ಹೊಸಪೇಟೆ ಹೈಟೆಕ್ ವೇಶ್ಯಾವಟಿಕೆ ಜಾಲ ಭೇದಿಸಿದ ಪೊಲೀಸರು

 ವಿಜಯನಗರ ಜಿಲ್ಲಾ ಕೇಂದ್ರ ಸ್ಥಾನ ಹೊಸಪೇಟೆಯ ಹೃದಯಭಾಗದಲ್ಲಿರೋ ಲಾಡ್ಜ್ ನಲ್ಲಿ ಹೈಟೆಕ್ ವೇಶ್ಯಾವಾಟಿಕೆ ಜಾಲವನ್ನು ವಿಜಯನಗರ ಪೊಲೀಸರು ಮತ್ತು ಮೈಸೂರಿನ ಒಡನಾಡಿ ಸೇವಾ ಸಂಸ್ಥೆ ಬಯಲು ಮಾಡಿದೆ. ಈ ಕುರಿತು ಒಂದು ಸ್ಟೋರಿಯನ್ನು ನೋಡೋಣ ಬನ್ನಿ....!

Written by - Zee Kannada News Desk | Last Updated : Jan 12, 2024, 11:13 PM IST
  • ಹೊಸಪೇಟೆಯ ರಾಣಿಪೇಟೆಯಲ್ಲಿರೋ ವೆಂಕಟೇಶ್ವರ ಲಾಡ್ಜ್ ನಲ್ಲಿ ಹೈಟೆಕ್ ಜಾಲ
  • ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ದಾಳಿ
  • ದಾಳಿಯಲ್ಲಿ 10 ಜನ ಪುರುಷರು ವಶಕ್ಕೆ ಪಡೆದ ಪೋಲೀಸರು
ಹೊಸಪೇಟೆ ಹೈಟೆಕ್ ವೇಶ್ಯಾವಟಿಕೆ ಜಾಲ ಭೇದಿಸಿದ ಪೊಲೀಸರು title=
ಸಾಂಧರ್ಭಿಕ ಚಿತ್ರ

ಬಳ್ಳಾರಿ/ವಿಜಯನಗರ: ವಿಜಯನಗರ ಜಿಲ್ಲಾ ಕೇಂದ್ರ ಸ್ಥಾನ ಹೊಸಪೇಟೆಯ ಹೃದಯಭಾಗದಲ್ಲಿರೋ ಲಾಡ್ಜ್ ನಲ್ಲಿ ಹೈಟೆಕ್ ವೇಶ್ಯಾವಾಟಿಕೆ ಜಾಲವನ್ನು ವಿಜಯನಗರ ಪೊಲೀಸರು ಮತ್ತು ಮೈಸೂರಿನ ಒಡನಾಡಿ ಸೇವಾ ಸಂಸ್ಥೆ ಬಯಲು ಮಾಡಿದೆ. ಈ ಕುರಿತು ಒಂದು ಸ್ಟೋರಿಯನ್ನು ನೋಡೋಣ ಬನ್ನಿ....!

ಇದನ್ನೂ ಓದಿ: ಮೂರು ಡಿಸಿಎಂ ವಿಚಾರವಾಗಿ ಎಐಸಿಸಿ ಅಧ್ಯಕ್ಷರು ಸ್ಪಷ್ಟ ಸಂದೇಶ ರವಾನಿಸಿದ್ದಾರೆ: ಡಿಸಿಎಂ ಡಿ.ಕೆ. ಶಿವಕುಮಾರ್

