ರಾಜ್ಯದಲ್ಲಿ ಸರ್ವಪಕ್ಷ ಸರ್ಕಾರ ಜಾರಿಗೆ ಬರಬೇಕು-ಪೇಜಾವರ್ ಸ್ವಾಮೀಜಿ

    

Last Updated : Jun 1, 2018, 12:50 PM IST
ರಾಜ್ಯದಲ್ಲಿ ಸರ್ವಪಕ್ಷ ಸರ್ಕಾರ ಜಾರಿಗೆ ಬರಬೇಕು-ಪೇಜಾವರ್ ಸ್ವಾಮೀಜಿ title=

ಬೆಂಗಳೂರು: ರಾಜ್ಯ ಸರ್ಕಾರದ ವಿದ್ಯಮಾನಗಳಿಗೆ ಬೇಸರ ವ್ಯಕ್ತಪಡಿಸಿರುವ ಪೇಜಾವರ ಸ್ವಾಮೀಜಿ ರಾಜ್ಯದಲ್ಲಿ ಸರ್ವ ಪಕ್ಷ ಸರ್ಕಾರ ಜಾರಿಗೆ ಬರಬೇಕು ಎಂದು ಅಭಿಪ್ರಾಯಪಟ್ಟರು.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪೇಜಾವರ ಶ್ರೀಗಳು" ರಾಜಕಾರಣಿಗಳು ರೆಸಾರ್ಟ್ ನಲ್ಲಿ ತಲ್ಲಿನರಾಗಿದ್ದಾರೆ ಪಕ್ಷಗಳು ಪ್ರಜಾಪ್ರಬುತ್ವದ ವಿಕೃತಿಯಾಗಿದೆ ಅವುಗಳಿಗೆ ಯಾವುದೇ ರೀತಿಯ ನೈತಿಕತೆ ಇಲ್ಲ  ಎಂದು ತಿಳಿಸಿದರು. ಆದ್ದರಿಂದ ರಾಜ್ಯದಲ್ಲಿ ಇದೆಲ್ಲವನ್ನು ಹೋಗಲಾಡಿಸಲು ಸರ್ವಪಕ್ಷ ಸರ್ಕಾರ ಜಾರಿಗೆ  ಬರಬೇಕು ಎಂದರು.

ಇತ್ತೀಚಿಗೆ ಚುನಾವಣೆ ಮುಗಿದ ನಂತರ ಎಲ್ಲ ಪಕ್ಷಗಳು ರೆಸಾರ್ಟ್ನಲ್ಲಿ ತೊಡಗಿದ್ದವು.ಅಲ್ಲದೆ ಶಾಸಕರರನ್ನು ಕೂಡ ಸೆಳೆಯಲು ಪರಸ್ಪರ ಎಲ್ಲ ಪಕ್ಷಗಳು ಮುಂದಾಗಿದ್ದವು.ಈ ಹಿನ್ನಲೆಯಲ್ಲಿ ಪೇಜಾವರ ಶ್ರೀಗಳ ಹೇಳಿಕೆಯು ಬಂದಿದೆ.

Trending News