ಮನೆ ಬಿಟ್ಟು ಹೋಗಿದ್ದ 10ರ ಬಾಲಕ ಪತ್ತೆ : ಇಷ್ಟು ಚಿಕ್ಕವಯಸ್ಸಿನಲ್ಲೇ ಇಷ್ಟು ದೊಡ್ಡ ನಿರ್ಧಾರ ಏಕೆ..?

ಪರಿಣವ್ ಯಾಕೇ ಮನೆ ಬಿಟ್ಟು ಹೋದ ಅನ್ನೋದು ಕೇಳಿದ್ರೆ ಇಷ್ಟಕ್ಕೇನಾ ಅನ್ಸುತ್ತೆ. ಆದ್ರೆ, ಪೂರ್ತಿ ಕಥೆ ಕೇಳಿದ್ರೆ ನೀವು ಶಾಕ್ ಆಗೋದ್ ಗ್ಯಾರಂಟಿ. ಪರಿಣವ್ ಗೆ ಒಳ್ಳೆ ಎಜುಕೇಷನ್ ಕೊಡಿಸ್ಬೇಕು‌ ಅಂತ ಪೋಷಕರು ಒಳ್ಳೆ ಸ್ಕೂಲ್ ನಲ್ಲಿ ಓದಿಸ್ತಿದ್ರು. ಆದ್ರೆ.. ಸಂಪೂರ್ಣ ಮಾಹಿತಿಗಾಗಿ ಮುಂದೆ ಓದಿ..

Written by - VISHWANATH HARIHARA | Edited by - Krishna N K | Last Updated : Jan 24, 2024, 06:54 PM IST
  • ನಾಪತ್ತೆಯಾಗಿದ್ದ ಬಾಲಕ ಹೈದರಾಬಾದಲ್ಲಿ ಪತ್ತೆ
  • ಮಗ ಸಿಕ್ಕಿದ್ದಕ್ಕೆ ನಿಟ್ಟುಸಿರು ಬಿಟ್ಟ ಪೋಷಕರು
  • ಬಾಲಕ ಪರಿಣವ್ ಪತ್ತೆಯಾಗಿದ್ದೆ ರೋಚಕ
ಮನೆ ಬಿಟ್ಟು ಹೋಗಿದ್ದ 10ರ ಬಾಲಕ ಪತ್ತೆ : ಇಷ್ಟು ಚಿಕ್ಕವಯಸ್ಸಿನಲ್ಲೇ ಇಷ್ಟು ದೊಡ್ಡ ನಿರ್ಧಾರ ಏಕೆ..? title=

ಬೆಂಗಳೂರು : ಆತ ಹನ್ನೆರಡು ವರ್ಷದ ಬಾಲಕ, ‌ಟ್ಯೂಷನ್‌ಗೆ ಅಂತ ಹೋದವ್ನು ಪೋಷಕರು ಪಿಕಪ್ ಮಾಡೊದಕ್ಕೆ ಹೋಗೋದ್ರೊಳಗೆ ಮಿಸ್ಸಾಗಿದ್ದ. ಹಾಗೇ ಮಿಸ್ಸಾಗಿದ್ದವನ ಪತ್ತೆಗಾಗಿ ಪೊಲೀಸರು ತಲೆ ಕೆಡಿಸಿಕೊಂಡಿದ್ದರು. ಆದರೆ ಹೈದರಾಬಾದ್‌ನಲ್ಲಿ ಬಾಲಕ ಪತ್ತೆಯಾಗಿದ್ದು, ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ. ಹಾಗಾದ್ರೆ, ಆ ಬಾಲಕ ಯಾಕೆ ನಾಪತ್ತೆಯಾಗಿದ್ದ, ಕಾರ್ಯಾಚರಣೆ ಹೇಗಿತ್ತು ಎಂಬ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

ಹೀಗೆ ಮೆಟ್ರೋ ಸ್ಟೇಷನ್ ನಲ್ಲಿ ನಿಂತ್ಕೊಂಡು ಮಹಿಳೆಯೊಬ್ಬರು ಕೇಳ್ತಿರೋ ಪ್ರಶ್ನೆಗಳಿಗೆ ತಲೆ ಆಡಿಸ್ತ ರೆಸ್ಪಾನ್ಸ್ ಮಾಡ್ತಿರೋ ಈ ಬಾಲಕನ ಹೆಸ್ರು ಪರಿಣವ್. ಬೆಂಗಳೂರಿನ ವೈಟ್ ಫೀಲ್ಡ್ ಸಮೀಪದ ವಿಜಯನಗರದ ಸುಖೇಶ್ ಹಾಗೂ ನಿವೇದಿತ ದಂಪತಿಯ ಪುತ್ರ. ಇದೇ ಭಾನುವಾರ ಟ್ಯೂಷನ್ ಗೆ ಅಂತ ಹೋಗಿದ್ದವನು ಪೋಷಕರು ಪಿಕಪ್ ಮಾಡೋದ್ರೊಳಗೆ ನಾಪತ್ತೆಯಾಗಿದ್ದ.

