ಓಂ ಸಿನಿಮಾ ತರ ರೌಡಿಸಂ ಬಿಡಿಸಿ ಒಳ್ಳೆ ಜೀವನ ನಡೆಸಲು ಮುಂದಾಗಿದ್ದ ಸಿದ್ದಾಪುರ ಮಹೇಶನ ಹೆಂಡತಿ..!

Bengaluru Crime News: ಅಂಡರ್ ವರ್ಲ್ಡ್ ನಲ್ಲಿ ಯಾರು ಶಾಶ್ವತ ಅಲ್ಲಾ ಎಂಬ ಮಾತಿದೆ. ಇಂಟ್ರಸ್ಟಿಂಗ್ ಸಂಗತಿ ಎಂದರೆ ಮೊನ್ನೆ ಬೀದಿ ಹೆಣವಾಗಿರುವ ಸಿದ್ದಾಪುರ ಮಹೇಶನ ಜೀವನವು ಸಿನಿಮಾ ಶೈಲಿಯದ್ದಾಗಿದೆ.

Written by - VISHWANATH HARIHARA | Edited by - Bhavishya Shetty | Last Updated : Aug 6, 2023, 07:14 AM IST
    • ಇನ್ನು ಅಂಡರ್ ವರ್ಲ್ಡ್ ನಲ್ಲಿ ಯಾರು ಶಾಶ್ವತ ಅಲ್ಲಾ ಎಂಬ ಮಾತಿದೆ.
    • ಇಂಟ್ರಸ್ಟಿಂಗ್ ಸಂಗತಿ ಎಂದರೆ ಮೊನ್ನೆ ಬೀದಿ ಹೆಣವಾಗಿರುವ ಸಿದ್ದಾಪುರ ಮಹೇಶನ ಜೀವನವು ಸಿನಿಮಾ ಶೈಲಿಯದ್ದಾಗಿದೆ.‌
    • ಥೇಟ್ ಓಂ ಸಿನಿಮಾದಂತೆ ಮಹೇಶನನ್ನು ಬದಲಾಯಿಸಲು ಆತನ ಹೆಂಡತಿ ಮುಂದಾಗಿದ್ಲು ಎಂಬ ಮಾಹಿತಿ ಇದೆ.
ಓಂ ಸಿನಿಮಾ ತರ ರೌಡಿಸಂ ಬಿಡಿಸಿ ಒಳ್ಳೆ ಜೀವನ ನಡೆಸಲು ಮುಂದಾಗಿದ್ದ ಸಿದ್ದಾಪುರ ಮಹೇಶನ ಹೆಂಡತಿ..! title=
Siddapura Mahesh

ಬೆಂಗಳೂರು: ನೀವೆಲ್ಲಾ ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಓಂ ಸಿನಿಮಾ ನೋಡೇ ಇರ್ತಿರಾ.  ರೌಡಿಯಾಗಿದ್ದ ಸತ್ಯನನ್ನು ನಾಯಕಿ ಬದಲಾಯಿಸಲು ಪಣತೊಟ್ಟು ಸಕ್ಸಸ್ ಆಗಿರ್ತಾಳೆ.  ಸಿನಿಮಾ ಸಹ ಕನ್ನಡ ಚಿತ್ರರಂಗದಲ್ಲಿ ಅಳಿಸಲಾಗದ ದಾಖಲೆಗಳನ್ನು ಬರೆದಿದೆ.

ಇದನ್ನೂ ಓದಿ: 9.10 ಕ್ಕೆ ಜೈಲಿಂದ ರಿಲೀಸ್… 9.30 ಕ್ಕೆ ಮಟ್ಯಾಷ್! ರೌಡಿ ಶೀಟರ್ ಸಿದ್ದಾಪುರ ಮಹೇಶನ ಬರ್ಬರ ಹತ್ಯೆ

ಇನ್ನು ಅಂಡರ್ ವರ್ಲ್ಡ್ ನಲ್ಲಿ ಯಾರು ಶಾಶ್ವತ ಅಲ್ಲಾ ಎಂಬ ಮಾತಿದೆ. ಇಂಟ್ರಸ್ಟಿಂಗ್ ಸಂಗತಿ ಎಂದರೆ ಮೊನ್ನೆ ಬೀದಿ ಹೆಣವಾಗಿರುವ ಸಿದ್ದಾಪುರ ಮಹೇಶನ ಜೀವನವು ಸಿನಿಮಾ ಶೈಲಿಯದ್ದಾಗಿದೆ.‌ ಥೇಟ್ ಓಂ ಸಿನಿಮಾದಂತೆ ಮಹೇಶನನ್ನು ಬದಲಾಯಿಸಲು ಆತನ ಹೆಂಡತಿ ಮುಂದಾಗಿದ್ಲು ಎಂಬ ಮಾಹಿತಿ ಇದೆ.

ಪ್ರೀತಿಗೆ ಅದೆಂತಹ ಶಕ್ತಿ ಇದೆ ಅಂದರೆ ಎಂತಹ ಕಟುಕನದರೂ ಸಹ ಪ್ರೀತಿ ಬಲೆಗೆ ಬಿದ್ದರೆ ಮೃದುವಾಗಿ ಬಿಡುತ್ತಾನೆ. ಅದಕ್ಕೆ ಸಾಕಷ್ಟು ಉದಾಹರಣೆಗಳು ಸಹ ಇವೆ. ಮೊನ್ನೆ ಭೀಕರವಾಗಿ ಕೊಲೆಯಾದ ಸಿದ್ದಾಪುರ ಮಹೇಶನ ಜೀವನದಲ್ಲೂ ಒಂದು ಪ್ರೇಮ್ ಕಹಾನಿ ಇತ್ತು. ಇದೇ ಪ್ರೇಮ ಆತನ ಹತ್ಯೆಗೂ ಕಾರಣ ಆಗಿದೆ ಅಂತಾ ಈಗ ಪಾತಕ ಲೋಕ ಮಾತನಾಡಿಕೊಳ್ಳುತ್ತಿದೆ.

