Unique Temple: ಇಲ್ಲಿ ದೇವರಿಗೆ ಬೀಡಿಯೇ ನೇವೇದ್ಯ, ಇಲ್ಲದಿದ್ದರೆ ಕೆಡುಕಾಗುತ್ತಂತೆ!

Unique Temple: ಇಂದು ನಾವು ನಿಮಗೆ ಹೇಳಲು ಹೊರಟಿರುವುದು ನೈವೇದ್ಯವಲ್ಲ ದೇವರಿಗೆ ಬೀಡಿ ಅರ್ಪಿಸುವ ದೇವಸ್ಥಾನದ ಬಗ್ಗೆ. ಈ ದೇವಾಲಯದ ಬಗ್ಗೆ ವಿವರವಾಗಿ ತಿಳಿಯೋಣ.

Written by - Yashaswini V | Last Updated : Feb 14, 2022, 01:45 PM IST
  • ಮುಸಹರ್ವಾ ದೇವಾಲಯವು ಬಿಹಾರದ ಕೈಮೂರ್ ಜಿಲ್ಲೆಯಲ್ಲಿದೆ
  • ದೇವಾಲಯವು 1400 ಅಡಿ ಎತ್ತರದ ಬೆಟ್ಟದ ಮೇಲೆ ನೆಲೆಗೊಂಡಿದೆ
  • ದಾರಿಯಲ್ಲಿ ಹೋಗುವವರು ಬೀಡಿ ಕಟ್ಟುತ್ತಾರೆ
Unique Temple: ಇಲ್ಲಿ ದೇವರಿಗೆ ಬೀಡಿಯೇ ನೇವೇದ್ಯ, ಇಲ್ಲದಿದ್ದರೆ ಕೆಡುಕಾಗುತ್ತಂತೆ!  title=
Musharwa Baba Temple

Unique Temple: ಭಾರತದಲ್ಲಿ ದೇವರು ಮತ್ತು ದೇವಾಲಯಗಳ ಬಗ್ಗೆ ಜನರಿಗೆ ಸಾಕಷ್ಟು ನಂಬಿಕೆ ಇದೆ. ಹಾಗಾಗಿಯೇ ದೇಶದಲ್ಲಿ ಲಕ್ಷಾಂತರ ದೇವಾಲಯಗಳಿವೆ. ದೇವಸ್ಥಾನವಿಲ್ಲದ ಯಾವುದೇ ಹಳ್ಳಿ ಇರುವುದಿಲ್ಲ. ಕೆಲವು ವಿಶೇಷ ಕಾರಣಗಳಿಂದ ಪ್ರಸಿದ್ಧವಾದ ಅನೇಕ ದೇವಾಲಯಗಳಿವೆ. ಭಕ್ತರು ದೇವಾಲಯಗಳಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ ಮತ್ತು ಭಗವಂತನನ್ನು ಮೆಚ್ಚಿಸಲು ಪ್ರಸಾದದಂತಹ ವಸ್ತುಗಳನ್ನು ಅರ್ಪಿಸುತ್ತಾರೆ. ಆದರೆ ಇಂದು ನಾವು ನಿಮಗೆ ಹೇಳಲು ಹೊರಟಿರುವುದು ನೈವೇದ್ಯವಲ್ಲ ದೇವರಿಗೆ ಬೀಡಿ ಅರ್ಪಿಸುವ ದೇವಸ್ಥಾನದ (Unique Temple) ಬಗ್ಗೆ. ಕೇಳಲು ವಿಚಿತ್ರ ಎನಿಸಬಹುದು. ಆದರೆ ಇದು ಸಂಪೂರ್ಣ ಸತ್ಯ. ಈ ದೇವಾಲಯದ ಬಗ್ಗೆ ವಿವರವಾಗಿ ತಿಳಿಯೋಣ.

ದೇವಾಲಯವು 1400 ಅಡಿ ಎತ್ತರದ ಬೆಟ್ಟದ ಮೇಲೆ ನೆಲೆಗೊಂಡಿದೆ:
ಮಾಧ್ಯಮ ವರದಿಗಳ ಪ್ರಕಾರ, ಈ ದೇವಾಲಯದ (Unique Temple)  ಹೆಸರು ಮುಸಹರ್ವಾ ದೇವಾಲಯ. ಇದು ಬಿಹಾರದ ಕೈಮೂರ್ ಜಿಲ್ಲೆಯ ಭಗವಾನ್‌ಪುರ ಬ್ಲಾಕ್‌ನಲ್ಲಿ 1400 ಅಡಿ ಎತ್ತರದ ಬೆಟ್ಟದಲ್ಲಿದೆ. ಉತ್ತರಪ್ರದೇಶ, ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶದ ಜನರು ತಮ್ಮ ಸಂಕಷ್ಟಗಳನ್ನು ಬಗೆಹರಿಸುವಂತೆ ಹರಕೆ ಹೊತ್ತು ಇಲ್ಲಿಗೆ ಬರುತ್ತಾರೆ. ಭಕ್ತರು ತಮ್ಮ ದಕ್ಷ ಮಂಗಲ ಯಾತ್ರೆಯಲ್ಲಿ ಮುಶರ್ವ ಬಾಬಾರಿಗೆ ಬೀಡಿಗಳನ್ನು ಅರ್ಪಿಸುತ್ತಾರೆ. ಈ ಪ್ರದೇಶವನ್ನು ನಕ್ಸಲ್ ಪೀಡಿತ ಪ್ರದೇಶವೆಂದು ಪರಿಗಣಿಸಲಾಗಿದೆ. ಅಧೌರಾ ಬೆಟ್ಟವನ್ನು ನಕ್ಸಲೀಯರು ಆಳುತ್ತಿದ್ದರು ಮತ್ತು ಅಂದಿನಿಂದ ಈ ದೇವಾಲಯದಲ್ಲಿ ಬೀಡಿ ನೈವೇದ್ಯ ಮಾಡುವ ಪದ್ಧತಿ ಇದೆ ಎಂದೂ ಕೂಡ ಹೇಳಲಾಗುತ್ತದೆ.