ಇದನ್ನೂ ಓದಿ:ದೇವರನ್ನು ಆಟಿಕೆ ಎನ್ನುವ ಕಾಂಗ್ರೆಸ್‌ ಪಕ್ಷಕ್ಕೆ ಈ ಹೇಳಿಕೆಯೇ ಅವನತಿಯ ಅಡಿಗಲ್ಲು: ಆರ್‌.ಅಶೋಕ

ಆ ಸಂಬಂಧ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದು, ಪೊಲೀಸ್ರು ಪತ್ತೆಕಾರ್ಯ ನಡೆಸಿದ್ದರು. ಇದರ ಮಧ್ಯೆ ನಾಪತ್ತೆಯಾಗಿದ್ದ ಬಾಲಕ ಪರಿಣವ್ ಹೈದರಾಬಾದ್ ನ ನಾಂಪಲ್ಲಿ‌ ಮೆಟ್ರೋ ನಿಲ್ಸಾಣದಲ್ಲಿ ಪತ್ತೆಯಾಗಿದ್ದು, ಮಿಸ್ಸಿಂಗ್ ಪ್ರಕರಣ ಸುಖಾಂತ್ಯ ಕಂಡಿದೆ. ಮಗನ ಪತ್ತೆಯಾಗಿದ್ದರಿಂದ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ. ಸದ್ಯ ಬಾಲಕನನ್ನ ಕರೆತರಲು ಪೊಲೀಸರೊಂದಿಗೆ ಪೋಷಕರು ಹೈದರಾಬಾದ್ ನ ನಾಂಪಲ್ಲಿ‌ಗೆ ಪ್ರಯಾಣ ಬೆಳೆಸಿ ಬಾಲಕನನ್ನ ಕರೆ ತಂದಿದ್ದಾರೆ. 

ಇನ್ನು ಪರಿಣವ್ ಯಾಕೇ ಮನೆ ಬಿಟ್ಟು ಹೋದ ಅನ್ನೋದು ಕೇಳಿದ್ರೆ ಇಷ್ಟಕ್ಕೇನಾ ಅನ್ಸುತ್ತೆ. ಆದ್ರೆ, ಪೂರ್ತಿ ಕಥೆ ಕೇಳಿದ್ರೆ ನೀವು ಶಾಕ್ ಆಗೋದ್ ಗ್ಯಾರಂಟಿ. ಪರಿಣವ್ ಗೆ ಒಳ್ಳೆ ಎಜುಕೇಷನ್ ಕೊಡಿಸ್ಬೇಕು‌ ಅಂತ ಪೋಷಕರು ಒಳ್ಳೆ ಸ್ಕೂಲ್ ನಲ್ಲಿ ಓದಿಸ್ತಿದ್ರು. ಆದ್ರೆ , ಟೆಸ್ಟ್ ನಲ್ಲಿ ಕಾಪಿ ಮಾಡಿ ಪರಿಣವ್ ಟೀಚರ್ಸ್ ಬಳಿ‌ ಸಿಕ್ಕಿ ಬಿದ್ದಿದ್ದ. ಪದೇ ಪದೇ ಅದು ರಿಪೀಟ್ ಆಗ್ತಿತ್ತು. ಒಂದ್ ರೀತಿ ಪೋಷಕರು ಹಾಗೂ ಟೀಚರ್ಸ್ ಪಾಲಿಗೆ ಪರಿಣವ್ ಕಿರಿಕ್ ಕಿಡ್ ಆಗಿದ್ದ. ಅದೇ ರೀತಿ ಕೆಲ ದಿನಗಳ ಹಿಂದೆ ಎಕ್ಸಾಂನಲ್ಲಿ ಕಾಪಿ‌ ಮಾಡಿ‌ ಸಿಕ್ಕಿ ಬಿದ್ದಿದ್ದ. ಆ ವಿಚಾರವನ್ನ ಟೀಚರ್ಸ್ ಪೋಷಕರಿಗೆ ಹೇಳಿದ್ರು. ವಿಚಾರ ತಿಳಿದ ಪರಿಣವ್ ತಂದೆ ಬರುವಷ್ಟರಲ್ಲಿ ಟ್ಯೂಷನ್ ಸೆಂಟರ್ ನಿಂದ ಕಾಲ್ಕಿತ್ತಿದ್ದ.

