ದರ್ಶನ್‌ಗೆ ಪಾತಕಿಗಳು, ರೌಡಿಗಳೇ ಫ್ರೆಂಡ್ಸ್‌..! ಕೊಲೆ ಆರೋಪಿಯಿಂದ ವಿಡಿಯೋ ಕಾಲ್‌, ಮಾತಾಡಿದ್ದು ರೌಡಿ ಮಗ..

ನಟ ದರ್ಶನ್ ಸಹ ತನ್ನಂತೆಯೇ ಕೊಲೆ ಕೇಸಿನಲ್ಲಿ ಜೈಲು ಸೇರಿದ ದೊಡ್ಡ ದೊಡ್ಡ ನಟೋರಿಯಸ್ ರೌಡಿಗಳು, ದೊಡ್ಡ ರೌಡಿಶೀಟರ್‌ಗಳೊಂದಿಗೆ ಸ್ನೇಹ ಬೆಳಸಿಕೊಂಡಿದ್ದಾನೆ. ದರ್ಶನ್ ಗೆ ಜೈಲಲ್ಲಿ ಈ ವಿಡಿಯೋ ಕಾಲ್ ಮಾಡಿಸಿದ್ದು ರೌಡಿಶೀಟರ್‌ ಧರ್ಮ... ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..

Written by - VISHWANATH HARIHARA | Edited by - Krishna N K | Last Updated : Aug 25, 2024, 11:35 PM IST
    • ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್
    • ನಟ ದರ್ಶನ್ ಫೋಟೋ ವಿಡಿಯೋ ಸಾಕಷ್ಟು ಸದ್ದು ಮಾಡುತ್ತಿವೆ.
    • ಕೊಲೆ ಕೇಸಿನಲ್ಲಿ ಜೈಲು ಸೇರಿರುವ ರೌಡಿಶೀಟರ್ ಧರ್ಮ ಎಂಬುದು ಗೊತ್ತಾಗಿದೆ.
ದರ್ಶನ್‌ಗೆ ಪಾತಕಿಗಳು, ರೌಡಿಗಳೇ ಫ್ರೆಂಡ್ಸ್‌..! ಕೊಲೆ ಆರೋಪಿಯಿಂದ ವಿಡಿಯೋ ಕಾಲ್‌, ಮಾತಾಡಿದ್ದು ರೌಡಿ ಮಗ.. title=

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಫೋಟೋ ವಿಡಿಯೋ ಸಾಕಷ್ಟು ಸದ್ದು ಮಾಡುತ್ತಿವೆ. ಆದರೆ ಕೊಲೆ ಆರೋಪಿ ದರ್ಶನ್ ಗೆ ಜೈಲಲ್ಲಿ ಈ ವಿಡಿಯೋ ಕಾಲ್ ಮಾಡಿಸಿದ್ದು, ಕೊಲೆ ಕೇಸಿನಲ್ಲಿ ಜೈಲು ಸೇರಿರುವ ರೌಡಿಶೀಟರ್ ಧರ್ಮ ಎಂಬುದು ಗೊತ್ತಾಗಿದೆ. 

ಈ ಧರ್ಮ ಬಾಣಸವಾಡಿಯಲ್ಲಿ ಮೇ 7 ರಂದು ನಡೆದ ರೌಡಿಶೀಟರ್ ಕಾರ್ತಿಕೇಯನ್ ಎಂಬುವವನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಜೈಲು ಸೇರಿದ್ದ. ಈಗ ಕೊಲೆ ಕೇಸಿನಲ್ಲಿ ಜೈಲಿನಲ್ಲಿದ್ದರೂ ಹಣ ಹಾಗೂ ತೋಳ್ಬಲದಿಂದ ಧರ್ಮ ಸ್ಮಾರ್ಟ್ ಫೋನ್ ಬಳಕೆ ಮಾಡುತ್ತಿದ್ದಾನೆ. ಇನ್ನು ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಜೈಲು ಸೇರಿದ ದರ್ಶನ್‌ಗೆ ಅಭಿಮಾನಿಯಾಗಿರುವ ಧರ್ಮ ಜೈಲಿನಲ್ಲಿ ತುಸು ಹೆಚ್ಚಾಗಿಯೇ ಪರಿಚಯವಾಗಿದ್ದಾನೆ.

