ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮುಂದುವರೆದ ಆಪರೇಷನ್ ಜೆಡಿಎಸ್

ಸಿಎಂ ಒಕ್ಕಲಿಗ ತಂತ್ರಕ್ಕೆ, ಹಿಂದುಳಿದ ವರ್ಗದ ಪ್ರತಿತಂತ್ರ ಹೂಡಿದ್ರಾ ಜಿಟಿಡಿ!

Last Updated : Apr 6, 2018, 11:05 AM IST
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮುಂದುವರೆದ ಆಪರೇಷನ್ ಜೆಡಿಎಸ್ title=

ಮೈಸೂರು: ಕರ್ನಾಟಕದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲಿ, ಚಾಮುಂಡೇಶ್ವರಿ ಕ್ಷೇತ್ರವು ಈ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಅಷ್ಟೇ ಅಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಘೋಷಿಸಿದ ನಂತರ ಶತಾಯ ಗತಾಯ ಸಿದ್ದರಾಮಯ್ಯ ಅವರನ್ನು ಸೋಲಿಸಲು ಪ್ರತಿಪಕ್ಷಗಳು ಹವಣಿಸುತ್ತಿವೆ. ಬಿಜೆಪಿ- ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿವೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ಎಲ್ಲದರ ನಡುವೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಜಿ.ಟಿ. ದೇವೇಗೌಡರ ಆಪರೇಷನ್ ಜೆಡಿಎಸ್ ಮುಂದುವರೆದಿದೆ.

ಇತ್ತೀಚೆಗಷ್ಟೇ 25ಕ್ಕೂ ಹೆಚ್ಚು ಕಾಂಗ್ರೆಸ್ ನಾಯಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದ ಜೆಡಿಎಸ್ ಇದೀಗ ಹಿಂದುಳಿದ ವರ್ಗದವರ ಮತಗಳನ್ನು ಸೆಳೆಯಲು ತಂತ್ರ ರೂಪಿಸುತ್ತಿದೆ.

ಸಿಎಂ ಒಕ್ಕಲಿಗ ತಂತ್ರಕ್ಕೆ, ಹಿಂದುಳಿದ ವರ್ಗದ ಪ್ರತಿತಂತ್ರ ಹೂಡಿದ್ರಾ ಜಿಟಿಡಿ!
ಆಪರೇಷನ್ ಜೆಡಿಎಸ್ ಮುಂದುವರೆಸಿರುವ ಜಿ.ಟಿ.ದೇವೆಗೌಡ ಇದೀಗ ಹಿಂದುಳಿದ ವರ್ಗದವರ ಮತಗಳನ್ನು ಸೆಳೆಯಲು ತಂತ್ರ ರೂಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೂಲ ಕಾಂಗ್ರೆಸಿಗರಿಗೆ ಬಲೆ ಬೀಸಿರುವ ಜಿಟಿಡಿ ಬಸವನಪುರ ಗ್ರಾಮದಲ್ಲಿ ನೂರಾರು ಮಂಡಿ ಕಾಂಗ್ರೆಸಿಗರನ್ನು ಜೆಡಿಎಸ್ ಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.

ಹಿಂದುಳಿದ ವರ್ಗಕ್ಕೆ ಸೇರಿದ ಎಳವರ ಸಮುದಾಯದ ಮತಗಳು ಹೆಚ್ಚಾಗಿರುವ ಬಸವನ ಪುರದಲ್ಲಿ ಕಾಂಗ್ರೆಸ್ ಗ್ರಾಮಪಂಚಾಯಿತಿ ಮಾಜಿ ಸದಸ್ಯ ಯಜಮಾನ್ ಪೆದ್ದಮುದ್ದಯ್ಯ, ಯಜಮಾನ್ ತಿಮ್ಮಯ್ಯ, ಗುರುಸ್ವಾಮಿ,  ವೆಂಕಟೇಶ್, ಗೋವಿಂದ, ಮಹದೇವಣ್ಣ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಶಾಸಕ ಜಿ.ಟಿ.ದೇವೆಗೌಡ ನೇತೃತ್ವದಲ್ಲಿ ಜೆಡಿಎಸ್ ಸೇರ್ಪಡೆಗೊಂಡಿದ್ದು ಈ ಬೆಳವಣಿಗೆ ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಒಕ್ಕಲಿಗರ ಮತವನ್ನು ಮಾತ್ರವಲ್ಲದೆ, ಹಿಂದುಳಿದ ವರ್ಗಗಳ ಮತ ಸೆಳೆಯಲು ಮುಂದಾಗಿರುವ ಜೆಡಿಎಸ್ ಗೆ ಈ ಆಪರೇಷನ್ ಜೆಡಿಎಸ್ ಸಹಕಾರಿಯಾಗಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

Trending News