ಇದನ್ನೂ ಓದಿ- ISRO: PSLV-C52 ಯಶಸ್ವಿ ಉಡಾವಣೆ

ಬೆಟ್ಟ ಹತ್ತುವ ಮೊದಲು ಮತ್ತು ನಂತರ ಬೀಡಿ ಅರ್ಪಿಸಲಾಗುತ್ತದೆ:
ಇಲ್ಲಿ ಬೆಟ್ಟದ ಕಣಿವೆಯನ್ನು ಹತ್ತುವ ಮೊದಲು ಮತ್ತು ಹತ್ತಿದ ನಂತರ ಮುಶರ್ವ ಬಾಬಾನಿಗೆ ಬೀಡಿಯನ್ನು (Offering BiDi To God) ಅರ್ಪಿಸುವುದು ಅವಶ್ಯಕ ಎಂದು ನಂಬಲಾಗಿದೆ. ಬಾಬಾರಿಗೆ ಬೀಡಿ ಅರ್ಪಿಸುವುದರಿಂದ ಅವರ ಜೀವನದಲ್ಲಿ ತಲೆದೋರಿರುವ ನಾನಾ ರೀತಿಯ ಅಡೆತಡೆಗಳು ಕೊನೆಗೊಳ್ಳಲಿವೆ ಎಂಬ ನಂಬಿಕೆ ಇದೆ. ಬೀಡಿ ಅರ್ಪಿಸದವರು ಬೀಡಿ ಕಟ್ಟಲು ಮುಶರ್ವ ಬಾಬಾರವರ ಕಾಣಿಕೆ ಡಬ್ಬದಲ್ಲಿ ಹಣ ಹಾಕಿ ಮುಂದೆ ಸಾಗುತ್ತಾರೆ. 

ಇದನ್ನೂ ಓದಿ- 'ಬಿಜೆಪಿ ಮುಸ್ಲಿಂರ ಎಲ್ಲಾ ಚಿಹ್ನೆಗಳನ್ನು ಅಳಿಸುತ್ತದೆ': ಮೆಹಬೂಬಾ ಮುಫ್ತಿ

ಅವಿಧೇಯರಾದವರಿಗೆ ತೊಂದರೆ:
ದೇವಸ್ಥಾನದ ಅರ್ಚಕ ಗೋಪಾಲ್ ಬಾಬಾ ಅವರು 22 ವರ್ಷಗಳಿಂದ ಮುಸಾಹರ್ವಾ ಬಾಬಾರ ದೇವಸ್ಥಾನದಲ್ಲಿ ಜನರು ಪೂಜಿಸುತ್ತಿದ್ದಾರೆ ಎಂದು ಹೇಳುತ್ತಾರೆ. ಅಘೋರಾಕ್ಕೆ ಹೋಗುವ ಯಾವುದೇ ದಾರಿಹೋಕ ಅಥವಾ ಪ್ರಯಾಣಿಕರು ಈ ಮಾರ್ಗದ ಮೂಲಕ ಹಾದು ಹೋಗುತ್ತಾರೆ. ಅವರು ದೇವರಿಗೆ  ಬೀಡಿ ಅರ್ಪಿಸುವುದು ಅನಿವಾರ್ಯ. ಬಾಬಾನ ನಂಬಿಕೆಯನ್ನು ಕಡೆಗಣಿಸಿ ಅವರಿಗೆ ನಿಷ್ಠೆ ತೋರದ ಇಂತಹ ಅನೇಕ ಪ್ರಯಾಣಿಕರೂ ಇದ್ದಾರೆ. ಅಂತಹವರಿಗೆ ಕಷ್ಟಗಳು ಬೆಂಬಿಡದೆ ಕಾಡುತ್ತವೆ. ಹಾಗಾಗಿ ಬೆಟ್ಟದ ಪಯಣ ಸಲೀಸಾಗಿ ಸಾಗಬೇಕಾದರೆ ಎಚ್ಚರಿಕೆಯ ಸಾಮಾಗ್ರಿಗಳ ಜೊತೆಗೆ ಬೀಡಿ ಕಟ್ಟನ್ನು ತರಬೇಕಾಗುತ್ತದೆ. ಆಗ ಮಾತ್ರ ಪ್ರಯಾಣ ಪೂರ್ಣಗೊಳ್ಳುತ್ತದೆ ಎಂದು ಹೇಳಲಾಗುವುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News