ಮುಂಬೈ ಕರ್ನಾಟಕ ಪ್ರವಾಸ ಮುಂದೂಡಿದ ಅಮಿತ್ ಶಾ

ಏಪ್ರಿಲ್ 12 ಮತ್ತು 13ರಂದು ರಾಜ್ಯಕ್ಕೆ ಮತ್ತೆ ಬರಲಿರುವ ಅಮಿತ್ ಶಾ.

Last Updated : Apr 2, 2018, 09:51 AM IST
ಮುಂಬೈ ಕರ್ನಾಟಕ ಪ್ರವಾಸ ಮುಂದೂಡಿದ ಅಮಿತ್ ಶಾ title=

ನವದೆಹಲಿ: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಏಪ್ರಿಲ್ 2, 3 ರಂದು ಮುಂಬೈ ಕರ್ನಾಟಕ ಭಾಗದಲ್ಲಿ ನಿಗದಿಯಾಗಿದ್ದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಪ್ರವಾಸವನ್ನು ಮುಂದೂಡಲಾಗಿದೆ.

ವಿಪಕ್ಷಗಳು ಸಂಸತ್ತಿನಲ್ಲಿಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ವಿರುದ್ಧ ಮಹಾಭಿಯೋಗ ಪ್ರಸ್ತಾಪ ಮಂಡಿಸುವ ಹಿನ್ನೆಲೆಯಲ್ಲಿ ಅಮಿತ್ ಶಾ ಇಂದು ರಾಜ್ಯಸಭೆಯಲ್ಲಿ ಉಪಸ್ಥಿತರಿರಬೇಕಾದ ಕಾರಣ ಮುಂಬೈ ‌ಕರ್ನಾಟಕ ಭಾಗಗಳಾದ ಬೆಳಗಾವಿ, ಬಾಗಲಕೋಟೆ, ಹಾವೇರಿಯಲ್ಲಿ ಸೋಮವಾರ ಮತ್ತು ಮಂಗಳವಾರ ನಿಗದಿ ಪಡಿಸಲಾಗಿದ್ದ ಅಮಿತ್ ಷಾ ಪ್ರವಾಸವನ್ನು ಏಪ್ರಿಲ್ 12 ಮತ್ತು 13ಕ್ಕೆ ಮುಂದೂಡಲಾಗಿದೆ. 

ಏಪ್ರಿಲ್ 12 ಮತ್ತು 13ರಂದು ರಾಜ್ಯಕ್ಕೆ ಮತ್ತೆ ಬರಲಿರುವ ಅಮಿತ್ ಶಾ ಕಾಲೇಜು ವಿದ್ಯಾರ್ಥಿಗಳ ಜೊತೆ ಸಂವಾದ, ಸಮಾಜ ಚಿಂತನಾ ಸಭೆ, ಮಹಿಳಾ ಸಮಾವೇಶ ರೋಡ್ ಶೋ ಗಳಲ್ಲಿ ಭಾಗವಹಿಸಲಿದ್ದಾರೆ.

Trending News