ಲೈಂಗಿಕ ದೌರ್ಜನ್ಯ ಎಸಗಿ ಹಿಂಬದಿ ತಲೆ ಜಜ್ಜಿ ಕೊಲೆ..! ಕಾಮುಕರ ಅಟ್ಟಹಾಸಕ್ಕೆ 6 ವರ್ಷದ ಬಾಲಕಿ ಬಲಿ

ರಾಜಧಾನಿಯಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದುಹೋಗಿದೆ.‌ ಏನೂ ಅರಿಯದ ಹೆಣ್ಣುಮಗಳೊಬ್ಬಳು ಕಾಮುಕರ ಅಟ್ಟಹಾಸಕ್ಕೆ ಬಲಿಯಾಗಿದ್ದಾಳೆ. ದುರಂತ ಅಂದ್ರೆ ಶವ ಸಿಕ್ಕಿದ್ದು ರೈಲ್ವೇ ನಿಲ್ದಾಣದಲ್ಲಿ.. ಅದರ ಡಿಟೇಲ್ಸ್ ಇಲ್ಲಿದೆ.

Written by - Krishna N K | Last Updated : Jul 3, 2024, 08:25 PM IST
    • ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದ ಆವರಣದಲ್ಲಿ ಬಾಲಕಿಯ ಮೃತ
    • ಜನನಿಬಿಡ ಪ್ರದೇಶದಲ್ಲಿ ಈ ರೀತಿಯ ದುರ್ಘಟನೆ ನಡೆದಿದೆ.
    • ದುರಂತ ಅಂದ್ರೆ ಆ ಬಾಲಕಿ ಯಾರು ಎಂಬುದು ಇನ್ನೂ ಕೂಡ ತಿಳಿದುಬಂದಿಲ್ಲ
ಲೈಂಗಿಕ ದೌರ್ಜನ್ಯ ಎಸಗಿ ಹಿಂಬದಿ ತಲೆ ಜಜ್ಜಿ ಕೊಲೆ..! ಕಾಮುಕರ ಅಟ್ಟಹಾಸಕ್ಕೆ 6 ವರ್ಷದ ಬಾಲಕಿ ಬಲಿ title=
Bangaluru crime news

ಬೆಂಗಳೂರು : ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದ ಆವರಣದಲ್ಲಿ ಬಾಲಕಿಯ ಮೃತದೇಹ ಸಿಕ್ಕಿತ್ತು. ಜನನಿಬಿಡ ಪ್ರದೇಶದಲ್ಲಿ ಈ ರೀತಿಯ ದುರ್ಘಟನೆ ನಡೆದಿದೆ. ದುರಂತ ಅಂದ್ರೆ ಆ ಬಾಲಕಿ ಯಾರು ಎಂಬುದು ಇನ್ನೂ ಕೂಡ ತಿಳಿದುಬಂದಿಲ್ಲ. ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ ನೋಡಿ..

ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ಅಂದ್ರೆ ಅಲ್ಲಿ ಹಗಲು ರಾತ್ರಿ ಎನ್ನದೆ ಸದಾ ಜನರು ಓಡಾಡ್ತಾನೆ ಇರ್ತಾರೆ. ಇಂತಹ ಜನನಿಬಿಡ ಪ್ರದೇಶದಲ್ಲಿ ಲೈಂಗಿಕ ದೌರ್ಜನ್ಯ, ಕೊಲೆಯಂತಹ ಘಟನೆ ನಡೆದಿದೆ. ಈ ಹಿನ್ನಲೆ ಪೊಲೀಸರು ಸಿಸಿಟಿವಿಗಳ ಪರಿಶೀಲನೆಯಲ್ಲಿ ಕಾರ್ಯನಿರತರಾಗಿದ್ದಾರೆ.