ಒಂದೆಡೆ ಲಾಡ್ಜ್ ನಿಂದ ಯುವತಿಯರನ್ನು ತೆಗೆಯುತ್ತಿರೋ ದೃಶ್ಯ.. ಇನ್ನೊಂದು ಕಡೆ ರಾಶಿ- ರಾಶಿ ಕಾಂಡೋಮ್ ಗಳ ಬಿದ್ದಿರೋ ದೃಶ್ಯ, ಸೆಕ್ಸ್ ಗೆ ಬಳಸಲು ಬೇಕಾಗಿರೋ ಔಷಧಿಗಳು, ಮಾತ್ರೆಗಳು, ಕ್ರೀಮ್  ಬಿದ್ದಿರೋ ದೃಶ್ಯಗಳು, ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು, ಹೊಸಪೇಟೆಯ ವೆಂಕಟೇಶ್ವರ ಲಾಡ್ಜ್ ನಲ್ಲಿ, ಹೌದು, ಹೊಸಪೇಟೆಯ ಲಾಡ್ಜ್ ನಲ್ಲಿ ನಡೆಯುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ ಜಾಲದ ಮೇಲೆ ಪೊಲೀಸರು- ಮೈಸೂರಿನ ಒಡನಾಡಿ ಸಂಸ್ಥೆ ದಾಳಿ ಮಾಡಿದೆ. ದಾಳಿ ಮಾಡಿದ ವೇಳೆ ಬೆಚ್ಚಿಬಿಳಿಸೋ ಅಂಶಗಳು ಬೆಳಕಿಗೆ ಬಂದಿವೆ. 

ಹೈಟೆಕ್ ವೇಶ್ಯಾವಾಟಿಕೆ ಧಂದೆಯ ಪಿನ್ ಟು ಪಿನ್ ಮಾಹಿತಿ ನಾವು ಹೇಳ್ತಿವಿ.ಹೊಸಪೇಟೆಯ ರಾಣಿಪೇಟೆಯಲ್ಲಿರೋ ವೆಂಕಟೇಶ್ವರ ಲಾಡ್ಜ್ ನ ಮೇಲೆ ದಾಳಿ ಮಾಡಿದಾಗ, 4 ಜನ ಸಂತ್ರಸ್ಥೆಯರ ರಕ್ಷಣೆ ಮಾಡಿ, 10 ಜನ ಪುರುಷರನ್ನ ಬಂಧಿಸಿದ್ದಾರೆ. ಲಾಡ್ಜ್ ನ ರಿಷಿಪ್ಷನ್ ಕೌಂಟರ್ ನ ಕ್ಯಾಶಿಯರ್ ಕಾಲಿನಲ್ಲೇ ಕಾಲಿಂಗ್ ಬೆಲ್ ಇರ್ತದೆ. ರಿಷಿಪ್ಷನ್ ಪೊಲೀಸರು, ತನಿಖಾ ಅಧಿಕಾರಿಗಳು ಬಂದಿದ್ದು ಗೊತ್ತಾದ ಕೂಡಲೇ ಕಾಲಿಂದ ಕಾಲಿಂಗ್ ಬೆಲ್ ಒತ್ತಿದ್ರೆ, ನಾಲ್ಕನೇ ಮಹಡಿಯಲ್ಲಿ ದೇವರ ನಾಮ ಬರ್ತದೆ. ದೇವರ ನಾಮ ಬಾರಿಸ್ತಿದ್ದಂತೆ ದಂದೆಕೋರರು, ವೇಶ್ಯಾವಟಿಕೆಯಲ್ಲಿ ತೊಡಗಿದವರು ಅಲರ್ಟ್ ಆಗಿ, ಮೇಲ್ಬಾಗದಲ್ಲಿ ಓಡಿಹೋಗೋ ಮಾಸ್ಟರ್ ಪ್ಲಾನ್ ಗಳನ್ನ ಮಾಡ್ಕೊಂಡಿದ್ದಾರೆ.ಸ್ಟೋರ್ ರೂಂ ಜಾಗದಲ್ಲಿ ಉಸಿರುಗಟ್ಟುವ ರೀತಿಯಲ್ಲಿ ಚಿಕ್ಕ ಕೋಣೆಯನ್ನ ನಿರ್ಮಾಣ ಮಾಡಿದ್ದು, ವೇಶ್ಯಾವಟಿಕೆಯಲ್ಲಿ ತೊಡಗಿದ ಸಂತ್ರಸ್ತ ಯುವತಿಯನ್ನ ಬಚ್ಚಿಡುತ್ತಿದ್ರು ಅನ್ನೋ ಸಂಗತಿ ಬಯಲಾಗಿದೆ. ಇದು ಇಡೀ ವಿಜಯನಗರ ಜಿಲ್ಲೆಯ ಜನರನ್ನೇ ದಂಗಾಗಿಸಿದೆ.

