ಸುಮಲತಾ ಅವರ ಅನೈತಿಕ ಬೆಂಬಲದಿಂದಲೇ ʼಬಿಜೆಪಿ ಸೋತಿತುʼ..!

ಸಿಎಂ ಇಂಟಲಿಜೆನ್ಸ್ ರಿಪೋರ್ಟ್ ಪ್ರಕಾರ ನನಗೆ 38 ಸಾವಿರ ವೋಟ್ ಬರುತ್ತೆ ಅನ್ನೊ ಮಾಹಿತಿ ಇತ್ತು. ಆದರೆ ಸುಮಲತಾ ಹೇಳಿಕೆ ಬಳಿಕ ಕ್ಷೇತ್ರದಲ್ಲಿ ವಿಚಿತ್ರ ಬದಲಾವಣೆ ನೋಡಿದೆ ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಡಾ. ಇಂದ್ರೇಶ್‌ ಸಂಸದೆ ಸುಮಲತಾ ವಿರುದ್ಧ ಗುಡುಗಿದ್ದಾರೆ. 

Written by - Krishna N K | Last Updated : May 23, 2023, 04:10 PM IST
  • ಸಂಸದೆ ಸುಮಲತಾ ಅವರ ಅನೈತಿಕ ಬೆಂಬಲದಿಂದಲೇ ಬಿಜೆಪಿಗೆ ಮತಗಳು ಕಡಿಮೆಯಾದವು.
  • ಸುಮಾಲತಾ ಹೇಳಿಕೆ ಬಳಿಕ ಕ್ಷೇತ್ರದಲ್ಲಿ ವಿಚಿತ್ರ ಬದಲಾವಣೆ ನೋಡಿದೆ.ಸಂಸದೆ ಸುಮಲತಾ ವಿರುದ್ಧ
  • ಗುಡುಗಿದ ಬಿಜೆಪಿ ಪರಾಜಿತ ಅಭ್ಯರ್ಥಿ ಡಾ. ಇಂದ್ರೇಶ್‌.
ಸುಮಲತಾ ಅವರ ಅನೈತಿಕ ಬೆಂಬಲದಿಂದಲೇ ʼಬಿಜೆಪಿ ಸೋತಿತುʼ..! title=

ಮಂಡ್ಯ : ಸಂಸದೆ ಸುಮಲತಾ ಅವರ ಅನೈತಿಕ ಬೆಂಬಲದಿಂದಲೇ ಬಿಜೆಪಿಗೆ ಮತಗಳು ಕಡಿಮೆಯಾದವು ಎಂದು ಮೇಲುಕೋಟೆ ಬಿಜೆಪಿ ಪರಾಜಿತ ಅಭ್ಯರ್ಥಿ ಡಾ.ಇಂದ್ರೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಜೆಡಿಎಸ್ ವಿರುದ್ದ ಸೇಡು ತೀರಿಸಿಕೊಳ್ಳಲು ಹೋಗಿ ಸಂಸದೆ ಎಡವಟ್ಟು ಮಾಡ್ಕೊಂಡ್ರ ಎನ್ನುವ ಅನುಮಾನ ಕಾಡುತ್ತಿದೆ.

ಹೌದು.. ಸಂಸದೆ ಸುಮಾಲತಾ ವಿರುದ್ದ ಬಿಜೆಪಿ ಪರಾಜಿತ ಅಭ್ಯರ್ಥಿ ಡಾ.ಇಂದ್ರೇಶ್ ಗಂಭೀರ ಆರೋಪ ಮಾಡಿದ್ದಾರೆ. ಸಿಎಂ ಇಂಟಲಿಜೆನ್ಸ್ ರಿಪೋರ್ಟ್ ಪ್ರಕಾರ ನನಗೆ 38 ಸಾವಿರ ವೋಟ್ ಬರುತ್ತೆ ಅನ್ನೊ ಮಾಹಿತಿ ಇತ್ತು. ಆದರೆ ಸುಮಲತಾ ಹೇಳಿಕೆ ಬಳಿಕ ಕ್ಷೇತ್ರದಲ್ಲಿ ವಿಚಿತ್ರ ಬದಲಾವಣೆ ನೋಡಿದೆ. ಎಲ್ಲಿ ಪುಟ್ಟರಾಜು ಮತ್ತೆ ಗೆಲ್ತಾರೋ, ಎಲ್ಲಿ ಮತ್ತೇ ಜೆಡಿಎಸ್‌ ಗೆಲ್ಲುತ್ತೋ ಎನ್ನುವ ಭಯದಿಂದ ವೋಟ್‌ನ ಪ್ರಮಾಣ ನನಗೆ ಕಡಿಮೆ ಮಾಡಿಸಿದ್ದಾರೆ ಎಂದು ದೂರಿದ್ದಾರೆ.