ಇದನ್ನೂ ಓದಿ:ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಆಗಿ ಶಶಿಕುಮಾರ್ ನೇಮಕ

ಕೇವಲ ಆರು ವರ್ಷದ ಬಾಲಕಿ ಆಕೆ. ನೆನ್ನೆ ತಡರಾತ್ರಿ ಲೈಂಗಿಕ ದೌರ್ಜನ್ಯದಂತಹ ಕೃತ್ಯ ನಡೆದಿರುವ ಸಾಧ್ಯತೆ ಇದೆ. ನಂತರ ಎಲ್ಲಿ ಪೊಲೀಸರಿಗೆ ವಿಚಾರ ಮುಟ್ಟಿಸುತ್ತಾಳೊ ಎಂಬ ಕಾರಣಕ್ಕೆ ತಲೆಯ ಹಿಂಭಾಗವನ್ನ ಕಲ್ಲಿಗೆ ಜಜ್ಜಿ ಕೊಂದು ಹಾಕಲಾಗಿದೆ. ಇನ್ನು ಈ ಘಟನೆ ನಡೆದು ಸುಮಾರು ಸಮಯಗಳ ಕಾಲ ಯಾರಿಗೂ ಕೂಡ ಗೊತ್ತಾಗಿರಲಿಲ್ಲ. ನಂತರ ಪಾರ್ಕಿಂಗ್ ಮಾಡಲು ಬಂದಂತಹ ವ್ಯಕ್ತಿಯೊಬ್ಬನಿಂದ ಘಟನೆ ಬೆಳಕಿಗೆ ಬಂದಿದೆ.

ಇನ್ನು ಈ ಘಟನೆ ರೈಲ್ವೆ ನಿಲ್ದಾಣದ ಆವರಣದಲ್ಲಿಯೇ ನಡೆದಿದ್ಯ ಅಥವಾ ಬೇರೆಡೆ ಕೃತ್ಯ ಎಸಗಿ ಇಲ್ಲಿ ತಂದು ಬಿಸಾಕಿದಾರ ಎಂಬುದರ ತನಿಖೆ ನಡೆಯುತ್ತಿದೆ. ಬೇರೆ ಕಡೆ ಕೃತ್ಯ ಎಸಗಿದ್ರೆ ಜನನಿಬಿಡ ಪ್ರದೇಶವಾದ ರೈಲ್ವೆ ನಿಲ್ದಾಣದ ಆವರಣಕ್ಕೆ ಯಾಕೆ ತಂದು ಬಿಸಾಕಿದ್ದಾನೆ. ಹಾಗಾದ್ರೆ ರೈಲ್ವೇ ಆವರಣದಲ್ಲಿಯೇ ಕೃತ್ಯ ಎಸಗಿದ್ರೆ ಆಕೆ ಕೃತ್ಯದ ವೇಳೆ ಕಿರುಚಾಡಲಿಲ್ವಾ  ಕೊಲ್ಲುವ ಸಂಧರ್ಭದಲ್ಲಿ ಕೂಡ ಪ್ರತಿರೋಧಿಸಿಲ್ಲ ಯಾಕೆ ಎಂಬ ಪ್ರಶ್ನೆ ಮೂಡುತ್ತೆ. 

ಇದನ್ನೂ ಓದಿ:ಮೈಸೂರು ಮುಡಾಗೆ ಹೊಸ ಕಾರ್ಯದರ್ಶಿಯಾಗಿ ಪ್ರಸನ್ನ ನೇಮಕ

ಪೊಲೀಸರು ಹೇಳುವ ಪ್ರಕಾರ ಎಲ್ಲಿಂದಲೊ ಕೃತ್ಯ  ಎಸಗಿ ಇಲ್ಲಿ ತಂದು ಬಿಸಾಡಲಾಗಿದೆ ಎಂಬುದು‌. ಸದ್ಯ ಅದೇ ಆಂಗಲ್ ನಲ್ಲಿ ತನಿಖೆ ಮುಂದುವರಿಸಲಾಗುತ್ತಿದೆ. ಇನ್ನು ರೈಲ್ವೇಯ ಸುತ್ತಮುತ್ತ ಅನೇಕ ಪುಂಡಪೋಕರಿಗಳು ನೆಲಸಿದ್ದಾರೆ. ಅದರಲ್ಲೂ ರೈಲ್ವೆ ಹಾಗು ಮೆಜೆಸ್ಟಿಕ್ ನಡುವಿನ ಅಂಡರ್ ಪಾಸ್ ಗಳಲ್ಲಿ ಕಿಡಿಗೇಡಿಗಳ ಹಾವಳಿ ಹೆಚ್ಚಾಗಿದೆ. ಇಂತಹ ಕ್ರಿಮಿನಲ್ ಗಳೆ  ಕೃತ್ಯ ಎಸಗಿರುವ ಸಾಧ್ಯತೆ ಇದೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News