ಇದನ್ನೂ ಓದಿ: ನಿರುದ್ಯೋಗಿಗಳಿಗೆ ಗುಡ್ ನ್ಯೂಸ್: ಶೀಘ್ರವೇ 5,151 ಸರ್ಕಾರಿ ಹುದ್ದೆಗಳ ಭರ್ತಿ

ಪೊಲೀಸರು, ಒಡನಾಡಿ ತಂಡದವರು ದಾಳಿ ಮಾಡಿದಾಗ ವೆಂಕಟೇಶ್ವರ ಲಾಡ್ಜ್ ನಲ್ಲಿ ರಾಶಿ, ರಾಶಿ ಕಾಂಡೋಮ್ ಗಳು, ರೂಂಗಳಲ್ಲಿ ಮೆಡಿಕಲ್ ವಸ್ತುಗಳು, ಮುಲಾಮು, ಕೆಲವು ಉದ್ರೇಕಕ್ಕೆ ಬಳಸುವ ಮಾತ್ರೆಗಳು, ಮಸಾಜ್ ಆಯಿಲ್ ರೂಂಗಳಲ್ಲಿ ಪತ್ತೆಯಾಗಿವೆ. ಸುಮಾರು ವರ್ಷಗಳಿಂದಲೂ ನಡೆಯುತ್ತಿರೋ ಹೈಟೆಕ್ ವೇಶ್ಯಾವಾಟಿಕೆ ಧಂದೆ ಬಯಲು ಮಾಡಿದ್ದಾರೆ. ವಿಕಲಚೇತನೇ, ಅಪ್ರಾಪ್ತೆಯರನ್ನೂ ಸಹ ಈ ಧಂದೆಗೆ ಬಳಕೆ ಮಾಡಿಕೊಳ್ಳುತ್ತಿದ್ದರಂತೆ. ಈ ಹಿಂದೆಯೂ ವಿಜಯನಗರ ಜಿಲ್ಲೆಯ ಪೊಲೀಸರು ರೈಡ್ ಮಾಡಿದ್ದರು. ಲಾಡ್ಜ್ ನಡೆಸುವವರು ಕಳೆದ ಎರಡು ತಿಂಗಳ ಹಿಂದಷ್ಟೇ ಜೈಲಿಗೆ ಹೋಗಿ ಬಂದಿದ್ದನಂತೆ. ಆದ್ರೂ ಬುದ್ಧಿಕಲಿಯದೇ ಲಾಡ್ಜ್ ಮಾಲೀಕರು ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದ ಅನ್ನೋ ಆಘಾತಕಾರಿ ಅಂಶ ಹೊರಬಿದ್ದಿದೆ. ಸದ್ಯ ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆಸಿದ್ದಾರೆ. ಅದೇನೆ ಇರಲಿ ಅಂಗವಿಕಲರನ್ನು, ಅಪ್ರಾಪ್ತರನ್ನೂ ಬಿಡದ ರಾಕ್ಷಸರು ತಮ್ಮ ಲಾಭಕ್ಕಾಗಿ ದಂದೆಗೆ ಇಳಿಸಿರೋದು ನಿಜಕ್ಕೂ ಸಮಾಜ ತಲೆತಗ್ಗಿಸುವ ಸಂಗತಿಯೇ ಸರಿ. ಇಂತಹ ಕೃರಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎನ್ನುವುದು ಸಾರ್ವಜನಿಕರ ಆಶಯವಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

     
 

Trending News