ನೇಹಾ ಪ್ರಕರಣ : ರಾಜಕೀಯ ನಷ್ಟ ತುಂಬಿಕೊಳ್ಳಲು ಸಿಎಂ ಸಾಂತ್ವನದ ಡ್ರಾಮಾ-ಪ್ರಹ್ಲಾದ್ ಜೋಶಿ

ನೇಹಾ ಹತ್ಯೆ ಬಗ್ಗೆ ಹಳ್ಳಿ ಹಳ್ಳಿಗಳಲ್ಲಿ ಪ್ರತಿ ಮನೆಯ ಮಾತಾಗಿದೆ. ಸರ್ಕಾರದ ನಡೆ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.ಮತದಾರರು ತಿರುಗಿ ಬೀಳೋ ಭಯದಿಂದ ಈಗ ಕಾಂಗ್ರೆಸ್ ಸಾಂತ್ವನದ ನಾಟಕ ವಾಡುತ್ತಿದೆ ಎಂದು ಸಚಿವ ಜೋಶಿ ಟೀಕಿಸಿದರು. 

Written by - Ranjitha R K | Last Updated : Apr 24, 2024, 12:46 PM IST
  • ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪ
  • ರಾಜಕೀಯ ಮಾಡುತ್ತಿರುವುದು ನಾವಲ್ಲ ಕಾಂಗ್ರೆಸ್ - ಜೋಶಿ ಕಿಡಿ
  • ಸಿಎಂಗೆ ನಿಜವಾದ ಕಾಳಜಿಯಿಲ್ಲ - ಪ್ರಹ್ಲಾದ್ ಜೋಶಿ
ನೇಹಾ ಪ್ರಕರಣ : ರಾಜಕೀಯ ನಷ್ಟ ತುಂಬಿಕೊಳ್ಳಲು ಸಿಎಂ ಸಾಂತ್ವನದ ಡ್ರಾಮಾ-ಪ್ರಹ್ಲಾದ್ ಜೋಶಿ   title=

ಹುಬ್ಬಳ್ಳಿ : ನೇಹಾ ಹತ್ಯೆ ಪ್ರಕರಣದಲ್ಲಿ ರಾಜಕೀಯವಾಗಿ ಆಗುತ್ತಿರುವ ನಷ್ಟ ತುಂಬಿಕೊಳ್ಳಲು ಸಿಎಂ ಸಾಂತ್ವನದ ನಾಟಕವಾಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.ನೇಹಾ ಹತ್ಯೆ ನಡೆದು ನಾಲ್ಕಾರು ದಿನಗಳ ಬಳಿಕ ಕಾಂಗ್ರೆಸ್ ಅನುಕಂಪ ತೋರುತ್ತಿದೆ ಎಂದು ಲೇವಡಿ ಮಾಡಿದರು.

ಸಿಎಂಗೆ ನಿಜವಾದ ಕಾಳಜಿಯಿಲ್ಲ: 
ಸಿಎಂ ಸಿದ್ದರಾಮಯ್ಯ ಅವರಿಗೆ ನೇಹಾ ಕುಟುಂಬದ ಮೇಲೆ ನಿಜವಾದ ಕಾಳಜಿಯಿಲ್ಲ.ಇದ್ದಿದ್ದರೆ ಘಟನೆ ನಡೆದ ದಿನವೇ ನೇರವಾಗಿ ಕಾರ್ಪೋ ರೇಟರ್ ನಿರಂಜನ್ ಅವರಿಗೆ ಕರೆ ಮಾಡಿ ಸಾಂತ್ವನ, ಧೈರ್ಯ ನೀಡಿರುತ್ತಿದ್ದರು ಎಂದು ಹೇಳಿದರು. ನೇಹಾ ಮನೆಗೆ ಸಚಿವ ಸಂತೋಷ ಲಾಡ್, ಲಕ್ಷ್ಮಿ ಹೆಬ್ಬಾಳ್ಕರ್ ಭೇಟಿ ನೀಡಿದಾಗಲೇ ಸಿಎಂ ಫೋನ್ ಅಲ್ಲಿ ಮಾತನಾಡಬಹುದಿತ್ತು. ಆದರೆ,ಹೆಚ್ ಕೆ ಪಾಟೀಲ್ ಅವರನ್ನು ಕಳಿಸಿ,ತಾವು ಫೋನ್ ಅಲ್ಲಿ ಸಾಂತ್ವನ ಹೇಳಬೇಕಿತ್ತೆ? ಎಂದು ಪ್ರಶ್ನಿಸಿದರು.

