ಸುಂದರ ಹೆಂಡತಿ ಮುಂದಿಟ್ಟುಕೊಂಡು ಉದ್ಯಮಿಗೆ ಹನಿಟ್ರ್ಯಾಪ್‌ : ಗಂಡ ಸೇರಿ 5 ಜನರ ಬಂಧನ

ಮಾಯಾಂಗನೆ ಮಾತಿಗೆ ಮರುಳಾಗಿ ಆರ್ ಆರ್ ನಗರಕ್ಕೆ ಅತಾಉಲ್ಲಾ ಮಂಚದಾಟ ಆಡುತ್ತಿದ್ದಾಗ ಹನಿಟ್ರಾಪ್ ಗ್ಯಾಂಗ್ ಎಂಟ್ರಿ ಕೊಟ್ಟಿದೆ. ಒಬೇದ್ ಖಾನ್ ಎಂಬಾತ ಆರೋಪಿ ಸಭಾ ಮತ್ತು ಅತಾಉಲ್ಲನನ್ನ ತಡೆದು ಸ್ಥಳಕ್ಕೆ ಖಲೀಮ್, ರಕೀಬ್ ಅತೀಕ್ ಎಂಬುವವರನ್ನ ಕರೆಸಿ ಸೀನ್ ಕ್ರಿಯೇಟ್ ಮಾಡಿದ್ದಾರೆ. 

Written by - VISHWANATH HARIHARA | Edited by - Krishna N K | Last Updated : Dec 16, 2023, 01:53 PM IST
  • ಮಂಚದಾಟ ಆಡುತ್ತಿದ್ದಾಗ ಹನಿಟ್ರಾಪ್ ಗ್ಯಾಂಗ್ ಎಂಟ್ರಿ ಕೊಟ್ಟಿದೆ.
  • ರಕೀಬ್ ಅತೀಕ್ ಎಂಬುವವರನ್ನ ಕರೆಸಿ ಸೀನ್ ಕ್ರಿಯೇಟ್ ಮಾಡಿದ್ದಾರೆ.
  • ನಂತರ ಅತಾಉಲ್ಲಾ ಮತ್ತು ಸಭಾ ದೈಹಿಕ ಸಂಪರ್ಕ ಬೆಳೆಸಿದ್ದಾರೆ.
ಸುಂದರ ಹೆಂಡತಿ ಮುಂದಿಟ್ಟುಕೊಂಡು ಉದ್ಯಮಿಗೆ ಹನಿಟ್ರ್ಯಾಪ್‌ : ಗಂಡ ಸೇರಿ 5 ಜನರ ಬಂಧನ title=

ಬೆಂಗಳೂರು: ಹೆಂಡತಿಯನ್ನು ಬೇರೊಬ್ಬರ ಜೊತೆ ಚಕ್ಕಂದವಾಡಲು ಬಿಟ್ಟು ಹನಿಟ್ರ್ಯಾಪ್ ಮಾಡಲು ಯತ್ನಿಸಿದ್ದ ಗಂಡ ಸೇರಿ ಐವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಹೆಂಡತಿ ನೋಡೋಕೆ ಸುಂದರವಾಗಿದ್ದಳು. ಇದನ್ನೆ ಬಂಡವಾಳ ಮಾಡಿಕೊಂಡ ದಂಪತಿ ಮಾಡಿದ್ದ ಖತರ್ನಾಕ್ ಪ್ಲಾನ್ ಮಾಡಿದ್ದರು. ಕಿಲಾಡಿ ಹೆಂಡತಿಯ ಹೆಸರು ಖಲೀಮ್ ಮತ್ತು ಸಭಾ. ಕಳೆದ ಎರಡು ತಿಂಗಳ ಹಿಂದೆ ಈ ಖಲೀಮ್ ಮಹಮ್ಮದ್ ಅತಾಉಲ್ಲಾ ಎಂಬುವವರನ್ನು ಪರಿಚಯ ಮಾಡಿಕೊಂಡು ಫೋನ್ ನಂಬರ್ ಕೂಡ ಪಡೆದುಕೊಂಡಿದ್ದ. 

