Siddaramaiah : ಯಡಿಯೂರಪ್ಪ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು!

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತೆ ಅಂತಾ ಅದರ ಅರ್ಥ ಎಂದು ಕಾಂಗ್ರೆಸ್ ತಿರುಕನ ಕನಸು ಕಾಣ್ತಿದೆ ಎಂಬ ಯಡಿಯೂರಪ್ಪ ಹೇಳಿಕೆ ವಿಚಾರವಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. 

Written by - Zee Kannada News Desk | Last Updated : Jul 24, 2022, 04:00 PM IST
  • ಯಡಿಯೂರಪ್ಪ ಯಾವ ಪಕ್ಷದವರು ರೀ?
  • ಕಾಂಗ್ರೆಸ್ ಪಾರ್ಟಿ ಬಿಜೆಪಿಯನ್ನ ನೋಡಿ ಶಿಸ್ತು ಕಲಿಯಲಿ
  • ಅಶೋಕ್, ಅರಗ‌ ಜ್ಞಾನೇಂದ್ರ ‌, ವಿಜಯೇಂದ್ರ ಅವರ‌ ಹೆಸರು ಕೇಳಿ ಬರ್ತಿದೆ
Siddaramaiah : ಯಡಿಯೂರಪ್ಪ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು! title=

ಬೆಂಗಳೂರು : ಯಡಿಯೂರಪ್ಪ ಯಾವ ಪಕ್ಷದವರು ರೀ? ಅವರು ಕಾಂಗ್ರೆಸ್ ಪರವಾಗಿ ಮಾತನಾಡ್ತಾರಾ ಕಾಂಗ್ರೆಸ್ ವಿರುದ್ಧವೇ ಮಾತಾಡಬೇಕಲ್ಲವಾ? ಯಡಿಯೂರಪ್ಪ ಅಂತರಾಳದಿಂದ ಹೇಳೋ ಮಾತಲ್ಲ ಅದು.. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತೆ ಅಂತಾ ಅದರ ಅರ್ಥ ಎಂದು ಕಾಂಗ್ರೆಸ್ ತಿರುಕನ ಕನಸು ಕಾಣ್ತಿದೆ ಎಂಬ ಯಡಿಯೂರಪ್ಪ ಹೇಳಿಕೆ ವಿಚಾರವಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. 

ಕಾಂಗ್ರೆಸ್ ಪಾರ್ಟಿ ಬಿಜೆಪಿಯನ್ನ ನೋಡಿ ಶಿಸ್ತು ಕಲಿಯಲಿ ಎಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಯತ್ನಾಳ್‌ ಎರಡೂವರೆ ಸಾವಿರ ಕೋಟಿ ಕೊಟ್ರೆ ಸಿಎಂ ಮಾಡ್ತಾರೆ
ಅಂದ್ರು ಅದು ಶಿಸ್ತಾ? ಯಡಿಯೂರಪ್ಪ ಮನೆಯಲ್ಲಿ ಭ್ರಷ್ಟಾಚಾರ ನಡೀತಿದೆ ಅಂದವರು ಯಾರು? ಯತ್ನಾಳ್ ಅವರೇ ಹೇಳಿದ್ದಾರೆ ಎಂದರು. 

ಇದನ್ನೂ ಓದಿ : Bangalore Crime : ದುಡಿದ ಸಂಬಳ ಕೇಳಿದ್ದಕ್ಕೆ ತಾಯಿ ಸಮಾನಳಾದ ವೃದ್ಧೆಗೆ ಒದ್ದ ಪಾಪಿ!

ಪಿಎಸ್ಐ  ಅಕ್ರಮ ನೇಮಕಾತಿ ವಿಚಾರದಲ್ಲಿ ವಿಜಯೇಂದ್ರ ಹೆಸರು ಪ್ರಸ್ತಾಪ ವಿಚಾರವಾಗಿ ಮಾತನಾಡಿದ ಅವರು, ಅಶೋಕ್, ಅರಗ‌ ಜ್ಞಾನೇಂದ್ರ ‌, ವಿಜಯೇಂದ್ರ ಅವರ‌ ಹೆಸರು ಕೇಳಿ ಬರ್ತಿದೆ. ತನಿಖೆಯಾಗಲಿ ಅಂತಾ ಹೇಳಿದ್ದೇನೆ ಅಷ್ಟೇ. ಈಶ್ವರಪ್ಪ‌ ಕೇಸ್ ಏನಾಯಿತು? ಕ್ಲೀನ್ ಚಿಟ್‌ ಅಂದ್ರೆ ಏನ್.. ಕೇಸ್ ಮುಚ್ಚಿ ಹಾಕಿದ್ರು‌ಅಂತಾ‌ ತಾನೆ..? ಪೊಲೀಸರು‌ ಬಿ ರಿಪೋರ್ಟ್ ಹಾಕಿದ್ದು, ಕೋರ್ಟ್‌ ನೀಡಿದ್ದಲ್ಲ. ಸ್ವತಃ ಸಂತೋಷ್ ಪಾಟೀಲ್‌ ಪತ್ನಿಯೇ ಆರೋಪ ಮಾಡಿದ್ದಾರೆ. ತನಿಖೆ ದಿಕ್ಕು ತಪ್ಪುತ್ತಿದೆ ಅಂತಾ ರಾಜ್ಯ ಪಾಲರಿಗೆ‌ ಪ‌ತ್ರ‌ ಬರೆದಿದ್ದಾರೆ. ಏನಾಯಿತು? ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News