ನಾನು ವಿಷಕಂಠನಾಗಿ ಸರ್ಕಾರದ ನೋವನ್ನು ನುಂಗುತ್ತಿದ್ದೇನೆ- ಮುಖ್ಯಮಂತ್ರಿ ಕುಮಾರಸ್ವಾಮಿ

   

Last Updated : Jul 15, 2018, 11:11 AM IST
ನಾನು ವಿಷಕಂಠನಾಗಿ ಸರ್ಕಾರದ ನೋವನ್ನು ನುಂಗುತ್ತಿದ್ದೇನೆ- ಮುಖ್ಯಮಂತ್ರಿ ಕುಮಾರಸ್ವಾಮಿ  title=
Photo courtesy: ANI

ಬೆಂಗಳೂರು: ನಗರದ  ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ಮುಖ್ಯಮಂತ್ರಿ ಕುಮಾರಸ್ವಾಮಿ ವಿಷಕಂಠನಾಗಿ  ಈ ಸರ್ಕಾರದ ನೋವನ್ನು ನುಂಗುತ್ತಿದ್ದೇನೆ ಎಂದು ಕಣ್ಣೀರಿಟ್ಟ ಘಟನೆ ನಡೆದಿದೆ.

ಕಾರ್ಯಕ್ರಮದಲ್ಲಿ ಮಾತನಾಡುತ್ತಾ" ನೀವು ನಿಮ್ಮ ಅಣ್ಣಾ ಅಥವಾ ತಮ್ಮನೋ ಮುಖ್ಯಮಂತ್ರಿಯಾಗಿರುವುನೆಂದು ಸಂತಸದಿಂದರಬಹುದು ಆದರೆ ನಾನಲ್ಲ.ನಂಗೆ ಈ ಸಮಿಶ್ರ ಸರ್ಕಾರದ ನೋವೇನು ಎನ್ನುವುದು ಗೊತ್ತಿದೆ.ನಾನು ಒಂದು ರೀತಿಯಲ್ಲಿ ವಿಷಕಂಠನಾಗಿ ಈ ಸರ್ಕಾರದ  ನೋವನ್ನು ನಾನು ನುಂಗುತ್ತಿದ್ದೇನೆ ಎಂದು ತಿಳಿಸಿದರು.

ಇತ್ತೀಚಿಗೆ ರಾಜ್ಯ ಬಜೆಟ್ ಮಂಡನೆಯಾದಂತಹ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಹಲವಾರು ಕಾಂಗ್ರೆಸ್ ಶಾಸಕರು ಕುಮಾರಸ್ವಾಮಿಯವರ ಬಜೆಟ್ ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.ಅಲ್ಲದೆ ಮುಖ್ಯಮಂತ್ರಿಗಳು ಕೇವಲ ಮೈಸೂರು ಭಾಗದ ಜಿಲ್ಲೆಗಳಿಗೆ ಹೆಚ್ಚಿನ ಪ್ರಾಧ್ಯಾನ್ಯತೆ ನೀಡಿದ್ದಾರೆ ಎಂದು ದೂರಿದ್ದರು. ಈ ಹಿಂದೆ ಕುಮಾರಸ್ವಾಮಿ ತಾವು ಸಾಂದರ್ಭಿಕ ಶಿಶು, ಕಾಂಗ್ರೆಸ್ ಪಕ್ಷದ  ಮರ್ಜಿಯಲ್ಲಿ ಇದ್ದೇನೆ ಎಂದು ತಿಳಿಸಿದ್ದರು.
 

Trending News