Weather Update: ಇಂದು ಈ ಭಾಗಗಳಲ್ಲಿ ಗಾಳಿ-ಮಳೆ ಭೀತಿ: ಇಂದಿನ ಹವಾಮಾನದ ಕುರಿತು IMD ನೀಡಿದೆ ಬಿಗ್ ಅಪ್ಡೇಟ್!

All India Weather Update: ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ಪ್ರಕಾರ, ದಕ್ಷಿಣ ಭಾರತದಲ್ಲಿ ಮಾನ್ಸೂನ್ ನಿಧಾನವಾಗಿ ಕೇರಳದ ಕಡೆಗೆ ಚಲಿಸುತ್ತಿದೆ. ಮತ್ತೊಂದೆಡೆ, ಮತ್ತೊಂದು ಪಾಶ್ಚಿಮಾತ್ಯ ಅಡಚಣೆ ಶೀಘ್ರದಲ್ಲೇ ಪಶ್ಚಿಮ ಹಿಮಾಲಯವನ್ನು ಪ್ರವೇಶಿಸಲಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ವಾತಾವರಣ ಮತ್ತಷ್ಟು ಹಿತಕರವಾಗಬಹುದು.

Written by - Bhavishya Shetty | Last Updated : Jun 2, 2023, 07:15 AM IST
    • ಮುಂಗಾರು ಪೂರ್ವ ಮತ್ತು ಪಶ್ಚಿಮ ಭಾಗಗಳಿಗೆ ಏಕಕಾಲಕ್ಕೆ ತಲುಪುವ ಸಾಧ್ಯತೆ ವ್ಯಕ್ತವಾಗುತ್ತಿದೆ
    • ಪ್ರತಿ ವರ್ಷ ಮಾನ್ಸೂನ್‌ ನ ಮೊದಲ ಆರಂಭ ಕಾಣುವುದು ಕೇರಳ ರಾಜ್ಯ
    • ದಕ್ಷಿಣ ಭಾರತದಲ್ಲಿ ಮಾನ್ಸೂನ್ ನಿಧಾನವಾಗಿ ಕೇರಳದ ಕಡೆಗೆ ಚಲಿಸುತ್ತಿದೆ
Weather Update: ಇಂದು ಈ ಭಾಗಗಳಲ್ಲಿ ಗಾಳಿ-ಮಳೆ ಭೀತಿ: ಇಂದಿನ ಹವಾಮಾನದ ಕುರಿತು IMD ನೀಡಿದೆ ಬಿಗ್ ಅಪ್ಡೇಟ್!  title=
Karnataka Rain

All India Weather Update: ನೈಋತ್ಯ ಮಾನ್ಸೂನ್ ನಿಧಾನವಾಗಿ ಪ್ರಗತಿಯಲ್ಲಿದೆ. ಮೇ 29ರವರೆಗೆ ಮುಂಗಾರು ಮಳೆ ಕೊಂಚ ಮಂದಗತಿಯಲ್ಲಿದ್ದರೂ ಈಗ ನಿರಂತರವಾಗಿ ಮುನ್ನುಗ್ಗುತ್ತಿದೆ. ಮುಂಗಾರು ಪೂರ್ವ ಮತ್ತು ಪಶ್ಚಿಮ ಭಾಗಗಳಿಗೆ ಏಕಕಾಲಕ್ಕೆ ತಲುಪುವ ಸಾಧ್ಯತೆ ವ್ಯಕ್ತವಾಗುತ್ತಿದೆ. ಪ್ರತಿ ವರ್ಷ ಮಾನ್ಸೂನ್‌ ನ ಮೊದಲ ಆರಂಭ ಕಾಣುವುದು ಕೇರಳ ರಾಜ್ಯ. ಆದರೆ ಈ ಬಾರಿ ಸ್ವಲ್ಪ ವಿಳಂಬವಾಗಿದೆ.

ಇದನ್ನೂ ಓದಿ: ಬಲೆನೋಗೆ ಪರ್ಯಾಯ ಈ ಕಾರು ! ಫೈವ್ ಸ್ಟಾರ್ ಸೇಫ್ಟಿ ರೇಟಿಂಗ್ ಇರುವ ಈ ಕಾರಿನ ಬೆಲೆ ಕೂಡಾ ಕಡಿಮೆ

ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ಪ್ರಕಾರ, ದಕ್ಷಿಣ ಭಾರತದಲ್ಲಿ ಮಾನ್ಸೂನ್ ನಿಧಾನವಾಗಿ ಕೇರಳದ ಕಡೆಗೆ ಚಲಿಸುತ್ತಿದೆ. ಮತ್ತೊಂದೆಡೆ, ಮತ್ತೊಂದು ಪಾಶ್ಚಿಮಾತ್ಯ ಅಡಚಣೆ ಶೀಘ್ರದಲ್ಲೇ ಪಶ್ಚಿಮ ಹಿಮಾಲಯವನ್ನು ಪ್ರವೇಶಿಸಲಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ವಾತಾವರಣ ಮತ್ತಷ್ಟು ಹಿತಕರವಾಗಬಹುದು. ಪ್ರಸ್ತುತ ಹವಾಮಾನದ ಕುರಿತು ಮಾತನಾಡುವುದಾದರೆ, ಗುರುವಾರ ಮಧ್ಯಪ್ರದೇಶ, ರಾಜಸ್ಥಾನ, ಮಧ್ಯ ಮಹಾರಾಷ್ಟ್ರ, ಕೇರಳ ಮತ್ತು ಛತ್ತೀಸ್‌ಗಢದ ಒಂದೆರಡು ಸ್ಥಳಗಳಲ್ಲಿ ಲಘು ಮಳೆಯಾಗಿದೆ. ಒಡಿಶಾ, ತಮಿಳುನಾಡು, ಕೇರಳ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಿದೆ.

ಕಳೆದ 24 ಗಂಟೆಗಳಲ್ಲಿ ಈ ರಾಜ್ಯಗಳಲ್ಲಿ ಮಳೆ:

ಕಳೆದ 24 ಗಂಟೆಗಳಲ್ಲಿ, ಹರಿಯಾಣ, ದಕ್ಷಿಣ ಒಳ ಕರ್ನಾಟಕ, ಲಕ್ಷದ್ವೀಪ ಮತ್ತು ಕರಾವಳಿ ಆಂಧ್ರಪ್ರದೇಶದ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಿದೆ. ಪಶ್ಚಿಮ ಹಿಮಾಲಯದ ಮೇಲ್ಭಾಗದ= ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆ ಮತ್ತು ಹಿಮಪಾತ ಸಂಭವಿಸಿದೆ. ಗುಡುಗು ಸಹಿತ ಮಳೆಯಿಂದಾಗಿ ರಾಜಸ್ಥಾನದಲ್ಲಿ ಗರಿಷ್ಠ ತಾಪಮಾನದಲ್ಲಿ ಗಣನೀಯ ಇಳಿಕೆಯಾಗಿದೆ. ಪಶ್ಚಿಮ ರಾಜಸ್ಥಾನದ ಭಾಗಗಳಾದ ಜೋಧ್‌ಪುರ ಮತ್ತು ಜೈಸಲ್ಮೇರ್ ದಶಕದಲ್ಲಿ ಅತ್ಯಂತ ಕಡಿಮೆ ಗರಿಷ್ಠ ತಾಪಮಾನವನ್ನು ದಾಖಲಿಸಿದೆ.

ಇದನ್ನೂ ಓದಿ: Good News: ಜುಲೈ ಅಂತ್ಯದ ವೇಳೆಗೆ ರಾಜ್ಯಕ್ಕೆ ಮತ್ತೊಂದು ‘ವಂದೇ ಭಾರತ್’ ರೈಲು!

ಇಂದು ಹೀಗಿರಲಿದೆ ಹವಾಮಾನ:

ಏಜೆನ್ಸಿ ಪ್ರಕಾರ, ಇಂದು ಹರ್ಯಾಣ, ರಾಜಸ್ಥಾನ ಮತ್ತು ದೆಹಲಿಯ ಕೆಲವು ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆ ಮತ್ತು ಬಿರುಗಾಳಿ ಬೀಸುವ ಸಾಧ್ಯತೆ ಇದೆ. ಪಶ್ಚಿಮ ಉತ್ತರ ಪ್ರದೇಶ, ಪಶ್ಚಿಮ ಮಧ್ಯಪ್ರದೇಶ ಮತ್ತು ಗುಜರಾತ್‌ ನ ಉತ್ತರ ಭಾಗ, ದಕ್ಷಿಣ ಮಧ್ಯ ಮಹಾರಾಷ್ಟ್ರದ ಒಂದೆರಡು ಕಡೆ ಲಘು ಮಳೆಯಾಗುವ ಸಾಧ್ಯತೆಯಿದೆ. ಪಶ್ಚಿಮ ಹಿಮಾಲಯ, ಪಂಜಾಬ್‌ನ ಕೆಲವು ಭಾಗಗಳು, ದಕ್ಷಿಣ ಕರ್ನಾಟಕ, ಆಂಧ್ರಪ್ರದೇಶದ ಕರಾವಳಿ ಭಾಗಗಳು, ರಾಯಲಸೀಮಾ ಮತ್ತು ಲಕ್ಷದ್ವೀಪಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಇಂದು ಕೂಡ ಮಳೆಯಾಗುವ ಸಾಧ್ಯತೆಯಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News