ಸಿಎಂ ಬಿಎಸ್‌ವೈ ಅವರಿಗೆ ಮಾಜಿ ಸಚಿವ ಡಿಕೆಶಿ ಮಾಡಿದ ಮನವಿ ಏನು?

ನೀವು ಅಧಿಕಾರಕ್ಕೆ ಬರಲು ಸಹಕರಿಸಿದ ಅನರ್ಹ ಶಾಸಕರನ್ನು ತಬ್ಬಲಿ ಮಾಡಬೇಡಿ- ವಿಧಾನಸೌಧದಲ್ಲಿ ಮಾಜಿ ಸಚಿವ ಡಿ.ಕೆ. ಶಿವಕುಮಾರ್.

Last Updated : Jul 29, 2019, 01:49 PM IST
ಸಿಎಂ ಬಿಎಸ್‌ವೈ ಅವರಿಗೆ ಮಾಜಿ ಸಚಿವ ಡಿಕೆಶಿ ಮಾಡಿದ ಮನವಿ ಏನು? title=
File Image(Pic:ANI)

ಬೆಂಗಳೂರು: ನೀವು ಅಧಿಕಾರಕ್ಕೆ ಬರಲು ಸಹಕರಿಸಿದ ಅನರ್ಹ ಶಾಸಕರನ್ನು ತಬ್ಬಲಿ ಮಾಡಬೇಡಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ.

ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಡಿ.ಕೆ. ಶಿವಕುಮಾರ್, ನೀವು ಅಧಿಕಾರಕ್ಕೆ ಬರಲು ಸಹಕರಿಸಿದ ಅನರ್ಹ ಶಾಸಕರನ್ನು ತಬ್ಬಲಿ ಮಾಡಬೇಡಿ. ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಅವರನ್ನು ಕೈಬಿಡಬೇಡಿ. ಅವರಿಗೆಲ್ಲಾ ಏನೇನು ಕೊಡುತ್ತೇನೆ ಎಂದು ಹೇಳಿದ್ದೀರೋ ಅದೆಲ್ಲವನ್ನೂ ಕೊಡಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಿದರು.

ಅನರ್ಹ ಶಾಸಕರು ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತೇವೆ ಅಂದಿದ್ದಾರೆ. ಆದಷ್ಟು ಬೇಗ ಯಡಿಯೂರಪ್ಪನವರು ಅವರ ಆಸೆ ಈಡೇರಿಸಲಿ. ಮಂತ್ರಿ ಮಾಡುತ್ತಿರೋ, ಏನು ಮಾಡುತ್ತೀರೋ ನೀವೇ ನೋಡಿ. 'ವಿಪ್'ಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಅಂತಿದ್ರಿ. ಅವರಿಗೆ ನಿಮ್ಮೊಂದಿಗೆ ಪ್ರತಿಜ್ಞಾವಿಧಿ ಭೋದಿಸಿ ಎಂದು ತಿಳಿಸಿದರು.

ಈ ವೇಳೆ ಜೆಡಿಎಸ್ ಜೊತೆಗೆ ಕಾಂಗ್ರೆಸ್ ಮೈತ್ರಿ ಮುಂದುವರಿಗೆ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಇರಬೇಕೋ ಬೇಡವೋ ಅನ್ನೋದನ್ನ  ನಮ್ಮ ಪಕ್ಷದ ಹೈಕಮಾಂಡ್ ನಿರ್ಧರಿಸುತ್ತೆ ಎಂದು ಹೇಳಿದರು.

Trending News