ಪ್ರತಾಪ್ ಸಿಂಹ ಹೇಳಿಕೆಗೆ ‘ತಿರುಗೇಟು’ ನೀಡಿದ ಸುಮಲತಾ: ಏನಂತ ಗೊತ್ತಾ?

‘ಪೇಟೆ ರೌಡಿ ಥರ ಮಾತಾಡಿದವರಿಗೆ ನಾನು ಉತ್ತರ ಕೊಡಲ್ಲ’

Last Updated : Nov 16, 2020, 07:09 PM IST
  • ‘ಪೇಟೆ ರೌಡಿ ಥರ ಮಾತಾಡಿದವರಿಗೆ ನಾನು ಉತ್ತರ ಕೊಡಲ್ಲ’
  • ಪ್ರತಾಪ್ ಸಿಂಹ ಹೇಳಿಕೆಗೆ ಸಂಸದೆ ಸುಮಲತಾ ತಿರುಗೇಟು
  • ಅಂಬರೀಶ್ ಇರುವವರೆಗೂ ಯಾರಿಗೂ ಮಾತನಾಡುವ ಧೈರ್ಯ ಇರಲಿಲ್ಲ.. ಅವರು ಹೋದ ಬಳಿಕ ಇಂತಹ ಹೇಳಿಕೆಗಳನ್ನ ಕೊಡ್ತಿದ್ದಾರೆ
ಪ್ರತಾಪ್ ಸಿಂಹ ಹೇಳಿಕೆಗೆ ‘ತಿರುಗೇಟು’ ನೀಡಿದ ಸುಮಲತಾ: ಏನಂತ ಗೊತ್ತಾ? title=

ಬೆಂಗಳೂರು: ಸಂಸದರ ರೀತಿಯಲ್ಲಿ ಪ್ರತಾಪ್ ಸಿಂಹ ಮಾತಾಡಿಲ್ಲ. ಪ್ರತಾಪ್ ಸಿಂಹ ಮಾತಾಡಿರೋದು ಒಬ್ಬ ಪೇಟೆ ರೌಡ್ ಥರ. ಸಂಸದರಾಗಿ ಮಾತಾಡಿದ್ದಿದ್ರೆ ನಾನು ಅವರಿಗೆ ಉತ್ತರ ಕೊಡ್ತಿದ್ದೆ. ಪೇಟೆ ರೌಡಿ ಥರ ಮಾತಾಡಿದವರಿಗೆ ನಾನು ಉತ್ತರ ಕೊಡಲ್ಲ ಎಂದು 'ಸುಮಲತಾ ಮಂಡ್ಯದಲ್ಲಿ ಕೆಲಸ ಮಾಡ್ತಿಲ್ಲ' ಎಂಬ ಪ್ರತಾಪ್ ಸಿಂಹ ಹೇಳಿಕೆಗೆ ಸಂಸದೆ ಸುಮಲತಾ ತಿರುಗೇಟು ನೀಡಿದ್ದಾರೆ.

ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸುಮಲತಾ(Sumalatha), ಪ್ರತಾಪ್ ಸಿಂಹಗೆ ನನ್ನ ಬಗ್ಗೆ ಮಾತಾಡಲು ಅರ್ಹತೆ, ಹಕ್ಕಿಲ್ಲ,ಮೈಸೂರಲ್ಲೇ ಸಾಕಷ್ಟು ಕೆಲಸ ಮಾಡಿಲ್ಲ ಅವ್ರು. ಪ್ರತಾಪ್ ಸಿಂಹ ಸಂಸದರ ಭಾಷೆ ಬಳಸಿಲ್ಲ. ಅವರು ಎರಡು ಸಲ ಸಂಸದರಾಗಿರೋರು ಪ್ರತಾಪ್ ಸಿಂಹ ಜವಾಬ್ದಾರಿ ಅರಿತು ಮಾತಾಡಲಿ. ನಾನು ಇಂತಹ ಹೇಳಿಕೆಗಳನ್ನ ಚುನಾವಣಾ ಸಮಯದಲ್ಲಿ ಎದುರಿಸಿದ್ದೇನೆ. ಅಂಬರೀಶ್ ಇರುವವರೆಗೂ ಯಾರಿಗೂ ಮಾತನಾಡುವ ಧೈರ್ಯ ಇರಲಿಲ್ಲ.. ಅವರು ಹೋದ ಬಳಿಕ ಇಂತಹ ಹೇಳಿಕೆಗಳನ್ನ ಕೊಡ್ತಿದ್ದಾರೆ ಎಂದು ಸುಮಲತಾ ಕಿಡಿಕಾರಿದ್ದಾರೆ.

