ಬಿಜೆಪಿ ಕಾರ್ಯಕಾರಣಿ: ಶಾಸಕ ಮಹೇಶ್ ಗೆಲುವಿನ ನಗೆಗೆ ಸಚಿವ ಸೋಮಣ್ಣ ಟಾಂಗ್!

ಶಾಸಕ ಎನ್.ಮಹೇಶ್ ಅವರಿಗೆ ವೇದಿಕೆಯಲ್ಲಿಯೇ ಸಚಿವ ಸೋಮಣ್ಣ ಟಾಂಗ್ ನೀಡಿದ್ದಾರೆ.  

Written by - Ranjitha R K | Last Updated : Nov 15, 2022, 02:48 PM IST
  • ಶಾಸಕ ಎನ್.ಮಹೇಶ್ ಗೆ ಸೋಮಣ್ಣ ಟಾಂಗ್
  • ವೇದಿಕೆಯಲ್ಲಿಯೇ ಶಾಸಕರಿಗೆ ಟಾಂಗ್ ನೀಡಿದ ಸಚಿವ
  • ಎಷ್ಟು ಬೈ ಎಲೆಕ್ಷನ್ ಆದರೂ ಗೆಲ್ಲಬಹುದು ಎಂದ ಸೋಮಣ್ಣ
ಬಿಜೆಪಿ ಕಾರ್ಯಕಾರಣಿ: ಶಾಸಕ ಮಹೇಶ್ ಗೆಲುವಿನ ನಗೆಗೆ ಸಚಿವ ಸೋಮಣ್ಣ ಟಾಂಗ್! title=
Bjp parogramme in chamarajanagara

ಚಾಮರಾಜನಗರ : ಎಷ್ಟು ಬೈ ಎಲೆಕ್ಷನ್ ಆದರೂ ಗೆಲ್ಲಬಹುದು. ಆದರೆ  ಮುಖ್ಯ ಚುನಾವಣೆ ಹಾಗಲ್ಲ ಎಂದು ಸಚಿವ ಸೋಮಣ್ಣ ಪರೋಕ್ಷವಾಗಿ ಶಾಸಕ ಎನ್.ಮಹೇಶ್ ಅವರಿಗೆ ಟಾಂಗ್ ನೀಡಿದ್ದಾರೆ. 

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಜಿಲ್ಲಾ ಕಾರ್ಯಕಾರಿಣಿ ಉದ್ಘಾಟಿಸಿ ಮಾತನಾಡಿದ ಅವರು, ಕೊಳ್ಳೇಗಾಲ ನಗರಸಭೆ ಉಪ ಚುನಾವಣೆಯಲ್ಲಿ 7 ರಲ್ಲಿ 6 ಗೆದ್ದೆವು ಎಂದು ಹೇಳುತ್ತಿದ್ದರು. ಆದರೆ ವಿಧಾನಸಭಾ ಚುನಾವಣೆ ಗೆಲ್ಲುವುದು ಸುಲಭವಲ್ಲ ಎಂದು ಶಾಸಕ ಎನ್. ಮಹೇಶ್ ಅವರಿಗೆ ವೇದಿಕೆಯಲ್ಲೇ ಠಕ್ಕರ್ ಕೊಟ್ಟಿದ್ದಾರೆ.‌

ಇದನ್ನೂ ಓದಿ : ಬಾಯಿ ಸುಡಲಿದೆ ಟೀ, ಕಾಫಿ ! ದರ ಏರಿಕೆ ಬಹುತೇಕ ಫಿಕ್ಸ್.!

ಕಳೆದ ಲೋಕಸಭಾ ಚುನಾವಣೆಯಲ್ಲಿ ವಿ.ಶ್ರೀನಿವಾಸಪ್ರಸಾದ್ ಅವರು ಸ್ಪರ್ಧಾಳು ಆಗದಿದ್ದರೇ ವಾತಾವರಣ ಬೇರೆಯೇ ಆಗಿರುತ್ತಿತ್ತು. ಪ್ರಸಾದ್ ಅವರು ಸಂಸದರಾದ ಬಳಿಕ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರದಲ್ಲೂ ಬಿಜೆಪಿ ಚೇತರಿಸಿಕೊಂಡಿದೆ.ಅವರ ಅನುಭವ ಆಧಾರದಲ್ಲಿ ಈ ಬಾರಿ ಚುನಾವಣೆ ಎದುರಿಸಿ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲೂ ಗೆಲ್ಲೋಣ ಯಾವುದೇ ಗೊಂದಲ ಮಾಡಿಕೊಳ್ಳುವುದು ಬೇಡ ಎಂದರು.

ಸಂಸದ ವಿ.ಶ್ರೀನಿವಾಸಪ್ರಸಾದ್, ಶಾಸಕರಾದ ಎನ್.ಮಹೇಶ್, ನಿರಂಜನಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಸುಂದರ್, ಮುಖಂಡರುಗಳಾದ ರಾಮಚಂದ್ರು ಕಾರ್ಯಕಾರಣಿಯಲ್ಲಿ ಭಾಗಿಯಾಗಿದ್ದಾರೆ.

ಇದನ್ನೂ ಓದಿ :  Yadagiri: ಆನೆ ಕಾಲು ಮಾತ್ರೆ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥ, ಆಸ್ಪತ್ರೆಗೆ ದಾಖಲು

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News