ಇದನ್ನೂ ಓದಿ:ಫೋಟೋ ಆಯ್ತು, ಈಗ ವಿಡಿಯೋ ಕಾಲ್..! ಜೈಲಿನಿಂದಲೇ ಅಭಿಮಾನಿಗೆ ಚೆನ್ನಾಗಿದ್ದೀನಿ ಚಿನ್ನ.. ಎಂದ ದರ್ಶನ್

ಜೈಲಿನಲ್ಲಿರುವ ಬಹುತೇಕರು ಅಪರಾಧಿ ಕೃತ್ಯಗಳಲ್ಲಿ ಭಾಗಿಯಾಗಿದ್ದವರೇ ಇರುತ್ತಾರೆ. ಅಂತೆಯೇ ದರ್ಶನ್ ಸಹ ತನ್ನಂತೆಯೇ ಕೊಲೆ ಕೇಸಿನಲ್ಲಿ ಜೈಲು ಸೇರಿದ ದೊಡ್ಡ ದೊಡ್ಡ ನಟೋರಿಯಸ್ ರೌಡಿಗಳು, ದೊಡ್ಡ ರೌಡಿಶೀಟರ್‌ಗಳೊಂದಿಗೆ ಸ್ನೇಹ ಬೆಳಸಿಕೊಂಡಿದ್ದಾನೆ. ಸದ್ಯ ಮಾರ್ಕೆಟ್ ಧರ್ಮನು ದರ್ಶನ್ ಇರುವ ಪಕ್ಕದ ಬ್ಯಾರಕ್ ನಲ್ಲಿದ್ದು, ಬ್ಯಾಡರಹಳ್ಳಿ ರೌಡಿಶೀಟರ್ ಜಾನಿ @ ಜನಾರ್ದನ್ ಮಗ ಸತ್ಯ ಎಂಬುವವನಿಗೆ ವೈಫೈ ಬಳಸಿಕೊಂಡು ಇನ್ಸ್ ಸ್ಟಾಗ್ರಾಂನಲ್ಲಿ ವಿಡಿಯೋ ಕಾಲ್ ಮಾಡಿದ್ದಾನೆ. 

ಈ ವೇಳೆ ದರ್ಶನ್ ಇಲ್ಲೇ ಇದ್ದಾರೆ ಮಾತನಾಡು ಎಂದಿದ್ದ. ಈ ವೇಳೆ ದರ್ಶನ್ ಸಹ ಸತ್ಯನಿಗೆ ಹಾಯ್ ಹೇಳಿದ್ದಾನೆ. ಇದನ್ನೇ ಬಂಡವಾಳ ಮಾಡಿಕೊಂಡು ಈ ಸತ್ಯ ಅದನ್ನ ರೆಕಾರ್ಡ್ ಮಾಡಿಕೊಂಡು ಏರಿಯಾದಲ್ಲಿ ಬಿಲ್ಡಪ್ ಕೊಟ್ಟಿದ್ದಾನೆ. ಇದೇ ವಿಡಿಯೋವನ್ನುಕಲಾಸಿಪಾಳ್ಯದ ಕೆಲ ಹುಡುಗರಿಗೂ ವಿಡಿಯೋ ಕಳಿಸಿದ್ದಾನೆ. 

ಇದನ್ನೂ ಓದಿ:ಪಶ್ಚಾತಾಪವೂ ಇಲ್ಲ, ನೋವಿಲ್ಲ..!! ಜೈಲಲ್ಲಿ ವಿಗ್‌ ಇಲ್ಲದೆ ಸಿಗರೇಟ್‌ ಸೇದಿಕೊಂಡು ಮಜಾ ಮಾಡುತ್ತಿರುವ ದಾಸ..

ಈ ಸತ್ಯ ಸಹ ಸಾಮಾನ್ಯನಲ್ಲ. ಅನ್ನಪೂರ್ಣೇಶ್ವರಿ ನಗರ ಠಾಣಾ ವ್ಯಾಪ್ತಿಯಲ್ಲಿ ಉಲ್ಟಾ ಮಚ್ಚಲ್ಲಿ ಕೆ ಎಲ್ ಇ‌ ಕಾಲೇಜ್ ವಿಧ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿ ಜೈಲಿಗೆ ಹೋಗಿ ಸದ್ಯ ಬೇಲ್ ಮೇಲೆ ಹೊರಗಿದ್ದಾನೆ. ಒಟ್ಟಾರೆಯಾಗಿ ದರ್ಶನ್ ಕೊಲೆ ಕೇಸಲ್ಲಿ ಜೈಲು ಸೇರಿ ಕಷ್ಟಪಡುತ್ತಿದ್ದಾರೆ ಎಂದುಕೊಂಡವರು ಈ ಫೋಟೋ ವಿಡಿಯೋ ನೋಡಿ ಶಾಕ್ ಆಗಿರುವುದಂತೂ ಸುಳ್ಳಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News