ಬೇಲೂರು ಶಾಸಕ ವೈ.ಎಸ್. ರುದ್ರೇಶ ಗೌಡ ಇನ್ನಿಲ್ಲ

ರಾಜ್ಯಸಭಾ ಚುನಾವಣೆಗೆಂದು ಬೇಲೂರಿನಿಂದ ಬೆಂಗಳೂರಿಗೆ ಬಂದಿದ್ದ ಬೇಲೂರು ಶಾಸಕ ವೈ.ಎಸ್. ರುದ್ರೇಶ ಗೌಡ ಮಾರ್ಚ್ 23ರಂದು ಬೆಳಿಗ್ಗೆ ಹೃದಯಾಘಾತದಿಂದ ವಿಕ್ರಂ ಆಸ್ಪತ್ರೆ ಸೇರಿದ್ದರು.

Last Updated : Mar 24, 2018, 01:34 PM IST
ಬೇಲೂರು ಶಾಸಕ ವೈ.ಎಸ್. ರುದ್ರೇಶ ಗೌಡ ಇನ್ನಿಲ್ಲ title=

ಬೆಂಗಳೂರು: ಹೃದಯಾಘಾತದಿಂದ ಶುಕ್ರವಾರ(ಮಾರ್ಚ್ 23) ಬೆಳಿಗ್ಗೆ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದ ಬೇಲೂರು ಕಾಂಗ್ರೆಸ್ ಶಾಸಕ ವೈ.ಎಸ್. ರುದ್ರೇಶ ಗೌಡ ಇಂದು(ಶನಿವಾರ) ಇಹಲೋಕ ತ್ಯಜಿಸಿದ್ದಾರೆ. ಮೃತರು ಪತ್ನಿ ಮತ್ತು ಪುತ್ರಿಯನ್ನು ಅಗಲಿದ್ದಾರೆ.

ರಾಜ್ಯಸಭಾ ಚುನಾವಣೆಗೆಂದು ಬೇಲೂರಿನಿಂದ ಬೆಂಗಳೂರಿಗೆ ಬಂದಿದ್ದ ಬೇಲೂರು ಶಾಸಕ ವೈ.ಎಸ್. ರುದ್ರೇಶ ಗೌಡ ಮಾರ್ಚ್ 23ರಂದು ಬೆಳಿಗ್ಗೆ ನಂದಿನಿ ಬಡಾವಣೆಯಲ್ಲಿರುವ ಅವರ ಮನೆಯಲ್ಲಿ ಹೃದಯಾಘಾತಕ್ಕಿಡಾಗಿ ವಿಕ್ರಂ ಆಸ್ಪತ್ರೆ ಸೇರಿದ್ದರು. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು. 

ಎರಡು ಬಾರಿ ಬೇಲೂರು ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದ ವೈ.ಎಸ್. ರುದ್ರೇಶ ಗೌಡ 3-4 ವರ್ಷದ ಹಿಂದೆ ಅಂಗವೈಕಲ್ಯತೆಗೆ ಒಳಗಾಗಿದ್ದರು. ಅದಕ್ಕಾಗಿ ವಿದೇಶದಲ್ಲೂ ಕೂಡ ಚಿಕಿತ್ಸೆ ಪಡೆದು ಬಂದಿದ್ದರು.

1995ರಲ್ಲಿ ಜನಿಸಿದ ರುದ್ರೇಶ್ ಗೌಡ 1985ರಲ್ಲಿ ಜನತಾ ಪಕ್ಷದ ಮೂಲಕ ರಾಜಕೀಯ ಪ್ರವೇಶಿಸಿದರು. ಅವರು 1985 ಮತ್ತು 1996 ರ ನಡುವೆ ಹಾಸನ ಜಿಲ್ಲೆಯ ಪಂಚಾಯತ್ ಸದಸ್ಯರಾಗಿದ್ದರು. 1996 ರಲ್ಲಿ ಜನತಾ ಪಕ್ಷದಲ್ಲಿ ಟಿಕೇಟ್ ಪಡೆದು ಲೋಕಸಭೆ ಪ್ರವೇಶಿಸಿದ್ದರು. 

ನಂತರ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರಿ 2008 ಮತ್ತು 2013 ರಲ್ಲಿ ರಾಜ್ಯ ವಿಧಾನಸಭೆಗೆ ಚುನಾಯಿತರಾದರು. ಕಳೆದ ಎರಡು ವರ್ಷಗಳಿಂದ ಅವರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು.

Trending News