ನ್ಯಾಯಾಧಿಕರಣ ತೀರ್ಪು ಸಮಾಧಾನ ತಂದಿದೆ: ಬಿ.ಎಸ್. ಯಡಿಯೂರಪ್ಪ

ಮಹದಾಯಿ ತೀರ್ಪು ಸ್ವಾಗತಾರ್ಹ.

Last Updated : Aug 14, 2018, 06:32 PM IST
ನ್ಯಾಯಾಧಿಕರಣ ತೀರ್ಪು ಸಮಾಧಾನ ತಂದಿದೆ: ಬಿ.ಎಸ್. ಯಡಿಯೂರಪ್ಪ title=
File Pic

ಹುಬ್ಬಳ್ಳಿ: ಮಹದಾಯಿ ನ್ಯಾಯಾಧಿಕರಣ ಐತಿಹಾಸಿಕ ತೀರ್ಪು ನೀಡಿದ್ದು, ನ್ಯಾಯಾಧಿಕರಣ ತೀರ್ಪು ಸಮಾಧಾನ ತಂದಿದೆ. ಇದು ರೈತರಿಗೆ ಸಿಕ್ಕ ಜಯ ಎಂದು ವಿರೋಧ ಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು ಯಡಿಯೂರಪ್ಪ, ನ್ಯಾಯಾಧಿಕರಣ ತೀರ್ಪಿನಿಂದ ರೈತರಿಗೆ ನ್ಯಾಯ ಸಿಕ್ಕಿದೆ. ಇದು ರೈತ ಹೋರಾಟಕ್ಕೆ ಸಿಕ್ಕ ಜಯ ಎಂದಿದ್ದಾರೆ.

ನ್ಯಾಯಾಧಿಕರಣ ಕುಡಿಯಲು ನೀರು ಕೊಟ್ಟಿರುವುದು ಸಮಾಧಾನ ತಂದಿದೆ. ನೀರಿನ ಸದುಪಯೋಗಕ್ಕೆ ರಾಜ್ಯ ಸರ್ಕಾರ ಮುಂದಾಗಬೇಕು. ರಾಜ್ಯ ಸರ್ಕಾರ ಯೋಜನೆ ಜಾರಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಸರ್ಕಾರದ ತೀರ್ಮಾನಕ್ಕೆ ನಮ್ಮ ಸಹಕಾರವಿರುತ್ತದೆ ಎಂದು ಬಿಎಸ್ವೈ ಹೇಳಿದ್ದಾರೆ.

Trending News