ಸಂಪುಟ ವಿಸ್ತರಣೆಯೋ - ಪುನರ್ ರಚನೆಯೋ: ಬುಧವಾರ ದೆಹಲಿಗೆ ಸಿಎಂ

ಒಬ್ಬ ಸಂಸದರು ಬಂದಾಗ ಸ್ವತಃ ಜನ ಹೇಳ್ತಾರೆ.. ಕೆ.ಆರ್ ಪೇಟೆ ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಬರುತ್ತೆ. ಮಂಡ್ಯಗೆ ಹೋದಾಗ ನನ್ನ ಬಳಿಯೂ ಜನ ಬಂದು ಹೇಳ್ತಾರೆ. ಇದು ಸರ್ವೇ ಸಾಮಾನ್ಯ ಇದನ್ನ ರೀತಿ ಪ್ರಚಾರ ಮಾಡುವುದು ಸರಿಯಲ್ಲ. ನನಗೂ ಅಲ್ಲಿಯ ಜನ ರಸ್ತೆ ಸರಿಯಿಲ್ಲ..ಚರಂಡಿ ಇಲ್ಲ ಅಂತ ಹೇಳಿದ್ದಾರೆ.. ಆದ್ರೆ ನಾನು ಸಂಸದರ ಬಗ್ಗೆ ಎಂದೂ ಮಾತನಾಡಿಲ್ಲ.. ಜನ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಉತ್ತರ ಕೊಡ್ತಿದ್ದಾರೆ. ಇದನ್ನ ಅರ್ಥ ಮಾಡಿಕೊಂಡು ಪ್ರತಾಪ ಸಿಂಹ ಹೇಳಿಕೆ ಕೊಡ್ಲಿ ಎಂದು ಸಂಸದೆ ಸುಮಲತಾ ಅವ್ರು ಪ್ರತಾಪ ಸಿಂಹಗೆ ತಿರುಗೇಟು ನೀಡಿದ್ದಾರೆ.

ಡಿಸಿಎಂ ಯಿಂದ ಸಿಎಂಗೆ ಶುರುವಾಯ್ತು ಹೊಸ ತಲೆನೋವು!

ಇತ್ತೀಚೆಗೆ ಪ್ರತಾಪ್ ಸಿಂಹ ಫೋನ್ ನಲ್ಲಿ ಮಾತನಡುತ್ತ 'ಸುಮಲತಾ ಮಂಡ್ಯದಲ್ಲಿ ಕೆಲಸ ಮಾಡ್ತಿಲ್ಲ' ಎಂಬ ಹೇಳಿಕೆಯ ಆಡಿಯೋ ಮತ್ತು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್  ಆಗಿತ್ತು. ಇದಕ್ಕೆ ಇಂದು ಸಂಸದೆ ಸುಮಲತಾ ಪ್ರತಾಪ್ ಸಿಂಹಗೆ ತಿರುಗುತ್ತರ ನೀಡಿದ್ದಾರೆ.

ರಾಜ್ಯ ಬಿಜೆಪಿಗೆ 'ಸ್ಟಾರ್‌' ಬಲ: 'ರಾಜ್ಯಸಭಾ ಅಖಾಡ'ಕ್ಕಿಳಿಯಲಿದ್ದರಾ ತಲೈವಾ..!?

Trending News