ದಲಿತ ಹುಡುಗನನ್ನು ಪ್ರೀತಿಸಿದ್ದಕ್ಕೆ ಮಗಳಿಗೆ ವಿಷ ಉಣಿಸಿದ ಪೋಷಕರು!

   

Last Updated : Mar 2, 2018, 04:58 PM IST
ದಲಿತ ಹುಡುಗನನ್ನು ಪ್ರೀತಿಸಿದ್ದಕ್ಕೆ ಮಗಳಿಗೆ ವಿಷ ಉಣಿಸಿದ ಪೋಷಕರು! title=

ಬೆಂಗಳೂರು: ದಲಿತ ಹುಡುಗನನ್ನು ಮಗಳು ಪ್ರೀತಿಸಿದಳು ಎನ್ನುವ ಕಾರಣಕ್ಕಾಗಿ ಪೋಷಕರೇ ಮಗಳಿಗೆ ವಿಷ ಉಣಿಸಿರುವ ಆಘಾತಕಾರಿ ಘಟನೆ ಮೈಸೂರು ಜಿಲ್ಲೆಯ ಗೊಲ್ಲನಬೀಡು ಗ್ರಾಮದಲ್ಲಿ ನಡೆದಿದೆ.ಮೃತಪಟ್ಟ ಹುಡುಗಿಯನ್ನು ಸುಷ್ಮಾ ಎಂದು ಗುರುತಿಸಲಾಗಿದ್ದು, ಒಕ್ಕಲಿಗ ಸಮುದಾಯದ ಕುಮಾರ್ ಮತ್ತು ಜಯಂತಿ ಎನ್ನುವ ಪೋಷಕರ ಮಗಳಾದ ಈಕೆ, ಎಚ್,ಡಿ ಕೋಟೆಯ ಆಲನಹಳ್ಳಿ ಗ್ರಾಮದ ಉಮೇಶ ಎನ್ನುವ ದಲಿತ ಯುವಕನನ್ನು ಪ್ರೀತಿಸಿದ್ದಳು ಎಂದು ತಿಳಿದುಬಂದಿದೆ. 

ಸುಷ್ಮಾಳ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಪೋಷಕರು ತಮ್ಮದೇ ಸಮುದಾಯದ  ಹುಡುಗನನ್ನು ಮದುವೆಯಾಗಲು ಒತ್ತಾಯಿಸಿದ್ದರು ಎಂದು ಹೇಳಲಾಗಿದೆ.ಆದರೆ ಇದಕ್ಕೆ ಒಪ್ಪದ ಸುಷ್ಮಾಗೆ ಫೆ.21 ರಂದು ಕಿತ್ತಳೆ ಹಣ್ಣಿನ ಜ್ಯೂಸ್ ನಲ್ಲಿ ವಿಷ ಬೆರೆಸಿದ್ದಾರೆ. ಅವಳನ್ನು ಆಸ್ಪತ್ರೆಗೆ ಕರೆದೊಯ್ಯುವ ಯಾವುದೇ ಕರುಣೆ ತೋರಿಸಿದ್ದರ ಫಲವಾಗಿ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ .

ನಂತರ ಸುಷ್ಮಾ ಊರಿನಲ್ಲಿ ಕಾಣದಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ ಗ್ರಾಮಸ್ತರು ಪೊಲೀಸರ ಗಮನಕ್ಕೆ ಈ ವಿಷಯವನ್ನು ತಂದಿದ್ದಾರೆ. ನಂತರ ಸುಷ್ಮಾ ಮನೆಗೆ ಪೊಲೀಸರು  ಭೇಟಿ ನೀಡಿದಾಗ ದಲಿತ ಯುವಕನನ್ನ್ನು ಪ್ರೀತಿಸಿದ್ದಕ್ಕಾಗಿ ಅವಳಿಗೆ ವಿಷ ಉಣಿಸಲಾಗಿದೆ ಎನ್ನುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. 

Trending News