಸರಿಸುತ್ತಾರೆ.  

Written by - Girish Linganna | Last Updated : Apr 23, 2023, 12:06 PM IST
  • ತತ್ವ ಬೋಧಕ, ಸಾಮಾಜಿಕ ಪರಿವರ್ತಕ ಬಸವಣ್ಣ
  • 12ನೇ ಶತಮಾನದಲ್ಲಿ ಕರ್ನಾಟಕದಲ್ಲಿದ್ದ ತತ್ವಶಾಸ್ತ್ರಜ್ಞ
  • ಬಸವಣ್ಣನವರ ಜೀವನ ಮತ್ತು ಹಿರಿಮೆ
ತತ್ವ ಬೋಧಕ, ಸಾಮಾಜಿಕ ಪರಿವರ್ತಕ ಬಸವಣ್ಣನವರ ಜೀವನ ಮತ್ತು ಹಿರಿಮೆ title=
Basavanna

Basava Jayanti 2023: ಬಸವಣ್ಣನವರು ಇಂದಿನ ಬಿಜಾಪುರ ಜಿಲ್ಲೆಯ, ಬಾಗೇವಾಡಿ ಪಟ್ಟಣದಲ್ಲಿ 1134ನೇ ಇಸವಿಯಲ್ಲಿ ಮಾದರಸ ಮತ್ತು ಮಾದಲಾಂಬಿಕೆ ದಂಪತಿಯ ಮಗನಾಗಿ ಜನಿಸಿದರು. ಅವರು ಬಾಲ್ಯದಲ್ಲೇ ಅತ್ಯಂತ ಬುದ್ಧಿವಂತ ವಿದ್ಯಾರ್ಥಿಯಾಗಿದ್ದು, ಆಧ್ಯಾತ್ಮ ಮತ್ತು ಸಾಮಾಜಿಕ ಪರಿವರ್ತನೆಯಲ್ಲಿ ಅಪಾರ ಆಸಕ್ತಿ ಹೊಂದಿದ್ದರು. ಅವರು 11ನೇ ಶತಮಾನದ ಸಂತರಾದ ರಾಮಾನುಜಾಚಾರ್ಯರು ಮತ್ತು 8ನೇ ಶತಮಾನದ ಸಂತರಾದ ಆದಿ ಶಂಕರಾಚಾರ್ಯರ ಬೋಧನೆಗಳಿಂದ ಅಪಾರ ಪ್ರಭಾವಕ್ಕೊಳಗಾಗಿದ್ದರು.

ಬಸವಣ್ಣನವರು ಆರಂಭದಲ್ಲಿ ಕಲಚೂರಿ ರಾಜಮನೆತನದ ಬಿಜ್ಜಳ ಅರಸನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು. ಆದರೆ ಅವರಿಗೆ ಆಸ್ಥಾನದಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರ ಮತ್ತು ದಬ್ಬಾಳಿಕೆಯ ನೀತಿಗಳನ್ನು ನೋಡಿ ಭ್ರಮನಿರಸನಗೊಂಡು, ಆಸ್ಥಾನವನ್ನು ತ್ಯಜಿಸಿ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಪರಿವರ್ತನೆಯ ಸಂದೇಶ ಸಾರಲು ತೊಡಗಿದರು.

ಇದನ್ನೂ ಓದಿ: ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಗೆ ಸಿಬಿಐನಿಂದ ಸಮನ್ಸ್ ಜಾರಿ 

ಬಸವಣ್ಣನವರ ಬೋಧನೆಗಳು ಪ್ರಮುಖವಾಗಿ ದೇವರೆಡೆಗೆ ವ್ಯಕ್ತಿಗತ ಭಕ್ತಿ ಹಾಗೂ ವೈಯಕ್ತಿಕ ಚಾರಿತ್ರ್ಯಗಳು ಢಾಂಬಿಕ ಆಚರಣೆಗಳು ಮತ್ತು ಜಾತಿ ಪದ್ಧತಿಗಿಂತ ಮುಖ್ಯವಾದವು ಎಂದು ಸಾರಿದ್ದವು. ಅವರು ಎಲ್ಲ ಮನುಷ್ಯರೂ ಸಮಾನರು ಎಂದು ಸಾರಿ, ಜಾತಿಗಳ ಆಧಾರದಿಂದ ಒಬ್ಬರು ಮೇಲು, ಇನ್ನೊಬ್ಬರು ಕೀಳು ಎನ್ನುವುದು ನೈತಿಕವಾಗಿ ತಪ್ಪು ಎಂದು ಸಾರಿದರು. ಅವರು ಮಹಿಳಾ ಅಭಿವೃದ್ಧಿ ಮತ್ತು ವರದಕ್ಷಿಣೆ ಪಿಡುಗಿನ ನಿಷೇಧಕ್ಕಾಗಿ ಹೋರಾಡಿದರು.