ಇದನ್ನೂ ಓದಿ : LokSabha Elections: 14 ಕ್ಷೇತ್ರದಲ್ಲಿ ಬಹಿರಂಗ ಪ್ರಚಾರಕ್ಕೆ ತೆರೆ, ಇಂದು, ನಾಳೆ ಮನೆಮನೆ ಪ್ರಚಾರ

ಮತದಾರರು ತಿರುಗಿ ಬೀಳೋ ಭಯ: 
ನೇಹಾ ಹತ್ಯೆ ಬಗ್ಗೆ ಹಳ್ಳಿ ಹಳ್ಳಿಗಳಲ್ಲಿ ಪ್ರತಿ ಮನೆಯ ಮಾತಾಗಿದೆ. ಸರ್ಕಾರದ ನಡೆ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.ಮತದಾರರು ತಿರುಗಿ ಬೀಳೋ ಭಯದಿಂದ ಈಗ ಕಾಂಗ್ರೆಸ್ ಸಾಂತ್ವನದ ನಾಟಕ ವಾಡುತ್ತಿದೆ ಎಂದು ಸಚಿವ ಜೋಶಿ ಟೀಕಿಸಿದರು. 

ಯಾರಿಗೇ ಅನ್ಯಾಯವಾದರು ಧ್ವನಿ ಎತ್ತುತ್ತೇನೆ: 
ಹಿಂದು - ಮುಸ್ಲಿಂ ಅಂತಲ್ಲ, ಎಲ್ಲಿ ಯಾರಿಗೇ ಅನ್ಯಾಯವಾದರೂ ಧ್ವನಿ ಎತ್ತುತ್ತೇನೆ. ನನ್ನ ಕ್ಷೇತ್ರದಲ್ಲೇ ಮಹಿಳೆಯರಿಗೆ ಅನ್ಯಾಯ ನಡೆಯುತ್ತಿದ್ದರೆ ಸುಮ್ಮನಿರಬೇಕಿತ್ತೆ? ನೇಹಾ ಹತ್ಯೆ ಪ್ರಕರಣದಲ್ಲಿ ರಾಜಕಾರಣ ಮಾಡಿಲ್ಲ. ಬದಲಾಗಿ ನ್ಯಾಯ ದಕ್ಕಿಸಿ ಕೊಡುವ ಪ್ರಯತ್ನ ಮಾಡಿದ್ದೇವಷ್ಟೇ ಎಂದು ಕೇಂದ್ರ ಸಚಿವ ಜೋಶಿ  ಹೇಳಿದರು. 

ಇದನ್ನೂ ಓದಿ : ಠೇವಣಿ ಹಣ ಹಿಂದಿರುಗಿಸದ ಅರ್ಬನ್ ಕ್ರೆಡಿಟ್ ಸೊಸೈಟಿಗೆ ಪರಿಹಾರ ನೀಡಲು ಆದೇಶ 

ಹಿಂದೂಗಳ ಹತ್ಯೆ ನಡೆದರೆ ಧ್ವನಿ ಎತ್ತಬಾರದೆ?:
ರಾಜ್ಯದಲ್ಲಿ ಬಿಜೆಪಿ, ಹಿಂದೂಗಳ ಕೊಲೆ, ಹೆಣ್ಣು ಮಕ್ಕಳ ಮೇಲೆ ಹಲ್ಲೆ ನಡೆದರೆ ಯಾರೂ ಧ್ವನಿ ಎತ್ತಬಾರದೆ? ಮತ ಬ್ಯಾಂಕ್ ಗಾಗಿ ಕಾಂಗ್ರೆಸ್ ರಾಜಕಾರಣ ಮಾಡುತ್ತುತ್ತಿದ್ದು, ಬಿಜೆಪಿ ಮೇಲೆ ಆರೋಪ ಹೊರಿಸುತ್ತಿದೆ ಎಂದು ಜೋಶಿ ಆಕ್ರೋಶ ಹೊರ ಹಾಕಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News