ಇದನ್ನೂ ಓದಿ:ಗಡಿ ಭಾಗದ 865 ಗ್ರಾಮಗಳಲ್ಲಿ ಆರೋಗ್ಯ ವಿಮೆ ಜಾರಿಗೆ ಮುಂದಾದ ಮಹಾರಾಷ್ಟ್ರ ಸರ್ಕಾರ: ಸಿಎಂ ಹೇಳಿದ್ದೇನು?

ಹಾಗೆ ವೈಟ್ ಫೀಲ್ಡ್ ನ ಟ್ಯೂಷನ್ ಸೆಂಟರ್ ನಿಂದ ಹೊರ ಬಂದವ್ನೇ ಇದ್ದ ಪಾಕೆಟ್ ಮನಿಯಲ್ಲಿ ಟಿಕೆಟ್ ತೆಗೆದುಕೊಂಡು ಮೆಜೆಸ್ಟಿಕ್ ಹೋಗಿದ್ದಾನೆ.‌ ಅಲ್ಲಿ ತನ್ನ ತಾತ ಗಿಫ್ಟ್ ಕೊಟ್ಟಿದ್ದ ಮೂರು ಪಾರ್ಕರ್ ಪೆನ್ ಗಳನ್ನ 300 ರೂಪಾಯಿಗೆ ಮಾರಾಟ ಮಾಡಿದ್ದಾನೆ. ಬಳಿಕ‌ ಕೆಎಸ್ಆರ್  ರೈಲ್ವೇ ನಿಲ್ದಾಣದಿಂದ ಮೈಸೂರಿಗೆ ತೆರಳಿದ್ದಾನೆ. ಅಲ್ಲಿ ಪ್ಯಾಲೆಸ್ ಗ್ರೌಂಡ್ ಬಳಿ ಭಾನುವಾರ ರಾತ್ರಿ ಕಳೆದು, ಬೆಳಗ್ಗೆ ಮೈಸೂರಿನಿಂದ ರೈಲಿನಲ್ಲಿ ಚೆನ್ನೈ, ಚೆನೈ ನಿಂದ ಹೈದರಾಬಾದ್ ಗೆ ಹೋಗಿದ್ದಾನೆ. ನಂತರ ಹೈದರಾಬಾದ್ ನ ನಾಂಪಲ್ಲಿ ಮೆಟ್ರೋ ನಿಲ್ದಾಣಕ್ಕೆ ಹೋಗಿದ್ದಾನೆ. ಅಷ್ಟರಲ್ಲಿ ಬೆಂಗಳೂರಿನಿಂದ ಹೈದರಾಬಾದ್ ಗೆ ಹೋಗಿದ್ದ ವೈಟ್ ಫೀಲ್ಡ್ ಏರಿಯಾದ ಮಹಿಳೆಯೊಬ್ಬರ ಕಣ್ಣಿಗೆ ಪರಿಣವ್ ಕಾಣಿಸಿಕೊಂಡಿದ್ದು , ಆಕೆ ಪರಿಣವ್ ತಾಯಿಗೆ ಮಾಹಿತಿ ನೀಡಿದ್ದಾರೆ.

ಮತ್ತೊಂದೆಡೆ ಪೊಲೀಸ್ರು ಸಹ ಮೂರು ತಂಡಗಳನ್ನ ರಚಿಸಿ ಪತ್ತೆಕಾರ್ಯದಲ್ಲಿ ನಿರತರಾಗಿದ್ದು, ಅಷ್ಟರಲ್ಲಿ‌ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ ಪೋಸ್ಟ್ ಗಳು ಪರಿಣವ್ ಪತ್ತೆಗೆ ಸಹಕಾರಿಯಾಗಿದೆ. ಸದ್ಯ ಬೆಂಗಳೂರಿಗೆ ಪರಿಣವ್ ನನ್ನ ಕರೆತರುತ್ತಿರೋ ಪೊಲೀಸ್ರು ಕೆಲ ಕಾನೂನು ಪ್ರಕ್ರಿಯೆ ಮುಗಿಸಿ ಬಾಲಕನನ್ನ ಪೋಷಕರಿಗೆ ಒಪ್ಪಿಸಲಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News