ಬಸವಣ್ಣನವರನ್ನು ಬಹುಶಃ ಅವರು ಅನುಭವ ಮಂಟಪವನ್ನು ಸ್ಥಾಪಿಸಿದ್ದಕ್ಕಾಗಿ ಸದಾ ಸ್ಮರಿಸಲಾಗುತ್ತದೆ. ಅನುಭವ ಮಂಟಪದಲ್ಲಿ ಎಲ್ಲಾ ಜಾತಿ, ಸಮುದಾಯ, ಹಿನ್ನೆಲೆಗಳ ಜನರು ಭಾಗವಹಿಸಿ, ಆಧ್ಯಾತ್ಮಿಕ ಹಾಗೂ ಸಾಮಾಜಿಕ ವಿಚಾರಗಳ ಕುರಿತು ಚರ್ಚೆ ನಡೆಸುತ್ತಿದ್ದರು. ಸಾಮಾಜಿಕ ಶ್ರೇಣೀಕೃತ ವ್ಯವಸ್ಥೆಯನ್ನು ಹೊಂದಿದ್ದ ಮಧ್ಯಕಾಲೀನ ಭಾರತದಲ್ಲಿ ಜಾತಿಗಳ ಆಧಾರದಲ್ಲಿ ಕೆಳವರ್ಗಗಳ ಜನರನ್ನು ಧಾರ್ಮಿಕ, ಶೈಕ್ಷಣಿಕ ಜ್ಞಾನಗಳಿಂದ ಹೊರಗಿಡಲಾಗುತ್ತಿತ್ತು. ಅಂತಹ ಸಂದರ್ಭದಲ್ಲಿ ಎಲ್ಲಾ ಜಾತಿ, ಅಂತಸ್ತುಗಳ ಜನರನ್ನು ಒಳಗೊಂಡು, ಅವರ ಅನುಭವ, ಆಲೋಚನೆಗಳನ್ನು ಹಂಚಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದ ಅನುಭವ ಮಂಟಪ ಒಂದು ಕ್ರಾಂತಿಕಾರಿ ವ್ಯವಸ್ಥೆಯಾಗಿತ್ತು.

ಬಸವಣ್ಣನವರ ಬೋಧನೆಗಳು ಲಿಂಗಾಯತ ಸಮಾಜ ಮತ್ತು ಕರ್ನಾಟಕದ ಜನತೆಯ ಮೇಲೆ ಅಪಾರ ಪ್ರಭಾವ ಬೀರಿದ್ದು, ಈ ಪ್ರಾಂತ್ಯದಲ್ಲಿ ಲಿಂಗಾಯತ ಧರ್ಮ ಹೆಚ್ಚು ಹೆಚ್ಚು ಪ್ರಾಮುಖ್ಯತೆ ಗಳಿಸಿತು. ಲಿಂಗಾಯತರು ಜಾತಿ ವ್ಯವಸ್ಥೆ ಮತ್ತು ಹಿಂದೂ ಧರ್ಮದಲ್ಲಿದ್ದ ಹಲವು ಆಚರಣೆಗಳನ್ನು ತಿರಸ್ಕರಿಸಿ, ವೈಯಕ್ತಿಕ ಭಕ್ತಿ ಮತ್ತು ಚಾರಿತ್ರ್ಯಕ್ಕೆ ಹೆಚ್ಚಿನ ಒತ್ತು ನೀಡಿದರು.

ಇದನ್ನೂ ಓದಿ: ಇಂದು ಬಾಗಲಕೋಟೆ, ವಿಜಯಪುರದಲ್ಲಿ ರಾಹುಲ್ ಗಾಂಧಿ ಮತಬೇಟೆ

ಇಂದು ಕರ್ನಾಟಕ ಮತ್ತು ಭಾರತದಾದ್ಯಂತ ಬಸವಣ್ಣನವರನ್ನು ಸಾಮಾಜಿಕ ಪರಿವರ್ತನೆ ನಡೆಸಿದ ಸಂತ ಎಂದು ಆರಾಧಿಸಲಾಗುತ್ತದೆ. ಅವರ ಬೋಧನೆಗಳು ಎಲ್ಲಾ ವರ್ಗದ ಜನರಿಗೂ ಸ್ಫೂರ್ತಿ ನೀಡಿ, ಇಂದಿಗೂ ಧಾರ್ಮಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಕಾರಣವಾಗಿವೆ. ಇಂದಿನ ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮ ಪಟ್ಟಣವನ್ನು ಲಿಂಗಾಯತರ ಧಾರ್ಮಿಕ ಕೇಂದ್ರ ಎಂದು ಪರಿಗಣಿಸಲಾಗಿದೆ. ಇಲ್ಲಿ ಬಸವಣ್ಣ ಮತ್ತು ಇತರ ಲಿಂಗಾಯತ ಶರಣರಿಗಾಗಿ ನಿರ್ಮಿಸಿರುವ ಸ್ಮಾರಕಗಳು, ಮಂದಿರಗಳೂ ಇವೆ.

ಬಸವಣ್ಣನವರು ಓರ್ವ ದೂರದೃಷ್ಟಿ ಹೊಂದಿದ್ದ ಬೋಧಕ ಹಾಗೂ ಸಾಮಾಜಿಕ ಪರಿವರ್ತಕರಾಗಿದ್ದು, ತನ್ನ ಸಂಪೂರ್ಣ ಜೀವನವನ್ನು ಆಧ್ಯಾತ್ಮಿಕ ಹಾಗೂ ಸಾಮಾಜಿಕ ಉನ್ನತಿಗಾಗಿ ಮೀಸಲಿಟ್ಟರು. ಅವರ ಬೋಧನೆಗಳು ಇಂದಿಗೂ ಎಲ್ಲಾ ವರ್ಗಗಳ ಜನರಿಗೆ ಪ್ರೇರಣಾದಾಯಿಯಾಗಿದ್ದು, ವೈಯಕ್ತಿಕ ಹಾಗೂ ಸಾಮಾಜಿಕ ಅಭ್ಯುದಯಕ್ಕೆ ಕಾರಣವಾಗಿವೆ. ಅವರ ಹಿರಿಮೆ ಇಂದಿಗೂ ಕರ್ನಾಟಕದ ಮತ್ತು ಭಾರತದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯ ಪ್ರಮುಖ ಭಾಗವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News