ಇದನ್ನೂ ಓದಿ: ರಾಜ್ಯದ ನೂತನ ಸ್ಪೀಕರ್ ಆಗಿ ಯುಟಿ ಖಾದರ್ ಆಯ್ಕೆ

ಅಲ್ಲದೆ, ನನ್ನ ಬಳಿಯೇ ಬಂದು ನೀವು ಮಾಡ್ತಿರೋ ಒಳ್ಳೆಯ ಕೆಲಸಕ್ಕೆ ವೋಟ್ ಹಾಕಲು ಆಗ್ತಿಲ್ಲ. ಇದೊಂದು ಸಾರಿ ದಯಮಾಡಿ ಕ್ಷಮಿಸಿ, ನೆಕ್ಸ್ಟ್ ನಿಮಗೆ ವೋಟ್ ಹಾಕ್ತೇವೆ. ಈ ಬಾರಿ ದರ್ಶನ್ ಪುಟ್ಟಣ್ಣಯ್ಯಗೆ ಮತ ಹಾಕ್ತೇವೆ.. ದಯಮಾಡಿ ಕ್ಷಮಿಸಿ ಅಂತ ನನಗೆ ಜನ ಡೈರೆಕ್ಟಾಗಿ ಹೇಳಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಬೆಂಬಲ ಅಂತ ಹೇಳಿ ಈ ರೀತಿ ಮಾಡಿದ್ದಾರೆ ಎಂದು ಇಂದ್ರೇಶ್‌ ಸಂಸದೆಯ ವಿರುದ್ಧ ಗುಡುಗಿದ್ದಾರೆ.

ಅಲ್ಲದೆ, ಮುಂದಿನ ದಿನಗಳಲ್ಲಿ ಪಕ್ಷದ ವೇದಿಕೆಯಲ್ಲಿ ಈ ಕುರಿತು ಚರ್ಚೆ ಮಾಡ್ತೇನೆ. ಸುಮಲತಾ ಮಾಡಿದ ಕೆಲಸವನ್ನ ನಮ್ಮ ಕಾರ್ಯಕರ್ತರು ಕೂಡ ಒಪ್ಪಲ್ಲ, ನಾನು ಕೂಡ ಒಪ್ಪಲ್ಲ. ಅವರು ಋಣ ತೀರಿಸುವ ಕೆಲಸ ಮಾಡೋದಾಗಿದ್ರೆ ಒಂದು ಪಕ್ಷಕ್ಕೆ ಬಂದ ಮೇಲೆ ಇನ್ನೊಂದು ಪಕ್ಷಕ್ಕೆ ಹೇಳಿಕೆ ಕೊಡೋದು ಖಂಡಿತ ತಪ್ಪು. ಇದನ್ನ ನಾನು ಖಂಡಿಸುತ್ತೇನೆ. ದರ್ಶನ್ ಪುಟ್ಟಣ್ಣಯ್ಯ ಗೆಲ್ಲಬೇಕು ಅಂತ ಸಂಸದೆ ಸುಮಾಲತಾ ಹೇಳಿಕೆ ಕೊಟ್ಟಿದ್ದರು ಎಂದು ಪಾಂಡವಪುರದಲ್ಲಿ ಡಾ.ಇಂದ್ರೇಶ್ ಹೇಳಿಕೆ ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News