ಇದನ್ನೂ ಓದಿ:ನಾಳೆ ಯತೀಂದ್ರನಿಗೆ ‘ಟಿಪ್ಪು’ ಎಂದು ಹೆಸರು ಇಟ್ಟರೂ ಅಚ್ಚರಿಯಿಲ್ಲ: ಬಿಜೆಪಿ ಟೀಕೆ

ಇದಾದ ನಂತರ ಕೆಲ ದಿನಗಳ ನಂತರ ಅತಾಉಲ್ಲಾಗೆ ಕರೆ ಮಾಡಿ ಸಭಾಳನ್ನ ವಿಧವೆ ಆಕೆ ಜೊತೆಗೆ ಇರು ಅಂತ ಪರಿಚಯ ಮಾಡಿಕೊಟ್ಟಿದ್ದಾನೆ. ಇದಾದ ನಂತರ ಅತಾಉಲ್ಲಾ ಮತ್ತು ಸಭಾ ದೈಹಿಕ ಸಂಪರ್ಕ ಬೆಳೆಸಿದ್ದಾರೆ. ಎರಡು ಮೂರು ಬಾರಿ ಸೇರಿದ ಮೇಲೆ ಸಭಾ ಒಂದಷ್ಟು ಹಣ ಕೂಡ ಪಡೆದಿದ್ದಾಳೆ. ಕಳೆದ 14ರಂದು ಸಭಾ ಫೋನ್ ಮಾಡಿ ಆರ್ ಆರ್ ನಗರ ಹತ್ತಿರ ಆಧಾರ್ ಕಾರ್ಡ್ ತಗೆದುಕೊಂಡು ಬಾ ರೂಮ್ ಬುಕ್ ಮಾಡಬೇಕು ಎಂದಿದ್ದಾಳೆ.

ಮಾಯಾಂಗನೆ ಮಾತಿಗೆ ಮರುಳಾಗಿ ಆರ್ ಆರ್ ನಗರಕ್ಕೆ ಅತಾಉಲ್ಲಾ ಮಂಚದಾಟ ಆಡುತ್ತಿದ್ದಾಗ ಹನಿಟ್ರಾಪ್ ಗ್ಯಾಂಗ್ ಎಂಟ್ರಿ ಕೊಟ್ಟಿದೆ. ಒಬೇದ್ ಖಾನ್ ಎಂಬಾತ ಆರೋಪಿ ಸಭಾ ಮತ್ತು ಅತಾಉಲ್ಲನನ್ನ ತಡೆದು ಸ್ಥಳಕ್ಕೆ ಖಲೀಮ್, ರಕೀಬ್ ಅತೀಕ್ ಎಂಬುವವರನ್ನ ಕರೆಸಿ ಸೀನ್ ಕ್ರಿಯೇಟ್ ಮಾಡಿದ್ದಾರೆ. ನಿಮ್ಮ ವಿಚಾರ ಮನೆಯವರಿಗೆ ಹೇಳೋದಾಗಿ ಬೆದರಿಸಿ ಜೇಬಿನಲ್ಲಿದ್ದ ನಾಲ್ಕು ಸಾವಿರ ಹಣ ಪಡೆದು ಮತ್ತೆ ಆರು ಲಕ್ಷ ಹಣ ತರುವಂತೆ ಧಮ್ಕಿ ಹಾಕಿದ್ದಾರೆ.

ಇದನ್ನೂ ಓದಿ:ಬೆಳಗಾವಿಯಲ್ಲಿ ಮಹಿಳೆ ಬೆತ್ತಲೆಗೊಳಿಸಿ ಹಲ್ಲೆ: ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಆಕ್ರೋಶ!

ಈ ಹೈಡ್ರಾಮಾ ನಡೆಯುತ್ತಿರುವಾಗಲೇ ಸಿಸಿಬಿ ಅಧಿಕಾರಿಗಳು ಎಂಟ್ರಿ ಕೊಟ್ಟು ರೆಡ್ ಹ್ಯಾಂಡ್ ಆಗಿ ಹನಿಟ್ರಾಪ್ ಗ್ಯಾಂಗ್ ನ ಬಂಧಿಸಿದ್ದಾರೆ. ಖಲೀಮ್ , ಸಭಾ, ಓಬೆದ್ ರಕೀಮ್, ಅತೀಕ್ ಬಂಧಿಸಿ ಘಟನೆ ಸಂಬಂಧ ಆರ್ ಆರ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇನ್ನೂ ಆರೋಪಿಗಳು ಈ ಹಿಂದೆ ಹಲವರಿಗೆ ವಂಚಿಸಿರುವ ಬಗ್ಗೆ ಮಾಹಿತಿಯಿದ್ದು ಈ ಬಗ್ಗೆ ತನಿಖೆ ಮುಂದುವರೆದಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News