ಮಹೇಶನ 13 ವರ್ಷದ ಪ್ರೇಮ ಕಥೆ ಹ್ಯಾಪಿ ಎಂಡಿಂಗ್ ಬದಲು ಟ್ರ್ಯಾಜಿಡಿ ಎಂಡಿಂಗ್ ಕಂಡಿದೆ. ಸಿದ್ದಾಪುರ ಮಹೇಶ 13 ವರ್ಷದಿಂದ ಒಂದು ಹುಡುಗಿಯನ್ನ ಪ್ರೀತಿಸಿದ್ದ. ಪ್ರೀತಿ ಪ್ರತೀಕವಾಗಿ ಕಳೆದ‌ ಎರಡು ತಿಂಗಳ ಹಿಂದಷ್ಟೇ ಆಕೆಯನ್ನೇ ಮದುವೆಯಾಗಿದ್ದ. ಮಹೇಶನ ಹೆಂಡತಿ ಕೂಡ ನನ್ನ ಗಂಡ ರೌಡಿಸಂ ಬಿಡಬೇಕು ಅಂತಾ ಮಹೇಶನ ಜೊತೆಗಿದ್ದವರ ಕೈಕಾಲು ಹಿಡಿದು ಮಹೇಶನ ಸಹವಾಸಕ್ಕೆ ಬರದಂತೆ ಬೇಡಿಕೊಂಡಿದ್ಲು. ಓಂ ಸಿನಿಮಾದಲ್ಲಿ ಸತ್ಯನನ್ನ ನಾಯಕಿ ಬದಲಿಸಿದಂತೆ‌ ಮಹೇಶನನ್ನು ಬದಲಿಸುವ ಪಣ ತೊಟ್ಟಿದ್ದಳಂತೆ.

ಕಳೆದ ಬಾರಿ ಜೈಲಿನಿಂದ ಮಹೇಶ ಬಂದಾಗ ಆತನ ಸಹಚರರು ಆತನಿಗೆ ಅದ್ದೂರಿ ಸ್ವಾಗತ ಮಾಡಿದ್ದರು. ಆದರೆ ಮಹೇಶನ ಹೆಂಡತಿ ಮನವಿ ಮೇಲೆ ಈ ಬಾರಿ ಮೊನ್ನೆ ರಿಲೀಸ್ ದಿನ ಜೈಲಿನ ಕಡೆ ಯಾರೂ ಎಂಟ್ರಿ ಕೊಟ್ಟಿರಲಿಲ್ಲ. ಕಾರಿನಲ್ಲಿ ಇಬ್ಬರು ವ್ಯಕ್ತಿಗಳು ಇದ್ರೆ, ಟೂ ವೀಲ್ಹರ್ ನಲ್ಲಿ ಮಹೇಶ ಹೆಂಡತಿ ಫಾಲೋ ಮಾಡುತ್ತಿದ್ದಳು. ಮಹೇಶನ ರೌಡಿಸಂ ಬಿಡಿಸಿ ಸುಖ ಸಂಸಾರ ನಡೆಸಬೇಕು ಅಂತಾ ಮುಂದೆ ಗಂಡನನ್ನ ಬಿಟ್ಟು ಹಿಂದೆ ಟೂ ವೀಲ್ಹರ್ ನಲ್ಲಿ ಹೋಗುತ್ತಿದ್ದಳು.

ಇದನ್ನೂ ಓದಿ: ಅಂದು ಗುರು ಲಿಂಗ… ಇಂದು ಶಿಷ್ಯ ಮಹೇಶ…: ಇಬ್ಬರ ಕೊಲೆ ಮಾಡಿದ್ದು ಒಂದೇ ಟೀಮ್..!?

ಆದರೆ ವಿಧಿಯಾಟವೇ ಬೇರೆಯಾಗಿತ್ತು. ಹುಡುಗರ ದಂಡು ಇಲ್ಲದ ಮಹೇಶನ ಸ್ಥಿತಿ ಎದುರಾಳಿ ಪಡೆಗೆ ವರದಾನವಾಗಿತ್ತು. ಮನೆ ಸೇರಿ ಸಂಸಾರ ನೌಕೆ ನಡೆಸಬೇಕು ಎಂದಿಕೊಂಡಿದ್ದ ಮಹೇಶನ ಪತ್ನಿಯ‌ ಕನಸು ‌ಕನಸಾಗಿಯೇ ಉಳಿಯಿತು. ಹಂತಕರು‌ ನಡು ರಸ್ತೆಯಲ್ಲಿ ರಕ್ತದೋಕುಳಿ ಹರಿಸಿ‌ ಮಹೇಶನನ್ನು‌ ಕೊಂದು ಕೆಡವಿದ್ದಾರೆ.‌ ಸದ್ಯ ಮಹೇಶನ ಕೊಲೆ ಕಣ್ಣಾರೆ ಕಂಡಿರುವ ಆತನ ಹೆಂಡತಿ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾಳೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News