ಪಕ್ಷೇತರ ಶಾಸಕರು ಬಿಜೆಪಿ ಸೇರಿದರೆ ನಮಗೆ ತೊಂದರೆಯಿಲ್ಲ: ಡಿಸಿಎಂ ಜಿ.ಪರಮೇಶ್ವರ್

ಪಕ್ಷೇತರ ಶಾಸಕರಾದ ಆರ್​​.ಶಂಕರ್ ಹಾಗೂ ಹೆಚ್​.ನಾಗೇಶ್​ ಸಮ್ಮಿಶ್ರ ಸರ್ಕಾರದಿಂದ ಬೆಂಬಲ ಹಿಂಪಡೆದಿರುವುದಕ್ಕೆ ಕಾರಣ ಏನು ಎಂಬುದು ನಮಗೆ ಗೊತ್ತಿಲ್ಲ ಎಂದು ಪರಮೇಶ್ವರ್ ಹೇಳಿದ್ದಾರೆ.   

Last Updated : Jan 15, 2019, 06:22 PM IST
ಪಕ್ಷೇತರ ಶಾಸಕರು ಬಿಜೆಪಿ ಸೇರಿದರೆ ನಮಗೆ ತೊಂದರೆಯಿಲ್ಲ: ಡಿಸಿಎಂ ಜಿ.ಪರಮೇಶ್ವರ್ title=

ಬೆಂಗಳೂರು: ಪಕ್ಷೇತರ ಶಾಸಕರು ಬಿಜೆಪಿಗೆ ಬೆಂಬಲ ಕೊಟ್ಟಿರುವ ಬಗ್ಗೆ ನಮಗೇನೂ ಅಭ್ಯಂತರವಿಲ್ಲ ಎಂದು ಡಿಸಿಎಂ ಜಿ.ಪರಮೇಶ್ವರ್ ಹೇಳಿದ್ದಾರೆ. 

ಇಬ್ಬರು ಪಕ್ಷೇತರ ಶಾಸಕರು ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ನೀಡದಿರುವ ಬಗ್ಗೆ ರಾಜ್ಯಪಾಲರಿಗೆ ಪತ್ರ ರವಾನಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷೇತರ ಶಾಸಕರಾದ ಆರ್​​.ಶಂಕರ್ ಹಾಗೂ ಹೆಚ್​.ನಾಗೇಶ್​ ಸಮ್ಮಿಶ್ರ ಸರ್ಕಾರದಿಂದ ಬೆಂಬಲ ಹಿಂಪಡೆದಿರುವುದಕ್ಕೆ ಕಾರಣ ಏನು ಎಂಬುದು ನಮಗೆ ಗೊತ್ತಿಲ್ಲ ಎಂದು ಪರಮೇಶ್ವರ್ ಹೇಳಿದ್ದಾರೆ. 

ಮುಂದುವರೆದು ಮಾತಂಡಿದ ಅವರು, ಬಿಜೆಪಿಯವರು ಅಧಿಕಾರದ ಆಸೆ, ಆಮಿಷವೊಡ್ಡಿ ಸರ್ಕಾರವನ್ನು ಬಿಳಿಸಲು ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತಿದ್ದಾರೆ. ಈ ವಿಚಾರ ಇಡೀ ದೇಶಕ್ಕೇ ಗೊತ್ತಿದೆ. ನಮ್ಮ ಸರ್ಕಾರ ಯಾವುದೇ ಕಾರಣಕ್ಕೆ ಅಸ್ಥಿರ ಆಗೋದಿಲ್ಲ, ಪ್ರಜಾಪ್ರಭುತ್ವದಲ್ಲಿ ಕಾನೂನಿಗೆ ಬೆಲೆ ಎಂದು ಹೇಳಿದರು.

Trending News