ಜೀವನ್ಮರಣದ ಹೋರಾಟದಿಂದ ಬದುಕಿ ಬಂದ ಸಾತ್ವಿಕ್ : ಸಾವಿರಾರು ಜನರಿಂದ ಹರ್ಷೋದ್ಘಾರ

ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಸಾತ್ವಿಕ್ ಎಂಬ ಬಾಲಕ ಕೊಳವೆ ಬಾವಿಗೆ ಬಿದ್ದಿರುವ ಘಟನೆ ನಡೆದಿತ್ತು ಸತತ 21 ಗಂಟೆಗಳ ಜೀವನ್ಮರಣದ ಹೋರಾಟ ಗೆದ್ದು, ಸುರಕ್ಷಿತವಾಗಿ ಬಾಲಕ ಹೊರಬಂದಿದ್ದಾನೆ. 

Written by - Zee Kannada News Desk | Last Updated : Apr 4, 2024, 04:42 PM IST
  • 21 ಗಂಟೆಗಳಿಗೂ ಹೆಚ್ಚು ಕಾಲ ಕೊಳವೆ ಬಾವಿಯಲ್ಲಿ 1 ವರ್ಷ 1 ತಿಂಗಳ ಬಾಲಕ ಸಾತ್ವಿಕ್ ಬದುಕಿ ಬಂದಿರುವುದೇ ಪವಾಡವೆನ್ನುವಂತಾಗಿದೆ.
  • ಎಸ್ ಡಿ ಆರ್ ಹಾಗೂ ಎನ್ ಡಿ ಆರ್ , ಅಗ್ನಿ ಶಾಮಕ ಹಾಗೂ ಪೊಲೀಸರು 21 ಗಂಟೆಗಳ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ಮಗು ಸುರಕ್ಷಿತವಾಗಿ ಬದುಕುಳಿದು ಬಂದಿದೆ.
  • ಸತತ 21 ಗಂಟೆಗಳ ಜೀವನ್ಮರಣದ ಹೋರಾಟ ಗೆದ್ದು, ಸುರಕ್ಷಿತವಾಗಿ ಬಾಲಕ ಹೊರಬಂದಿದ್ದಾನೆ.
ಜೀವನ್ಮರಣದ ಹೋರಾಟದಿಂದ ಬದುಕಿ ಬಂದ ಸಾತ್ವಿಕ್ : ಸಾವಿರಾರು ಜನರಿಂದ ಹರ್ಷೋದ್ಘಾರ title=

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ತೋಟದ ಮನೆಯಲ್ಲಿರುವ ಸತೀಶ್ ಮುಜಗೊಂಡ ಅವರ ಪುತ್ರ ಸಾತ್ವಿಕ್ ಮುಜಗೊಂಡ ನಿನ್ನೆ ಸಂಜೆ 5.30ರ ಸುಮಾರಿಗೆ ಕೊಳವೆ ಬಾವಿಗೆ ಬಿದ್ದಿದ್ದು , ಸತತವಾಗಿ ೨೧ ಗಂಟೆಗಳಿಂದ ಎಸ್ ಡಿ ಆರ್ ಹಾಗೂ ಎನ್ ಡಿ ಆರ್ ಎಫ್  ತಂಡ  ಪರಿಶ್ರಮ ಪಟ್ಟು, ಮಗುವನ್ನು ಬದುಕುಳಿಸುವಲ್ಲಿ ಸಫಲವಾಗಿದ್ದಾರೆ. 

ಇದನ್ನು ಓದಿ : ಸೂಪರ್‌ ಸ್ಟಾರ್‌ ನಟ ಅಜಿತ್ ಕುಮಾರ್‌​ ಕಾರು ಭೀಕರ ಅಪಘಾತ..! ಇನ್ನೊಬ್ಬ ನಟನ ಕತ್ತಿಗೆ ಗಾಯ..

ಮಂಗಳವಾರ ತೋಟದಲ್ಲಿ ಹಾಕಿದ್ದ ಬೋರ್ ವೆಲ್ ನಲ್ಲಿ ಮಗು ಬುಧವಾರ ಸಂಜೆ ಆಟವಾಡುತ್ತ ಆಯಾ ತಪ್ಪಿ ಮಗು ಕೊಳವೆ ಬಾವಿಗೆ ಬಿದ್ದಿದೆ. ಆ ಸಂದರ್ಭದಲ್ಲಿ ಮನೆಯಲ್ಲಿ ಮಗುವಿನ ತಾಯಿ ಮಾತ್ರ ಇದ್ದರು ಎಂದು ತಿಳಿದು ಬಂದಿದೆ. ಸಂಜೆ ಆಟವಾಡುತ್ತ ಹೋಗಿದ್ದ ಮಗು ಆಯತಪ್ಪಿ ಬಿದ್ದಿತ್ತು. ಎಸ್ ಡಿ ಆರ್ ಹಾಗೂ ಎನ್ ಡಿ ಆರ್ , ಅಗ್ನಿ ಶಾಮಕ ಹಾಗೂ ಪೊಲೀಸರು 21 ಗಂಟೆಗಳ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ಮಗು ಸುರಕ್ಷಿತವಾಗಿ ಬದುಕುಳಿದು ಬಂದಿದೆ.  

ರಕ್ಷಣಾ ಕಾರ್ಯಚರಣೆಯ ಸಂದರ್ಭದಲ್ಲಿ ಇಂಡಿ ಶಾಸಕ ಯಶವಂತರಾಯ ಗೌಡ ಪಾಟೀಲ, ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೇರಿದಂತೆ ಇನ್ನಿತರ ಅಧಿಕಾರಗಳು ಇದ್ದು, ಸುರಕ್ಷಿತವಾಗಿ ಬದುಕಿ ಬಂದದ್ದು, ಎಲ್ಲರ ಮುಖದಲ್ಲಿ ಮಂದಹಾಸ ಮೂಡಿದೆ. 

21 ಗಂಟೆಗಳಿಗೂ ಹೆಚ್ಚು ಕಾಲ ಕೊಳವೆ ಬಾವಿಯಲ್ಲಿ 1 ವರ್ಷ 1 ತಿಂಗಳ ಬಾಲಕ ಸಾತ್ವಿಕ್ ಬದುಕಿ ಬಂದಿರುವುದೇ ಪವಾಡವೆನ್ನುವಂತಾಗಿದೆ.

ಇದನ್ನು ಓದಿ :  ತಂಡದ ಹ್ಯಾಟ್ರಿಕ್ ಗೆಲುವಿನ ಹುಮ್ಮಸ್ಸಿನಲ್ಲಿ ಪತ್ನಿ ಜೊತೆಗಿನ ಪೋಸ್ಟ್ ಹಂಚಿಕೊಂಡ RR ಕ್ಯಾಪ್ಟನ್

ಇದೀಗ ಮಗುವನ್ನು ಸುರಕ್ಷಿತವಾಗಿ ಕೊಳವೆ ಬಾವಿಯಿಂದ ಹೊರತೆಗೆದಿದ್ದು, ಸಾತ್ವಿಕ್ ನನ್ನು ಇಂಡಿ ತಾಲೂಕಾ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಮತ್ತು ಅಗತ್ಯ ಚಿಕಿತ್ಸೆಯನ್ನು  ನೀಡಲಾಗುತ್ತಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News